2018ನೇ ಸಾಲಿನ ‘ಸಂದೇಶ ಪ್ರಶಸ್ತಿ’ ಪ್ರಕಟ

4:16 PM, Wednesday, December 20th, 2017
Share
1 Star2 Stars3 Stars4 Stars5 Stars
(4 rating, 1 votes)
Loading...

sandesha-awardಮಂಗಳೂರು: ಸಂದೇಶ ಪ್ರತಿಷ್ಠಾನದ ವತಿಯಿಂದ ನೀಡಲಾಗುವ ಪ್ರಸಕ್ತ ಸಾಲಿನ ‘ಸಂದೇಶ ಪ್ರಶಸ್ತಿ-2018’ರ ಪುರಸ್ಕೃತರ ಹೆಸರು ಪ್ರಕಟಗೊಂಡಿದೆ.

ಸಂದೇಶ ಪ್ರತಿಷ್ಠಾನದ ಕಚೇರಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಈ ವಿಚಾರ ತಿಳಿಸಿದ ಆಯ್ಕೆ ಸಮಿತಿ ಅಧ್ಯಕ್ಷ ಡಾ. ನಾ ಡಿಸೋಜ, ಪ್ರಸಕ್ತ ಸಾಲಿನ ಪ್ರಶಸ್ತಿಗೆ ವಿಮರ್ಶಕ ಗಿರಡ್ಡಿ ಗೋವಿಂದರಾಜ್, ಕೊಂಕಣಿ ಸಾಹಿತಿ ಎಡಿನೆಟ್ಟೊ ಜೆಪ್ಪು, ಅಶೋಕ ಗುಡಿಗಾರ, ಎನ್.ಗುರುರಾಜ್, ಕೆ.ಗಾದಿಲಿಂಗಪ್ಪ, ವಿಲ್ಸನ್ ಒಲಿವೆರ ಹಾಗೂ ಟಿ.ರಾಜ ಆಯ್ಕೆಯಾಗಿದ್ದಾರೆ ಎಂದರು.

sandesha-award-2ಗಿರಡ್ಡಿ ಗೋವಿಂದರಾಜ್ – ಸಂದೇಶ ಕೊಂಕಣಿ ಕನ್ನಡ ಸಾಹಿತ್ಯ ಪ್ರಶಸ್ತಿ, ಎಡಿನೆಟ್ಟೊ ಜೆಪ್ಪು- ಸಂದೇಶ ಕೊಂಕಣಿ ಸಾಹಿತ್ಯ ಪ್ರಶಸ್ತಿ, ಅಶೋಕ ಗುಡಿಗಾರ- ಸಂದೇಶ ಕಲಾ ಪ್ರಶಸ್ತಿ, ಎನ್.ಗುರುರಾಜ್ – ಸಂದೇಶ ಮಾಧ್ಯಮ ಪ್ರಶಸ್ತಿ, ಕೆ.ಗಾದಿಲಿಂಗಪ್ಪ -ಸಂದೇಶ ಶಿಕ್ಷಣ ಪ್ರಶಸ್ತಿ, ವಿಲ್ಸನ್ ಒಲಿವೆರ -ಸಂದೇಶ ಕೊಂಕಣಿ ಸಂಗೀತ ಪ್ರಶಸ್ತಿ ಹಾಗೂ ಟಿ.ರಾಜ – ಸಂದೇಶ ವಿಶೇಷ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ ಎಂದವರು ವಿವರಿಸಿದರು.

ಜನವರಿ 13ರಂದು ಸಂಜೆ 5:30ಕ್ಕೆ ಸಂದೇಶ ಪ್ರತಿಷ್ಠಾನದ ಸಭಾಂಗಣದಲ್ಲಿ ನಡೆಯುವ ಸಮಾರಂಭದಲ್ಲಿ ಸಾಧಕರಿಗೆ ಪ್ರಶಸ್ತಿ ವಿತರಣೆ ಮಾಡಲಾಗುವುದು ಎಂದವರು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಪ್ರಶಸ್ತಿ ಆಯ್ಕೆ ಸಮಿತಿ ಸದಸ್ಯರಾದ ಡಾ.ನಾ.ದಾಮೋದರ ಶೆಟ್ಟಿ, ಚಂದ್ರಕಲಾ ನಂದಾವರ, ರಾಯ್ ಕ್ಯಾಸ್ಟಲಿನೋ, ಟೈಟಸ್ ನೊರನ್ಹೋ, ವಿಕ್ಟರ್ ವಿಜಯ್ ಲೋಬೊ, ವಿಕ್ಟರ್ ಕ್ರಾಸ್ತ ಉಪಸ್ಥಿತರಿದ್ದರು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English