ಉಡುಪಿ: ಶಿರೂರು ಶ್ರೀಗಳ ಪಟ್ಟದ ದೇವರ ವಿವಾದದ ವಿಚಾರ ಸಂಬಂಧ ಸ್ವಾಮೀಜಿ ಪರ ನ್ಯಾಯವಾದಿ ರವಿಕಿರಣ್ ಮುರ್ಡೇಶ್ವರ ಪ್ರತಿಕ್ರಿಯೆ ನೀಡಿದ್ದಾರೆ.
ಪಟ್ಟದ ದೇವರ ವಿಚಾರದ ವೈಮನಸ್ಸು ಸಂದರ್ಭದಲ್ಲಿ ನನ್ನ ಜೀವಕ್ಕೆ ಅಪಾಯ ಇದೆ ಅಂತಾ ಸ್ವಾಮೀಜಿ ಹೇಳಿಕೊಂಡಿದ್ದರು. ಹಾಗಾಗಿ ಪಟ್ಟದ ದೇವರು ವಿಚಾರವಾಗಿ ಕ್ರಿಮಿನಲ್ ಪ್ರಕರಣ ದಾಖಲಿಸಲು ರೆಡಿ ಮಾಡಿಕೊಂಡಿದ್ದೆ ಎಂದು ಅವರು ಹೇಳಿದ್ದಾರೆ.
ಶಿರೂರು ಶ್ರೀಗಳಿಗಿರುವ ಅಪಾಯದ ಮುನ್ಸೂನೆ ಕುರಿತು ಎರಡು ಗಂಟೆಗಳ ಕಾಲ ಚರ್ಚೆ ನಡೆಸಿದ್ದರು.
ಶಿರೂರು ಶ್ರೀಗಳ ಸಾವಿನ ಬಗ್ಗೆ ತನಿಖೆಯಾಗಬೇಕು. ಶವ ಪರೀಕ್ಷೆ ನಡೆಯಬೇಕು ಎಂದು ನ್ಯಾಯವಾದಿ ರವಿಕಿರಣ್ ಮುರುಡೇಶ್ವರ ಆಗ್ರಹಿಸಿದ್ದಾರೆ. ಕುಂದಾಪುರದ ನ್ಯಾಯವಾದಿ ರವಿಕಿರಣ್ ಮುರುಡೇಶ್ವರ ಶಿರೂರು ಶ್ರೀಗಳ ಪರ ಕೇವಿಯಟ್ ಸಲ್ಲಿಸಿದ್ದರು.
Click this button or press Ctrl+G to toggle between Kannada and English