[1]ಮಂಜೇಶ್ವರ : ಮಂಗಳೂರು ಶ್ರೀ ದೇವಿ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿ ಸೋಮವಾರ ಬೆಳಿಗ್ಗೆ ಹಾಸ್ಟೆಲ್ ನಲ್ಲಿ ಕುಸಿದು ಬಿದ್ದು ಮೃತಪಟ್ಟ ಘಟನೆ ನಡೆದಿದೆ.
ಮಂಜೇಶ್ವರ ಕೋಳ್ಯೂರು ನಿವಾಸಿ ಜೋಯೆಲ್ (18) ಸೋಮವಾರ ಬೆಳಿಗ್ಗೆ ಹಾಸ್ಟೆಲ್ ನಲ್ಲಿ ಬ್ರಶ್ ಮಾಡಿ ಮುಖ ತೊಳೆಯುತ್ತಿದ್ದ ವೇಳೆ ಕೊಠಡಿಯಲ್ಲೇ ಕುಸಿದು ಬಿದ್ದರು. ಜೋಯೆಲನ್ನು ತಕ್ಷಣ ಮಂಗಳೂರಿನ ಖಾಸಗೀ ಆಸ್ಪತ್ರೆಗೆ ದಾಖಲಿಸಿದರೂ ಹಾದಿ ಮಧ್ಯೆ ಮೃತಪಟ್ಟನೆಂದು ತಿಳಿದು ಬಂದಿದೆ.
ಕೋಳ್ಯೂರು ಸಮೀಪದ ಸರ್ಕುಡೆಲಿನ ರೋಯ್ ಮ್ಯಾಥ್ಯು ರವರ ಪುತ್ರನಾಗಿರುವ ಜೋಯೆಲ್ ಇಂಜಿನಿಯರಿಂಗ್ ಪ್ರಥಮ ವರ್ಷದ ವಿದ್ಯಾರ್ಥಿ. ಏಳು ವರ್ಷಗಳ ಹಿಂದೆ ಕಾಸರಗೋಡು ಸಮೀಪದ ಬಂದಡ್ಕದಿಂದ ಕೋಳ್ಯೂರಿಗೆ ಆಗಮಿಸಿದ ಈ ಕುಟುಂಬ ರಬ್ಬರ್ ಕೃಷಿ ಮಾಡುತ್ತಿದ್ದು ,ಜೋಯೆಲ್ ತಂದೆ, ತಾಯಿ, ಓರ್ವ ಸಹೋದರ ,ಓರ್ವಳು ಸಹೋದರಿಯನ್ನು ಅಗಲಿದ್ದಾನೆ.
ಕಾಸರಗೋಡು ಜಿ.ಪಂ.ಸ್ಥಾಯೀ ಸಮಿತಿ ಅಧ್ಯಕ್ಷ ಹರ್ಷಾದ್ ವರ್ಕಾಡಿ, ಬ್ಲಾಕ್.ಪಂ.ಉಪಾಧ್ಯಕ್ಷೆ ಮಮತಾ ದಿವಾಕರ್, ಪಂ.ಸ್ಥಾಯೀ ಸಮಿತಿ ಅಧ್ಯಕ್ಷೆ ಶೋಭಾ ಸೋಮಪ್ಪ, ದಿವಾಕರ್ ಎಸ್.ಜೆ., ಪಿ.ಸೋಮಪ್ಪ, ಮುಂತಾದವರು ಮೃತರಿಗೆ ಸಂತಾಪ ವ್ಯಕ್ತ ಪಡಿಸಿದ್ದಾರೆ .