[1]ನವದೆಹಲಿ: ಮಹೇಂದ್ರ ಸಿಂಗ್ ಧೋನಿ ಸೇನೆಯ ಮೇಲೆ ಅಪಾರ ಭಕ್ತಿ ಹೊಂದಿದ್ದಾರೆ. ಲೆಫ್ಟಿನೆಂಟ್ ಕರ್ನಲ್ ಆಗಿರುವ ಅವರು ನಿನ್ನೆ ಪದ್ಮಭೂಷಣ ಪ್ರಶಸ್ತಿ ಸ್ವೀಕರಿಸುವಾಗ ಸೇನಾ ಸಮವಸ್ತ್ರದಲ್ಲಿ ಮಿಂಚಿದ್ದರು. ಅವರು ಸೇನಾಗೆ ನೀಡಿರುವ ಗೌರವಕ್ಕೆ ನಮ್ಮ ಸ್ಪಿನ್ ಮಾಂತ್ರಿಕ ಭಜ್ಜಿ ಸಂತಸಗೊಂಡಿದ್ದಾರೆ.
ದೆಹಲಿಯ ರಾಷ್ಟ್ರಪತಿ ಭವನದಲ್ಲಿ ನಿನ್ನೆ ರಾಷ್ಟ್ರಪತಿ ರಾಮನಾಥ್ ಕೋವಿಂದರಿಂದ ಮಹೇಂದ್ರ ಸಿಂಗ್ ಧೋನಿಗೆ ಪ್ರಶಸ್ತಿ ಸ್ವೀಕರಿಸಿದರು. ಈ ವೇಳೆ ಭಾರತೀಯ ಭೂ ಸೇನೆಯ ಲೆಪ್ಟಿನೆಂಟ್ ಕರ್ನಲ್ ಸಮವಸ್ತ್ರದಲ್ಲಿ ಧೋನಿ ಪದ್ಮಭೂಷಣ ಪ್ರಶಸ್ತಿ ಸ್ವೀಕರಿಸಿದ್ದರು. ಇದರಿಂದ ಕ್ರಿಕೆಟಿಗ ಹರ್ಭಜನ ಸಿಂಗ್ ಸಂತಸಗೊಂಡು ಟ್ವೀಟ್ ಮಾಡುವ ಮೂಲಕ ಧೋನಿಗೆ ಅಭಿನಂದನೆ ತಿಳಿಸಿದ್ದಾರೆ.
ಪದ್ಮಭೂಷಣ ಪ್ರಶಸ್ತಿ ಸ್ವೀಕರಿಸಿದ ಮಹೆಂದ್ರ ಸಿಂಗ್ ಧೋನಿಗೆ ಅಭಿನಂದನೆಗಳು. ನಿಮಗೆ ಮತ್ತು ನಿಮ್ಮ ಕುಟುಂಬಕ್ಕೆ ಎಲ್ಲ ಸಂತೋಷಗಳನ್ನು ಆ ದೇವರು ನೀಡಲಿ ಎಂದು ಭಯಸುತ್ತೇನೆ. ನೀವು ಪ್ರಶಸ್ತಿ ಸ್ವೀಕರಿಸಿದು ಹೆಮ್ಮೆಯ ಸಂಗತಿ ಎಂದು ಭಜ್ಜಿ ಕ್ಯಾಪ್ಷನ್ ಬರೆದು ಪ್ರಧಾನಿ ನರೇಂದ್ರ ಮೋದಿ ಮತ್ತು ಮಹೇಂದ್ರ ಸಿಂಗ್ ಧೋನಿ ಹಾಗು ಅವರ ಪತ್ನಿ ಸಾಕ್ಷಿಯ ಫೋಟೊವನ್ನು ಟ್ವೀಟ್ ಮಾಡಿದ್ದಾರೆ.
ಇನ್ನೂ ಹರ್ಭಜನ್ ಸಿಂಗ್ ಮಾಡಿರುವ ಟ್ವೀಟ್ಗೆ ನೆಟಿಜೆನ್ಸ್ ಮೆಚ್ಚುಗೆ ಸೂಚಿಸಿದ್ದಾರೆ.