ಮಹದಾಯಿ ವಿಚಾರದಲ್ಲಿ ಕಾಂಗ್ರೆಸ್‌ನಿಂದ ಮಹಾ ನಾಟಕ: ಶೆಟ್ಟರ್

4:25 PM, Saturday, December 30th, 2017
Share
1 Star2 Stars3 Stars4 Stars5 Stars
(5 rating, 1 votes)
Loading...

jagadish-shetterಹುಬ್ಬಳ್ಳಿ: ಮಹದಾಯಿ, ಕಳಸಾ ಬಂಡೂರಿ ಯೋಜನೆ ವಿಚಾರದಲ್ಲಿ ಕಾಂಗ್ರೆಸ್ ಮಹಾ ನಾಟಕ ಆಡುತ್ತಿದೆ ಎಂದು ಪ್ರತಿಪಕ್ಷ ನಾಯಕ‌ ಜಗದೀಶ್ ಶೆಟ್ಟರ್ ಆರೋಪಿಸಿದ್ದಾರೆ.

ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಳಸಾ ಬಂಡೂರಿ ಯೋಜನೆ ವಿಚಾರದಲ್ಲಿ ಕಾಂಗ್ರೆಸ್ ರಾಜಕೀಯ ಮಾಡುತ್ತಿದೆ. ಗೋವಾ ಸಿಎಂ ಮನವೊಲಿಸುವ ಮಾತನ್ನು ನಮಗೆ ಕೇಳಿದ್ದರು. ಹಾಗಾಗಿ ನಾವು ಗೋವಾ ಸಿಎಂ ಮನವೊಲಿಸಿ ಪತ್ರ ತಂದಿದ್ದೇವೆ. ಅದನ್ನೇ ನ್ಯಾಯಾಧೀಕರಣ ಮುಂದೆ ಹಾಜರಪಡಿಸಬೇಕಾಗಿತ್ತು ಎಂದರು.

ನೀವು ಗೋವಾದ ಪ್ರತಿಪಕ್ಷವಾದ ಕಾಂಗ್ರೆಸ್ ನಾಯಕರ ಮನವೊಲಿಸಿ ಪತ್ರ ತರಬೇಕಾಗಿತ್ತು‌. ಯಾಕೆ ತಂದಿಲ್ಲ? ಕಾಂಗ್ರೆಸ್ ನಾಯಕರಿಗೆ ಮಹದಾಯಿ ವಿವಾದ ಇತ್ಯರ್ಥಪಡಿಸುವ ಮನಸ್ಸಿಲ್ಲದೆ ರಾಜಕೀಯ ಮಾಡುತ್ತಿದೆ ಎಂದು ಶೆಟ್ಟರ್‌‌ ಕಿಡಿಕಾರಿದರು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English