ಬಾವಿಯಲ್ಲಿ ಇಬ್ಬರು ಸಹೋದರರ ಮೃತ ದೇಹಗಳು ಪತ್ತೆ

12:33 PM, Saturday, October 8th, 2016
Share
1 Star2 Stars3 Stars4 Stars5 Stars
(No Ratings Yet)
Loading...

kasargodಕಾಸರಗೋಡು: ಕಳೆದ ಒಂದು ದಿನದಿಂದ ನಾಪತ್ತೆಯಾಗಿದ್ದ ಚೆರ್ವತ್ತೂರು ಚೀಮೇನಿ ಚೆಲುವಕ್ಕೋಡ್ ನ ಸತೀಶ್ (40) ಮತ್ತು ಸಹೋದರ ಸಜಿತ್ (36) ಮೃತದೇಹಗಳು ಗುರುವಾರ ರಾತ್ರಿ ಬಾವಿಯಲ್ಲಿ ಪತ್ತೆಯಾಗಿವೆ.

ಚೆರ್ವತ್ತೂರು ಚೀಮೇನಿ ಚೆಲುವಕ್ಕೋಡ್ ಮೂಲದ ಸತೀಶ್ ಬಸ್ ಚಾಲನೆ ಮಾಡುತ್ತಿದ್ದು. ಸಜಿತ್ ಲಾರಿ ಚಾಲಕನಾಗಿದ್ದ. ಇವರಿಬ್ಬರು ಕಳೆದು ಒಂದು ದಿನದಿಂದ ಕಾಣೆಯಾಗಿದ್ದರು. ಮನೆಯವರ ಹುಡುಕಾಟದಲ್ಲಿ ದಾರಿ ಮಧ್ಯೆ ಇರುವ ಬಾವಿಯಲ್ಲಿ ಇಬ್ಬರ ಮೃತ ದೇಹಗಳು ಪತ್ತೆಯಾಗಿದ್ದು. ಇವರ ಸಾವಿಗೆ ನಿಖರವಾದ ಕಾರಣಗಳು ತಿಳಿದು ಬಂದಿಲ್ಲ.

ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳ ಸಿಬ್ಬಂದಿ ಅವರು ಮೃತದೇಹಗಳನ್ನು ಮೇಲಕ್ಕೆತ್ತಿ ಮರಣೋತ್ತರ ಪರೀಕ್ಷೆಗಾಗಿ ಪರಿಯಾರಂ ವೈದ್ಯಕೀಯ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ.

ಬಾವಿ ಸಮೀಪ ವಾಚ್ , ಚಪ್ಪಲಿ, ಲುಂಗಿ ಪತ್ತೆಯಾಗಿದ್ದು. ಇವರ ಸಾವು ಆಕಸ್ಮಿಕವೋ ಅಥವಾ ಇನ್ಯಾವುದೇ ಕಾರಣದಿಂದ ಮೃತಪಟ್ಟಿದ್ದಾರೆಯೇ ಎಂಬ ಅನುಮಾನಗಳು ಹುಟ್ಟಿಕೊಂಡಿದ್ದು. ಪೊಲೀಸರು ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English