- KANNADA MEGA MEDIA NEWS :: News Coverage From Mangalore and Major Cities of India and world wide - http://kannada.megamedianews.com -

ಜುಲೈ5ರಂದು ಜೆಡಿಎಸ್‌-ಕಾಂಗ್ರೆಸ್‌ ಮೈತ್ರಿ ಸರ್ಕಾರದ ಬಜೆಟ್ ಮಂಡನೆ?

kumarswamy [1]ಬೆಂಗಳೂರು: ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಭೇಟಿ ಬಳಿಕ ಬಜೆಟ್ ಮಂಡನೆಗೆ ಹಸಿರು ನಿಶಾನೆ ಪಡೆದಿರುವ ಸಿಎಂ ಹೆಚ್‌.ಡಿ. ಕುಮಾರಸ್ವಾಮಿ ಜುಲೈ ಮೊದಲವಾರ ಜಂಟಿ ಅಧಿವೇಶನ‌ ನಡೆಸಿ ಜು.5ರಂದು ಬಜೆಟ್ ಮಂಡಿಸಿ ಆಡಳಿತಕ್ಕೆ ವೇಗ ನೀಡುವ ಬಗ್ಗೆ ಸಮಾಲೋಚನೆ ನಡೆಸುತ್ತಿದ್ದಾರೆ.

ಜುಲೈ 4ರಿಂದ 24ವರೆಗೆ ಬಜೆಟ್ ಅಧಿವೇಶನ ನಡೆಸಿ ಹೊಸ ಸರ್ಕಾರದ ಬಜೆಟ್ ಮಂಡಿಸಿ ಅದಕ್ಕೆ ಅನುಮೋದನೆ ಪಡೆಯುವ ಇರಾದೆ ಕುಮಾರಸ್ವಾಮಿಯವರದ್ದಾಗಿದೆ. ಜುಲೈ ಮೊದಲವಾರ ಬಜೆಟ್ ಮಂಡನೆ ಮಾಡುವ ಸಂಬಂಧ ಅಗತ್ಯ ಸಿದ್ಧತೆ ನಡೆಸಿರುವ ಸಿಎಂ, ಬಜೆಟ್ ತಯಾರಿ ಹಿನ್ನೆಲೆಯಲ್ಲಿ ಇಲಾಖಾವಾರು ಸಭೆಗಳನ್ನು ಈಗಾಗಲೇ ನಡೆಸತೊಡಗಿದ್ದಾರೆ.

ಬಜೆಟ್ ಅಧಿವೇಶನ ನಡೆಯುವಾಗ ಅಥವಾ ಅದಕ್ಕೂ ಮುಂಚೆ ಸಚಿವ ಸಂಪುಟ ವಿಸ್ತರಣೆ ನಡೆಸುವ ಕುರಿತೂ ಕುಮಾರಸ್ವಾಮಿ ಯೋಚಿಸಿದ್ದಾರೆ ಎನ್ನಲಾಗಿದೆ.