ಅಕ್ರಮ ಕಸಾಯಿಖಾನೆಗೆ ದಾಳಿ,ಇಬ್ಬರ ಸೆರೆ..

3:24 PM, Friday, May 18th, 2018
Share
1 Star2 Stars3 Stars4 Stars5 Stars
(No Ratings Yet)
Loading...

lidnapಬಂಟ್ವಾಳ: ಬಂಟ್ವಾಳ ತಾಲೂಕಿನ ಪರಂಗಿಪೇಟೆ ಸಮೀಪದ ಅಮ್ಮೆಮಾರ್ ಎಂಬಲ್ಲಿ ಕಾರ್ಯಾಚರಿಸುತ್ತಿದ್ದ ಅಕ್ರಮ ಕಸಾಯಿಖಾನೆಗೆ ದಾಳಿ ನಡೆಸಿದ ಬಂಟ್ವಾಳ ಗ್ರಾಮಾಂತರ ಠಾಣಾ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.

ಮಾರಿಪಳ್ಳ ನಿವಾಸಿಗಳಾದ ಹಸನಬ್ಬ ಮತ್ತು ಮನ್ಸೂರ್ ಬಂಧಿತ ಆರೋಪಿಗಳು.

ರಾತ್ರಿ ಗಸ್ತು ತಿರುಗುತ್ತಿದ್ದ ಸಮಯ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೋಲೀಸರು ಸ್ಥಳದಲ್ಲಿ ಹಸುಗಳನ್ನು ಕಡಿದು ಮಾಂಸ ಮಾಡಿದ್ದ 11 ಹಸುವಿನ ಚರ್ಮ ಮತ್ತು ಮಾಂಸ ಮಾಡಲು ತಯಾರಿಸಿದ್ದ ಕದ್ದು ತರಲಾಗಿದ್ದ ಒಂದು ಹಸು ಮತ್ತು ಮೂರು ದಿನದ ಕರುವನ್ನು ಪೋಲೀಸರು ವಶಪಡಿಸಿಕೊಂಡಿದ್ದಾರೆ.

ದಾಳಿಯಲ್ಲಿ ಪ್ರೋಬೆಷನರಿ ಐಪಿಎಸ್ ಅಕ್ಷಯ್ ಎಮ್ ಹಾಕೆ, ವ್ರತ್ತ ನಿರೀಕ್ಷಕ ಪ್ರಕಾಶ್, ಬಂಟ್ವಾಳ ಗ್ರಾಮಾಂತರ ಠಾಣಾ ಎಸ್ ಐ ಪ್ರಸನ್ನ, ಸಿಬ್ಬಂದಿ ಬಶೀರ್, ಜನಾರ್ದನ, ಸುರೇಶ್, ನಜೀರ್, ನಾಗನಾಥ್, ವಿಶಾಲಾಕ್ಷಿ ಭಾಗವಹಿಸಿದ್ದರು.‌

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English