ಊಟಕ್ಕೆ ಕೈಕೊಟ್ಟ ಸಿಎಂ : ಕುತೂಹಲ ಮೂಡಿಸಿದ ಅಂಬರೀಶ್‍ ಮುಂದಿನ ನಡೆ

6:23 PM, Tuesday, April 3rd, 2018
Share
1 Star2 Stars3 Stars4 Stars5 Stars
(5 rating, 1 votes)
Loading...

ambarishಬೆಂಗಳೂರು : ಅಂಬರೀಶ್‍ ನಿವಾಸಕ್ಕೆ ರಾತ್ರಿ ಡಿನ್ನರ್‌ಗೆ ಬರಬೇಕಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೈಕೊಟ್ಟಿರುವ ಹಿನ್ನೆಲೆಯಲ್ಲಿ ನಟ, ಮಾಜಿ ಶಾಸಕ ಅಂಬರೀಶ್‌ಗೆ ಮತ್ತೆ ಚುನಾವಣೆ ಟಿಕೆಟ್‌ ಕೈತಪ್ಪುವ ಭೀತಿ ಎದುರಾಗಿದೆ.

ಬೆಂಗಳೂರಿನ ಗಾಲ್ಫ್‌ ಕ್ಲಬ್‌ ಬಳಿ ಇರುವ ಅಂಬಿ ನಿವಾಸದಲ್ಲಿ ಮುಖ್ಯಮಂತ್ರಿ ಅವರಿಗೆಂದು ಅಯೋಜನೆ ಮಾಡಿದ್ದ ಔತಣಕೂಟ ದಿಢೀರ್‌ ರದ್ದಾಗಿದೆ. ಮೈಸೂರು ಚುನಾವಣೆ ಪ್ರಚಾರದ ವೇಳೆ ಸಿಎಂ ಸಿದ್ದರಾಮಯ್ಯ ಅವರ ತಲೆಗೆ ಪೆಟ್ಟು ಬಿದ್ದಿರುವ ಹಿನ್ನೆಲೆಯಲ್ಲಿ ವಿಶ್ರಾಂತಿಗಾಗಿ ಸೀದಾ ಕಾವೇರಿ ನಿವಾಸಕ್ಕೆ ಮುಖ್ಯಮಂತ್ರಿ ತೆರಳಿದ್ದಾರೆ. ಈ ಬಗ್ಗೆ ಮಾಹಿತಿ ಇಲ್ಲದ ಮಾಜಿ ಸಚಿವ ಅಂಬರೀಶ್‌ ತಮ್ಮ ನಿವಾಸದಲ್ಲಿ ಸಿಎಂಗಾಗಿ ಕಾದು ಕುಳಿತಿದ್ದು, ಬರದಿದ್ದಕ್ಕೆ ನಿರಾಸೆಗೊಂಡಿದ್ದಾರೆ ಎನ್ನಲಾಗಿದೆ.

ಅದಾಗಲೇ ಬಿಜೆಪಿ ನಾಯಕರು ಇವರ ನಿಕಟ ಸಂಪರ್ಕದಲ್ಲಿದ್ದಾರೆ. ಮಾತುಕತೆ ಕೂಡ ಸಾಕಷ್ಟು ಸಾರಿ ನಡೆದಿದೆ. ತಮ್ಮ ಬದಲು ತಮ್ಮ ಪತ್ನಿ ಸುಮಲತಾಗೆ ಬೆಂಗಳೂರು ನಗರದ ಯಾವುದಾದರೂ ವಿಧಾನಸಭೆ ಕ್ಷೇತ್ರದಿಂದ ಟಿಕೆಟ್‍ ನೀಡುವಂತೆ ಅಂಬರೀಶ್‍ ಈ ಹಿಂದೆ ರಾಜ್ಯ ಬಿಜೆಪಿ ನಾಯಕರಿಗೆ ಷರತ್ತು ವಿಧಿಸಿದ್ದಾರೆ ಎನ್ನಲಾಗಿತ್ತು.

ಒಟ್ಟಾರೆ ಅಂಬರೀಶ್‍ ಈ ವಾರದಲ್ಲಿ ತಮ್ಮ ಮಹತ್ವದ ನಿರ್ಧಾರ ಕೈಗೊಳ್ಳಲಿದ್ದಾರೆ ಎನ್ನಲಾಗುತ್ತಿದ್ದು, ಇದು ಅವರ ರಾಜಕೀಯ ಬದುಕಿನ ಇನ್ನೊಂದು ಮಹತ್ವದ ಹೆಜ್ಜೆಯಾಗಲಿದೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English