ಮಂಗಳೂರು: ಮಾರ್ಚ್ 25, ಗರಿಗಳ ಬಾನುವಾರದಂದು ಜೆಪ್ಪು ಸಂತ ಆಂತೋನಿ ಆಶ್ರಮದಲ್ಲಿ ಶಿಲುಬೆ ಹಾದಿ ಭಕ್ತಿ ಕಾರ್ಯಕ್ರಮ ನಡೆಸಲಾಯ್ತು. ಪ್ರಖ್ಯಾತ ಗಾಯಕರಾದ ಮಿಲಾಗ್ರಿಸ್ನ ಶ್ರೀ ಪ್ರೇಮ್ ಲೋಬೊರವರು ತಾವೇ ರಚಿಸಿದ ’ಮಾತೆ ಮರಿಯಮ್ಮನವರ ಜೊತೆ ಯೇಸು ಸ್ವಾಮಿಯ ಶಿಲುಬೆ ಹಾದಿ’ ಯನ್ನು ನಡೆಸಿ ಕೊಟ್ಟರು.
ಆಶ್ರಮದ ನಿರ್ದೇಶಕ ಫಾ. ಒನಿಲ್ ಡಿ’ಸೋಜ ಸಂದೇಶ ನೀಡಿ ಶಿಲುಬೆ ಹಾದಿ ಭಕ್ತಿ ಕಾರ್ಯಕ್ರಮ ನಮ್ಮ ಜೀವನದ ಶಿಲುಬೆ ಹಾದಿ ನಡೆಯಲು ಪ್ರೇರಣೆಯಾಗಲಿ ಎಂದರು.
’ಯಾರಾದರೂ ನನ್ನನ್ನು ಹಿಂಬಾಲಿಸಲು ಇಛ್ಛಿಸುತ್ತಾರಾದರೆ ತಮ್ಮ ತಮ್ಮ ಶಿಲುಬೆ ಹೊತ್ತು ನನ್ನ ಹಿಂದ ಬರಲಿ’ ಎಂದು ಯೇಸು ಸ್ವಾಮಿ ನುಡಿದಿದ್ದಾರೆ. ಆ ಪ್ರಕಾರ ನಡೆಯಲು ನಮ್ಮ ಪ್ರಯತ್ನ ಮಾಡೋಣ ಮತ್ತು ಅದಕ್ಕಾಗಿ ದೇವರ ಕೃಪೆ ಬೇಡಿಕೊಳ್ಳೋಣ ಎಂದರು.
ಕಾರ್ಯಕ್ರಮದಲ್ಲಿ ಫಾ. ಫ್ರಾನ್ಸಿಸ್, ಫಾ. ಪೀಟರ್ ಗೊನ್ಸಾಲ್ವಿಸ್ ಪಾಲ್ಗೊಂಡಿದ್ದರು. ಶ್ರೀ ವಿನ್ಸೆಂಟ್ ಮಸ್ಕರೇನ್ಹಸ್ ಮಂಗಳೂರು ಧರ್ಮ ಪ್ರಾಂತ್ಯದ ಮಾಧ್ಯಮ ಸಮಿತಿಯ ಕಾರ್ಯದರ್ಶಿ ಮತ್ತು ಶ್ರೀ ಸ್ಟಾನ್ಲಿ ಬಂಟ್ವಾಳ್ ಕಾರ್ಯಕ್ರಮ್ ನಡೆಸಲು ಸಹಕರಿಸಿದರು.
Click this button or press Ctrl+G to toggle between Kannada and English