- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಅಮಾಯಕ ಪಾದಚಾರಿಯನ್ನು ಬಲಿ ಪಡೆದ ಖಾಸಗಿ ಬಸ್ಸು

mookambika bus [1]ಉಳ್ಳಾಲ : ಅಮಾಯಕ  ಪಾದಚಾರಿಯೋರ್ವರ  ಮೇಲೆ ಬಸ್ ಹರಿದ ಪರಿಣಾಮ ಆತ  ಸ್ಥಳದಲ್ಲೇ ಮೃತಪಟ್ಟ ಘಟನೆ ತೊಕ್ಕೊಟ್ಟು ಬಸ್ ನಿಲ್ದಾಣದಲ್ಲಿ ಶನಿವಾರ ಸಂಜೆ ನಡೆದಿದೆ.

ಉಳ್ಳಾಲ ಕಡೆಗೆ ಹೋಗುತಿದ್ದ KA 19 C 8549  ನಂಬರಿನ ಮೂಕಾಂಬಿಕಾ ಖಾಸಗಿ ಬಸ್ಸು ಪಾದಚಾರಿಗೆ ಢಿಕ್ಕಿ ಹೊಡೆದ ಪರಿಣಾಮ  ಗಂಭೀರವಾಗಿ ಗಾಯಗೊಂಡ ಅಪರಿಚಿತ ಪಾದಚಾರಿ ಸ್ಥಳದಲ್ಲೇ ಮೃತಪಟ್ಟರು ಎಂದು ತಿಳಿದುಬಂದಿದೆ.

ಮಂಗಳೂರು ದಕ್ಷಿಣ ಸಂಚಾರಿ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.

mookambika bus [2]