ಮಂಗಳೂರು: ಸಿಪಿಐ ಮುಖಂಡ ಪಿ. ಸಂಜೀವ ಅವರ ನಿಧನ ಸುದ್ದಿ ಕೇಳಿದ ಶಾಕ್ನಲ್ಲೇ ಆಸ್ಪತ್ರೆ ಸೇರಿದ್ದ ಹಿರಿಯ ಸಿಪಿಐ ಮುಖಂಡ ವಿಶ್ವನಾಥ್ ನಾಯಕ್ ಕೂಡ ನಿನ್ನೆ ರಾತ್ರಿ ಆಸ್ಪತ್ರೆಯಲ್ಲೇ ನಿಧನರಾಗಿದ್ದಾರೆ.
ಕಮ್ಯುನಿಸ್ಟ್ ಚಳವಳಿಯ ಹಿರಿಯ ಮುಖಂಡ ಪಿ.ಸಂಜೀವ ನಿನ್ನೆ ಬೆಳಗ್ಗೆ ನಿಧನರಾಗಿದ್ದರು. ಆತ್ಮೀಯ ಗೆಳೆಯನ ಅಗಲಿಕೆಯ ವಿಚಾರವನ್ನು ಕೇಳಿದ ಶಾಕ್ನಿಂದ ವಿಶ್ವನಾಥ್ ನಾಯಕ್ (75) ಅಸ್ವಸ್ಥರಾಗಿದ್ದರಿಂದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ನಿನ್ನೆ ರಾತ್ರಿ ಸಾವನ್ನಪ್ಪಿದ್ದಾರೆ.
ಪಿ ಸಂಜೀವ ಹಾಗೂ ವಿಶ್ವನಾಥ್ ನಾಯಕ್ ಅವರು ಹಲವು ದಶಕಗಳ ಕಾಲ ಕಮ್ಯುನಿಸ್ಟ್ ಚಳವಳಿಯಲ್ಲಿ ತೊಡಗಿಕೊಂಡು ರೈತರು, ಕಾರ್ಮಿಕರ ಸಮಸ್ಯೆಗಳ ಪರಿಹಾರಕ್ಕೆ ಅವಿರತವಾಗಿ ದುಡಿದಿದ್ದರು. ವಿಶ್ವನಾಥ್ ನಾಯಕ್ ಭೂ ಸುಧಾರಣ ಹೋರಾಟದಲ್ಲಿದ್ದರು. ಹೀಗಾಗಿ ಭೂಮಾಲೀಕರಿಂದ ಹಲ್ಲೆಗೂಳಗಾಗಿದ್ದರು.
ಇಬ್ಬರು ನಾಯಕರು ಬೀಡಿ ಕಾರ್ಮಿಕ ಚಳವಳಿಯಲ್ಲಿ ಸಕ್ರಿಯವಾಗಿ ಭಾಗಿಯಾಗಿದ್ದರು. ವಿಶ್ವನಾಥ್ ಅವರು ಬಂಟ್ವಾಳ ಪುರಸಭಾ ಸದಸ್ಯ ಹಾಗೂ ಸಿಪಿಐ ರಾಜ್ಯ ಮಂಡಳಿ ಸದಸ್ಯರಾಗಿದ್ದರು.
ಪಿ ಸಂಜೀವ ಹಾಗೂ ವಿಶ್ವನಾಥ್ ನಾಯಕ್ ಅವರ ನಿಧನಕ್ಕೆ ಕಮ್ಯುನಿಸ್ಟ್ ಪಕ್ಷದ ಮುಖಂಡರುಗಳು, ಗಣ್ಯರು ಮತ್ತು ಕಾರ್ಮಿಕರು ಸಂತಾಪ ಸೂಚಿಸಿದ್ದಾರೆ.
Click this button or press Ctrl+G to toggle between Kannada and English