ಕಾರು ಕೆರೆಗೆ ಬಿದ್ದು ಯುವಕ ಮೃತ್ಯು-ಸಹೋದರ ಪಾರು

11:54 PM, Friday, January 22nd, 2016
Share
1 Star2 Stars3 Stars4 Stars5 Stars
(5 rating, 6 votes)
Loading...
Mulleria Accident

ಮುಳ್ಳೇರಿಯಾ: ಕಾರೊಂದು ಕೆರೆಗೆ ಬಿದ್ದು ಸಹೋದರರ ಪೈಕಿ ಓರ್ವ ಮೃತಪಟ್ಟು ಮತ್ತೋರ್ವ ಅದೃಷ್ಟವಶಾತ್ ಪಾರಾದ ಘಟನೆ ಶುಕ್ರವಾರ ಬೆಳಿಗ್ಗೆ ಬೆಳ್ಳೂರು ಸಮೀಪದ ಬಜ ಎಂಬಲ್ಲಿ ನಡೆದಿದೆ.

ಬಜ ಅಮರನಾಥ ರೈ ಯವರ ಪುತ್ರ ಸುಪ್ರೀತ್ ರೈ (33)ಮೃತಪಟ್ಟ ದುರ್ದೈವಿ.ಶುಕ್ರವಾರ ಬೆಳಿಗ್ಗೆ ಮನೆಯಂಗಳದಲ್ಲಿ ನಿಲ್ಲಿಸಲಾಗಿದ್ದ ಕಾರನ್ನು ಸಹೋದರ ಗುರು ಕಿರಣ ರೈ ಯನ್ನು ಕುಳ್ಳಿರಿಸಿ ಸ್ಟಾರ್ಟ್ ಮಾಡಿ ಮುಂದಕ್ಕೆ ಚಲಾಯಿಸುವಷ್ಟರಲ್ಲಿ ಅಂಗಳದಿಂದ 10ಮೀಟರ್ ದೂರದ ಕೆರೆಗೆ ಆಕಸ್ಮಿಕವಾಗಿ ಬಿದ್ದು ಅಪಘಾತ ನಡೆಯಿತು. ನೀರಲ್ಲಿ ಮುಳುಗಿದ ಕಾರನ್ನು ತಕ್ಷಣ ಸ್ಥಳೀಯರು ಮೇಲೆತ್ತಿದರು. ಗಂಭೀರ ಗಾಯಗೊಂಡಿದ್ದ ಸುಪ್ರೀತ ರೈ ಯನ್ನು ಆಸ್ಪತ್ರೆಗೆ ಕರೆದೊಯ್ಯುವ ಮಧ್ಯೆ ಮೃತಪಟ್ಟನು. ಗುರುಕಿರಣ ರೈ ಹೆಚ್ಚಿನ ಅಪಾಯಗಳಿಲ್ಲದೆ ಪಾರಾದನು.

ಮಂಗಳೂರಿನಲ್ಲಿ ವ್ಯಾಪಾರ ನಡೆಸುತ್ತಿದ್ದ ಸುಪ್ರೀತ ರೈ ತಂದೆ, ತಾಯಿ,ಪತ್ನಿ, ಇಬ್ಬರು ಪುತ್ರರು, ಮೂವರು ಸಹೋದರರನ್ನು ಅಗಲಿದ್ದಾರೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English