- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಬಾವಿಯಲ್ಲಿ ನಾಲ್ವರು ಅಪರಿಚಿತರ ಮೃತದೇಹ ಪತ್ತೆ..!

suicide [1]ಕೋಲಾರ: ಬಾವಿಯಲ್ಲಿ ಅನುಮಾನಾಸ್ಪದವಾಗಿ ನಾಲ್ಕು ಮಂದಿ ಅಪರಿಚಿತರ ಶವ‌ ಪತ್ತೆಯಾಗಿರುವುದು ಕೋಲಾರ ಜಿಲ್ಲೆ ಮುಳಬಾಗಿಲು ತಾಲೂಕಿನ ಬೆಟ್ಟಗೇರಹಳ್ಳಿ ಬಳಿ ಕಂಡುಬಂದಿದೆ.

ಗ್ರಾಮದ‌ ನಾರಾಯಣಸ್ವಾಮಿ ಎಂಬುವರ ಬಾವಿಯಲ್ಲಿ ಶವ ಪತ್ತೆಯಾಗಿದ್ದು, ಕಳೆದ ಎರಡು ದಿನಗಳ‌ ಹಿಂದೆ ಬಾವಿಗೆ ಬಿದ್ದಿರುವ ಶಂಕೆ ವ್ಯಕ್ತವಾಗಿದೆ. ಇಬ್ಬರು ಮಹಿಳೆಯರು ಮತ್ತು ಇಬ್ಬರ ಮಕ್ಕಳ ಮೃತದೇಹಗಳು ಪತ್ತೆಯಾಗಿದ್ದು, ಮೃತರ ಹೆಸರುಗಳು ಹಾಗೂ ಗುರುತು ತಿಳಿದು ಬಂದಿಲ್ಲ.

ಮುಳಬಾಗಿಲು ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.