- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಜಿಲ್ಲೆಯ ಶಿಕ್ಷಕನೋರ್ವನ ಸೇವೆಗೆ ವಿವಿಎಸ್​ ಲಕ್ಷ್ಮಣ್ ​​ಫಿದಾ..!

vvs-laxman [1]ಉಡುಪಿ: ಕ್ರಿಕೆಟಿಗ ವಿವಿಎಸ್ ಲಕ್ಷ್ಮಣ್ ಉಡುಪಿ ಜಿಲ್ಲೆಯ ಶಿಕ್ಷಕನೋರ್ವನ ಸೇವೆಗೆ ಫಿದಾ ಆಗಿದ್ದಾರೆ. ಈ ಮೇಷ್ಟ್ರು ಮಾಡುತ್ತಿರುವ ಕೆಲಸಕ್ಕೆ ತಮ್ಮ ಟ್ವಿಟ್ಟರ್ನಲ್ಲಿ ಸಲಾಂ ಹೇಳಿದ್ದಾರೆ.

ಹೌದು, ಕೃಷ್ಣನ ಬೀಡು ಉಡುಪಿ ಜಿಲ್ಲೆಯ ಬಾರಾಳಿ ಗ್ರಾಮದ ಸರ್ಕಾರಿ ಶಾಲೆಯ ಶಿಕ್ಷಕ ರಾಜಾರಾಂ ಶ್ಲಾಘನೀಯಕ್ಕೆ ಪಾತ್ರರಾಗಿದ್ದಾರೆ. ಸೈನ್ಸ್ ಹಾಗೂ ಮ್ಯಾಥ್ಸ್ ಪಠ್ಯವನ್ನು ಬೋಧಿಸುವ ಇವರು, ಶಾಲಾ ವಾಹನದ ಚಾಲಕನಾಗಿಯೂ ಕೆಲಸ ಮಾಡುತ್ತಿದ್ದಾರೆ.

ಶಾಲೆಯಿಂದ ಸುಮಾರು ಆರು ಕಿ.ಮೀ. ಆಸುಪಾಸಿನ ಮಕ್ಕಳನ್ನು ಪ್ರತಿನಿತ್ಯ ಕರೆತರುವ ಹಾಗೂ ವಾಪಸ್ ಮನೆಗಳಿಗೆ ಬಿಟ್ಟು ಬರುವ ಜವಾಬ್ದಾರಿಯನ್ನೂ ನಿಭಾಯಿಸುತ್ತಿದ್ದಾರೆ. ರಾಜಾರಾಂ ಅವರ ಈ ಕಾರ್ಯವನ್ನು ಮೆಚ್ಚಿಕೊಂಡಿರುವ ವಿವಿಎಸ್ ಲಕ್ಷ್ಮಣ್ ಈ ವಿಷಯವನ್ನು ತಮ್ಮ ಟ್ವಿಟ್ಟರ್ನಲ್ಲಿ ಹಂಚಿಕೊಂಡಿದ್ದಾರೆ.