ಉಡುಪಿ: ಶಿರೂರು ಮಠದ ಶ್ರೀಲಕ್ಷ್ಮೀವರ ತೀರ್ಥ ಶ್ರೀಗಳ ಅನುಮಾನಾಸ್ಪದ ಸಾವು ಪ್ರಕರಣಕ್ಕೆ ಸಂಬಂಧಿಸಿ ತನಿಖೆ ನಡೆಸುತ್ತಿರುವ ಪೊಲೀಸರು ಮಠದ ಸಿಸಿ ಕ್ಯಾಮರಾದ ಡಿವಿಆರ್ ಗಾಗಿ ಮಂಗಳವಾರದಿಂದ ಶೋಧ ನಡೆಸುತ್ತಿದ್ದರು.
ಶ್ರೀಗಳ ಸಾವಿನ ಬೆನ್ನಲ್ಲೇ ಮಠದ ಸಿಸಿ ಕ್ಯಾಮರಾದ ಡಿವಿಆರ್ ಕಾಣೆಯಾಗಿತ್ತು. ಪೊಲೀಸರು ಶೋಧ ಮುಂದುವರಿಸಿದಾಗ ಮೂಲಮಠದ ಪಕ್ಕದ ಸ್ವರ್ಣಾ ನದಿಯಲ್ಲಿ ಡಿವಿಆರ್ ಪತ್ತೆಯಾಗಿದೆ . ಸ್ವರ್ಣಾ ನದಿಯಲ್ಲಿ ಐವರು ಮುಳುಗು ತಜ್ಞರು ಶೋಧ ನಡೆಸಿ ಡಿವಿಆರ್ ಪತ್ತೆ ಹಚ್ಚಿದ್ದಾರೆ ಎಂದು ತಿಳಿದು ಬಂದಿದೆ
ಶ್ರೀಗಳ ನಿಗೂಢ ಸಾವಿನ ಪ್ರಕರಣದ ತನಿಖೆಯನ್ನು ದಾರಿ ತಪ್ಪಿಸಲು ಅವರ ನಿಕಟವರ್ತಿಗಳು ಸಿಸಿ ಕ್ಯಾಮರಾದ ಡಿವಿಆರ್ ನ್ನು ಸ್ವರ್ಣಾ ನದಿಗೆ ಎಸೆದಿರುವ ಸಾಧ್ಯತೆಯ ಬಗ್ಗೆ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.
Click this button or press Ctrl+G to toggle between Kannada and English