ಭಾವಿ ಪತ್ನಿ ಆತ್ಮಹತ್ಯೆ ಮಾಡುವ ಮೊದಲು ತಾನೊಬ್ಬ ಸಲಿಂಗಕಾಮಿ ಎಂದಿದ್ದ

12:55 PM, Thursday, February 16th, 2017
Share
1 Star2 Stars3 Stars4 Stars5 Stars
(No Ratings Yet)
Loading...

chandrashekar   ಮಂಗಳೂರು : ತನ್ನ ಭಾವಿ ಪತ್ನಿ ಆತ್ಮಹತ್ಯೆ ಮಾಡಿಕೊಂಡ  ಕೆಲವು ದಿನಗಳ ಅಂತರದಲ್ಲಿ ಮದುವೆಯಾಗ ಬೇಕಿದ್ದ ಯುವಕನು ನೇಣು ಬಿಗಿದು ಆತ್ಮ ಹತ್ಯೆ ಮಾಡಿಕೊಂಡ ಘಟನೆ ಕಾಸರಗೋಡಿನ ಚಲಿಯಾಂಗೋಡ್ ಎಂಬಲ್ಲಿ ನಡೆದಿದೆ.

ಚಂದ್ರಶೇಖರ್ (38) ಎಂಬಾತ ಆತ್ಮಹತ್ಯೆಗೆ ಶರಣಾದ ಯುವಕ.

ಮಂಗಳೂರಿನ ನಾಗುರಿಯ ಕೃಷ್ಣ ಎಂಬುವರ ಮಗಳು ನಂದಿತಾಗೆ ಕಾಸರಗೋಡಿನ ಚಂದ್ರಶೇಖರ್ ಜೊತೆ ಮದುವೆ ನಿಶ್ಚಯವಾಗಿತ್ತು. ಅಂದುಕೊಂಡಂತೆ ನಡೆದಿದ್ದರೆ ಫೆ.13 ರಂದು ಇವರಿಬ್ಬರು ಸಪ್ತಪದಿ ತುಳಿಯುತ್ತಿದ್ದರು. ಆದರೆ ಮದುವೆ ಇನ್ನೇನು ಐದು ದಿನ ಬಾಕಿ ಇದ್ದಂತೆ ನಂದಿತಾ ಅವಳಿಗೆ ಕಾಲ್ ಮಾಡಿದ ಚಂದ್ರಶೇಖರ್, ತಾನೊಬ್ಬ ಸಲಿಂಗಕಾಮಿ, ತನಗೆ ಮದುವೆ ಇಷ್ಟವಿಲ್ಲವೆಂದು ಹೇಳಿಬಿಟ್ಟ. ಮದುವೆಯ ಕನಸು ಕಾಣುತ್ತಿದ್ದ ನಂದಿತಾ ಅಘಾತಕ್ಕೆ ಒಳಗಾಗಿದ್ದಳು. ಆ ದಿನ ರಾತ್ರಿಯೇ ಅವಳು ನೇಣಿಗೆ ಶರಣಾಗಿದ್ದಳು.

ನಂದಿತಾ ಮೃತಪಟ್ಟ ಎರಡು ದಿನಗಳ ಬಳಿಕ ವಧುವಿನ ಮನೆಯವರು ಕಂಕನಾಡಿ ಠಾಣೆಯಲ್ಲಿ ಚಂದ್ರಶೇಖರ್ ವಿರುದ್ಧ ದೂರು ನೀಡಿದ್ದರು. ಆದರೆ, ಊರ ಪ್ರಮುಖರು ಸೇರಿ ಠಾಣೆಯಲ್ಲಿ ಪ್ರಕರಣವನ್ನು ರಾಜಿ ಪಂಚಾಯತಿಯಲ್ಲಿ ತೆಗೆದುಬಿಟ್ಟಿದ್ದರು ಎನ್ನಲಾಗಿದೆ.

ಇದಾದ ಬಳಿಕ ಚಂದ್ರಶೇಖರ್‌ ಅವರಿಗೆ ಅದೇನಾಯಿತೋ ಗೊತ್ತಿಲ್ಲ. ನ. 14ರಂದು ತಾನು ಚಮ್ನಾಡಿಗೆ ಹೋಗಿ ಬರುತ್ತೇನೆಂದು ಮನೆಬಿಟ್ಟು ಹೋದವನು ವಾಪಾಸ್ಸಾಗಲೇ ಇಲ್ಲ. ಮೊಬೈಲ್ ಕೂಡಾ ಸ್ವಿಚ್ ಆಫ್ ಆಗಿತ್ತು. ಮನೆಯವರು ಹುಡುಕಾಡಿದಾಗ ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿತ್ತು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English