[1]ನವದೆಹಲಿ: ಐಪಿಎಲ್ ಮ್ಯಾಚ್ಫಿಕ್ಸಿಂಗ್ ಮತ್ತು ಬೆಟ್ಟಿಂಗ್ ಹಗರಣದಲ್ಲಿ ಮಹೇಂದ್ರ ಸಿಂಗ್ ಧೋನಿ ಕೂಡಾ ಭಾಗಿಯಾಗಿದ್ದಾರೆ ಎಂದು ಬುಕ್ಕಿಯೊಬ್ಬರು ಆರೋಪಿಸಿದ್ದಾರೆ.
ಐಪಿಎಲ್ ಬೆಟ್ಟಿಂಗ್ ಹಗರಣದಲ್ಲಿ ಶ್ರೀನಿವಾಸನ್ ಅಳಿಯ ಗುರುನಾಥ್ ಮೇಯಪ್ಪನ್ ಆರೋಪಿ ಜತೆಗೆ ಅವರು ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್ಕೆ) ತಂಡದ ಭಾಗವೂ ಹೌದು ಎನ್ನುವುದು ಸಾಬೀತಾಗಿದೆ ಎಂದು ಸುಪ್ರೀಂಕೋರ್ಟ್ ನೇಮಿಸಿದ ನ್ಯಾ. ಮುಕುಲ್ ಮುದ್ಗಲ್ ನೇತೃತ್ವದ ತ್ರಿಸದಸ್ಯ ಸಮಿತಿ ಘೋಷಿಸಿದೆ .
ಐಪಿಎಲ್ ಮ್ಯಾಚ್ಫಿಕ್ಸಿಂಗ್ ಬಗ್ಗೆ ಪ್ರಸ್ತುತ ಸಮಿತಿ ಸೋಮವಾರ 170 ಪುಟಗಳ ಸುದೀರ್ಘ ವರದಿಯನ್ನು ಸಲ್ಲಿಸಿತ್ತು. ಅದರಲ್ಲಿ ಗುರುನಾಥ್ ಮೇಯಪ್ಪನ್ ಸಿಎಸ್ಕೆ ತಂಡದ ಸದಸ್ಯ ಎನ್ನುವುದು ಹಾಗು ಬೆಟ್ಟಿಂಗ್ ಮತ್ತು ತಂಡದ ಮಾಹಿತಿಯನ್ನು ಹೊರಗಿನವರಿಗೆ ನೀಡುತ್ತಿದ್ದುದ ಸಾಬೀತಾಗಿಗೆ ಎಂದು ಉಲ್ಲೇಖಿಸಲಾಗಿದೆ. ಅದೇ ವೇಳೆ ಭಾರತದ ಇಬ್ಬರು ಖ್ಯಾತ ಭಾರತೀಯ ಆಟಗಾರರು ಈ ಹಗರಣದಲ್ಲಿ ಭಾಗಿಯಾಗಿದ್ದಾರೆ ಎಂದು ಬಿಸಿಸಿಐ ಮಾಜಿ ಅಧ್ಯಕ್ಷ ಐ ಎಸ್ ಬಿಂದ್ರಾ ಹೇಳಿದ್ದಾರೆಂದು ಮುದ್ಗಲ್ ಹೇಳಿದ್ದರು.
ಆದಾಗ್ಯೂ, ಐಪಿಎಲ್ ಫಿಕ್ಸಿಂಗ್ ಹಗರಣದಲ್ಲಿ ಧೋನಿ ಮತ್ತು ಸುರೇಶ್ ರೈನಾ ಅವರ ಹೆಸರು ಕೇಳಿಬರುತ್ತಿದ್ದು ಸತ್ಯಾಂಶ ಬಯಲಾಗಬೇಕಾಗಿದೆ.