- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಉಳ್ಳಾಲ ಕೊಲೆ ಯತ್ನ ಆರೋಪಿಯ ಬಂಧನ

Rajaneesh [1]ಮಂಗಳೂರು  : ಉಳ್ಳಾಲ ಗ್ರಾಮದ ಮುಕ್ಕಚ್ಚೇರಿಯಲ್ಲಿ ಸಮೂಸಾ ಫ್ಯಾಕ್ಟರಿಯಲ್ಲಿ ಕೆಲಸ ಮಾಡಲು ಮನೆಯಿಂದ ಹೊರಟು ಉಳ್ಳಾಲ ಪೇಟೆಯಲ್ಲಿರುವ ರೆಹಮಾನಿಯಾ ಮಸೀದಿ ಬಳಿಗೆ ರಾತ್ರಿ 10-00 ಗಂಟೆಗೆ ತನ್ನ ಬೈಕ್ ನಲ್ಲಿ ಕೆಲಸದ ನಿಮಿತ್ತ ಬರುತಿದ್ದ ನೌಷಾದ್ ಹುಸೈನ್ ಎಂಬವರಿಗೆ ಬೈಕ್ ನಲ್ಲಿ ಬಂದು ತಲವಾರಿನಿಂದ ಹಲ್ಲೆ ನಡೆಸಿದ ಪ್ರಮುಖ ಆರೋಪಿಯನ್ನು ರೌಡಿ ನಿಗ್ರಹ ದಳ ಸಿಬ್ಬಂದಿ ಗಳು ಸೋಮವಾರ ಬಂಧಿಸಿದ್ದಾರೆ.

ಈ ಪ್ರಕರಣದ ಕುರಿತು 2017 ರ ಮಾರ್ಚ್ 26 ರಂದು ರಂದು ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಸದ್ರಿ ಪ್ರಕರಣದಲ್ಲಿ ತಲೆಮರೆಸಿಕೊಂಡಿರುವ ಆರೋಪಿ ರಜನೀಶ್(32), ತಂದೆ: ದಿ.ರಾಜೇಂದ್ರ, ವೀರಭದ್ರ ದೇವಸ್ಥಾನದ ಹಿಂಭಾಗ,ಮೊಗವೀರ್ ಪಟ್ಣ ಉಳ್ಳಾಲ,ಮಂಗಳೂರು ಈತನನ್ನು ಎ.ಸಿ.ಪಿ ರಾಮರಾವ್ ನೇತೃತ್ವದ ರೌಡಿ ನಿಗ್ರಹ ದಳ ಸಿಬ್ಬಂದಿಯವರು ದಿನಾಂಕ 12-02-2018 ರಂದು ದಸ್ತಗಿರಿ ಮಾಡಿದ್ದು, ಮುಂದಿನ ಕ್ರಮದ ಬಗ್ಗೆ ಉಳ್ಳಾಲ ಪೊಲೀಸ್ ಠಾಣೆಗೆ ಹಸ್ತಾಂತರಿಸಲಾಗಿದೆ.