[1]ಮಂಗಳೂರು : ಮೇ. 20 ರಂದು ವೆಂಕಟೇಶ್ ಗ್ರೂಪ್ ‘ಡಿ’ ನೌಕರ ಆರೋಗ್ಯ ಇಲಾಖೆ ಇವರು ನಿಯೋಜನೆ ಮೇರೆಗೆ 25 ವರ್ಷಗಳಿಂದ ಜಿಲ್ಲಾ ಪಂಚಾಯತ್ ಕಛೇರಿಯಲ್ಲಿ ಸೇವೆ ಸಲ್ಲಿಸಿದ್ದು, ಮೇ. 31 ರಂದು ನಿವೃತ್ತಿಯಾದರು. ಅವರನ್ನು ದ.ಕ ಜಿಲ್ಲಾ ಪಂಚಾಯತ್ ಕಛೇರಿಯಿಂದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಮಂಗಳೂರು ಇಲ್ಲಿಗೆ ಸೇವಾ ನಿವೃತ್ತಿಗಾಗಿ ವರ್ಗಾವಣೆ ಮಾಡಿದ್ದು, ಬೀಳ್ಕೊಡುಗೆ ಸಮಾರಂಭವನ್ನು ಕಛೇರಿಯಲ್ಲಿ ನೆರವೇರಿಸಲಾಯಿತು.
ಈ ಸಂದರ್ಭದಲ್ಲಿ ವೆಂಕಟೇಶ್ ಇವರಿಗೆ ಶಾಲು, ಹೂಹಾರ, ಹಣ್ಣು ಹಂಪಲು, ನೆನಪಿನ ಕಾಣಿಕೆ ನೀಡಿ ಸನ್ಮಾನಿಸಲಾಯಿತು. ಕರ್ನಾಟಕ ರಾಜ್ಯ ಸರ್ಕಾರಿ ವಾಹನ ಚಾಲಕರ ಕೇಂದ್ರ ಸಂಘ (ರಿ) ಬೆಂಗಳೂರು, ದ.ಕ ಜಿಲ್ಲಾ ಶಾಖೆಯ ಅಧ್ಯಕ್ಷರಾದ ದೇವದಾಸ್ ಮತ್ತು ಪ್ರಾಂಕಿ ಪ್ರಾನ್ಸಿಸ್ ಕುಟಿನ್ಹ, ಅಧ್ಯಕ್ಷರು, ದ.ಕ ಜಿಲ್ಲಾ ಸರಕಾರಿ ಗ್ರೂಫ್ ‘ಡಿ’ ನೌಕರರ ಸಂಘ (ರಿ) ದ.ಕ ಮಂಗಳೂರು ಮತ್ತು ಮುಖ್ಯ ಅತಿಥಿಗಳಾಗಿ ರಾಧಾಕೃಷ್ಣ ಶೆಟ್ಟಿ, ದಿವಾಕರ ಶೆಟ್ಟಿ, ಇಬ್ರಾಹಿಂ, ಕೇಶವ ಮೊೈಲಿ, ಧನಂಜಯ, ಗೋಪಾಲಕೃಷ್ಣ, ರಘು ಮಾಡೂರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ದ.ಕ ಜಿಲ್ಲಾ ಪಂಚಾಯತ್ನ ಸಿರಿಲ್ ರಾಬರ್ಟ್ ‘ಡಿ’ ಸೋಜಾ ನಿರೂಪಿಸಿದರು.