- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಬೈಕ್ ಗೆ ಲಾರಿ ಡಿಕ್ಕಿ..ಅಣ್ಣ ತಂಗಿ ಸಾವು..!

accident [1]ಮೈಸೂರು: ಬೈಕ್ ಗೆ ಲಾರಿ ಡಿಕ್ಕಿ ಹೊಡೆದು ಅಣ್ಣ ತಂಗಿ ಸಾವನ್ನಪ್ಪಿದ ಘಟನೆ ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರ ಬಳಿ ಸಂಭವಿಸಿದೆ.

ಅಮೋಘ್ (18) ಹಾಗೂ ಅಮೃತಾ (14)ಮೃತ ದುರ್ದೈವಿಗಳು. ಇವರು ಪಿರಿಯಾಪಟ್ಟಣ ತಾಲೂಕು ಗೊರಳ್ಳಿ ಗ್ರಾಮದ ಅಧ್ಯಕ್ಷರಾದ ಜಗದೀಶ್ ರವರ ಮಕ್ಕಳು.

ನಿನ್ನೆ ರಾತ್ರಿ ಪಾನಿಪುರಿ ತಿನ್ನಲು ಬೈಕ್ ನಲ್ಲಿ ತೆರಳುತ್ತಿದ್ದ ಸಂದರ್ಭ ಲಾರಿ ಡಿಕ್ಕಿ ಹೊಡೆದು ತೀವ್ರವಾಗಿ ಗಾಯಗೊಂಡಿದ್ದರು. ತಕ್ಷಣ ಇವರನ್ನು ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಆದರೆ ಇಂದು ಚಿಕಿತ್ಸೆ ಫಲಕಾರಿಯಾಗದೆ ಅಮೋಘ್, ಅಮೃತಾ ಸಾವನ್ನಪ್ಪಿದ್ದಾರೆ.

ಬೆಟ್ಟದಪುರ ಪೊಲೀಸ್ ಠಾಣೆಯಲ್ಲಿ ಈ ಪ್ರಕರಣ ದಾಖಲಾಗಿದೆ.