ಮಂಗಳೂರಿನ ರೈಲ್ವೇ ಟ್ರಾಕ್ ನಲ್ಲಿ ಚೆನ್ನೈ ಪ್ರೇಮಿಗಳಿಂದ ಆತ್ಮ ಹತ್ಯೆ ಯತ್ನ

8:51 PM, Friday, July 12th, 2013
Share
1 Star2 Stars3 Stars4 Stars5 Stars
(4 rating, 6 votes)
Loading...

Chennai Lovers sucide atemptಮಂಗಳೂರು :  ಮಂಗಳೂರಿನ ಒಲ್ಡ್‌ಕೆಂಟ್ ಸಮೀಪದ ರೈಲ್ವೇ ಟ್ರಾಕ್ ನಲ್ಲಿ ಚೆನ್ನೈ ಮೂಲದ ಯುವಕ ಹಾಗೂ ಯುವತಿ ಆತ್ಮ ಹತ್ಯೆಗೆ ಯತ್ನಿಸಿದ ಘಟನೆ ಶುಕ್ರವಾರ ಮದ್ಯಾಹ್ನ ನಡೆದಿದೆ.

ಯುವಕ ಸುಮಾರು 24 ವರ್ಷ ಹಾಗೂ ಯುವತಿ ಸುಮಾರು 18 ವರ್ಷದ ಆಸುಪಾಸಿನವರಾಗಿದ್ದಾರೆ ಎಂದು ತಿಳಿದು ಬಂದಿದೆ. ಇವರಿಬ್ಬರ ದೇಹದ ಮೇಲೆ ಚಾಕುವಿನಿಂದ ಇರಿದ ಗಾಯದ ಗುರುತುಗಳು ಕಂಡು ಬಂದಿದ್ದು, ಇಬ್ಬರೂ ವಿಷ ಸೇವಿಸಿದ್ದರು ಎಂದು ಪೊಲೀಸರ ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ. ಇವರಿಬ್ಬರೂ ಪ್ರೀತಿಸುತ್ತಿದ್ದು ಆತ್ಮ ಹತ್ಯೆ ಗೆ ಕಾರಣ ತಿಳಿದು ಬಂದಿಲ್ಲ.

ಇಂದು ಮದ್ಯಾಹ್ನ ಈ ಇಬ್ಬರು ರೈಲ್ವೇ ಟ್ರ್ಯಾಕ್ ಮೇಲೆ ಅತ್ಮಹತೈಗೆ ಪ್ರಯತ್ನಿಸುತ್ತಿರುವುದನ್ನು ಕಂಡಂತಹ ಮಾವಲಿ ಎಕ್ಸ್‌ಪ್ರೆಸ್ ರೈಲಿನ ಚಾಲಕ ಕೂಡಲೇ ಸ್ಟೇಶನ್ ಮಾಸ್ಟರ್‌ಗೆ ಮಾಹಿತಿ ರವಾನಿಸಿದ್ದರು. ತಕ್ಷಣ ರೈಲ್ವೇ ಅಧಿಕಾರಿಗಳು ಸ್ಥಳಕ್ಕೆ ಬಂದಾಗ ರೈಲ್ವೇ ಟ್ರ್ಯಾಕ್ ಪಕ್ಕದಲ್ಲಿ ಪ್ರಜ್ನೆ ತಪ್ಪಿ ಬಿದ್ದಿರುವುದನ್ನು ಪತ್ತೆಹಚ್ಚಲಾಯಿತು.

ಯುವಕ ಹಾಗೂ ಯುವತಿ ಮೂಲತಃ ಚೆನೈಯವರಾಗಿದ್ದು, ಗುರುವಾರ ತಡ ರಾತ್ರಿ ಮಂಗಳೂರಿಗೆ ಬಂದಿರುವುದಾಗಿ ತಿಳಿಸಿದ್ದಾರೆ. ಯುವಕ-ಯುವತಿಯನ್ನು ನಗರದ ವೆನ್ ಲಾಕ್ ಅಸ್ಪತ್ರೆಗೆ ದಾಖಲಿಸಲಾಗಿದೆ.

ಪಾಂಡೇಶ್ವರ ಠಾಣಾ ಪೊಲೀಸರು ಘಟನಾ ಸ್ಥಳಕ್ಕೆ ಆಗಮಿಸಿ ತನಿಖೆ ಕೈಗೊಂಡಿದ್ದಾರೆ.

Chennai Lovers sucide atempt

Chennai Lovers sucide atempt

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English