ಕೊಣಾಜೆ : ಪಾಂಡೇಶ್ವರ ಮಹಾಲಿಂಗೇಶ್ವರ ದೇವಾಸ್ಥಾನದ 2 ದನ ಮತ್ತು ಕರುವನ್ನು ರಿಟ್ಸ್ ಕಾರನ್ನು ಬಳಸಿ ಕಳವು ಮಾಡಿದ್ದ ಆರೋಪಿ ಮಂಜೇಶ್ವರ ಮಚ್ಲಂಪಾಡಿಯ ಅಬ್ದುಲ್ಲಾ ಹುಸೈನ್(38) ಯಾನೆ ಹುಸೈನ್ ಮಂಜೇಶ್ವರ ಯಾನೆ ಜಾಕಿರ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ .
ಆರೋಪಿಯು ಕೊಣಾಜೆ ಠಾಣೆ ವ್ಯಾಪ್ತಿಯ ಕೈರಂಗಳ ಗ್ರಾಮದ ಪುಣ್ಯಕೋಟಿನಗರದ ಅಮೃತಧಾರಾ ಗೋಶಾಲೆಯಿಂದ ದನ ಕಳವು ಮಾಡಿ ತಲೆಮರೆಸಿಕೊಂಡಿದ್ದ ಪ್ರಮುಖ ಆರೋಪಿ ಎನ್ನಲಾಗಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಹಿಂದೆ ಎಂಟು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದರು.
ಆರೋಪಿಯ ವಿರುದ್ಧ ದನ ಕಳವಿಗೆ ಸಂಬಂಧಿಸಿದಂತೆ ಕೊಣಾಜೆ ಪೊಲೀಸ್ ಠಾಣೆಯಲ್ಲಿ 2 ಪ್ರಕರಣ, ಉಳ್ಳಾಲ ಪೊಲೀಸ್ ಠಾಣೆಯಲ್ಲಿ 3 ಪ್ರಕರಣ, ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ 1 ಪ್ರಕರಣ, ಕಂಕನಾಡಿ ನಗರ ಠಾಣೆಯಲ್ಲಿ 2 ಪ್ರಕರಣ, ಮಂಗಳೂರು ದಕ್ಷಿಣ ಠಾಣೆಯಲ್ಲಿ 1 ಪ್ರಕರಣ, ಕೇರಳ ರಾಜ್ಯದ ಕಾಸರಗೋಡು ಕುಂಬ್ಳೆಯಲ್ಲಿ 2 ಪ್ರಕರಣಗಳು ದಾಖಲಾಗಿರುತ್ತದೆ. ಅಲ್ಲದೆ ಈತ ನೆತ್ತಿಲಪದವು, ಕಾಸರಗೋಡು, ವಿಟ್ಲ ಪರಿಸರದಲ್ಲಿ ಸೇರಿದಂತೆ ಹಲವಾರು ಕಡೆ ದನ ಕಳವು ಮಾಡಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ದೊರೆತಿದ್ದು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಆರೋಪಿಗಳ ಪತ್ತೆ ಕಾರ್ಯದಲ್ಲಿ ಕೊಣಾಜೆ ಪೊಲೀಸ್ ನಿರೀಕ್ಷಕರಾದ ಅಶೋಕ್ ಪಿ, ಸಿಬ್ಬಂದಿಗಳಾದ ಅಶೋಕ್, ಉಮೇಶ್, ಶಿವಕುಮಾರ್, ಹೋಂಗಾರ್ಡ್ ಸಿಬ್ಬಂದಿ ಗಿರೀಶ್ ಹಾಗೂ ಮಂಗಳೂರು ದಕ್ಷಿಣ ಉಪವಿಭಾಗದ ರೌಡಿ ನಿಗ್ರಹ ದಳದ ಸಿಬ್ಬಂದಿಯವರು ಪಾಲ್ಗೊಂಡಿದ್ದರು.
Click this button or press Ctrl+G to toggle between Kannada and English
September 4th, 2020 at 16:28:04
Thanks for some other informative blog. The place else
may I am getting that type of information written in such a perfect way?
I have a venture that I’m just now operating on, and I have been at the look out for such information.