ಅಭಿಮಾನಿಗಾಗಿ ಭದ್ರಾವತಿಗೆ ಬಂದಿದ್ದರು ವಾಜಪೇಯಿ..!

1:18 PM, Friday, August 17th, 2018
Share
1 Star2 Stars3 Stars4 Stars5 Stars
(No Ratings Yet)
Loading...

badravathiಬೆಂಗಳೂರು: ಅಟಲ್ ಬಿಹಾರಿ ವಾಜಪೇಯಿ ಅವರಿಗೂ ಕರ್ನಾಟಕಕ್ಕೂ ಅಳಿಯದ ನಂಟಿದೆ. ಅವರು ತಮ್ಮ ಕಷ್ಟದ ದಿನಗಳಲ್ಲಿ ಕರ್ನಾಟಕಕ್ಕೆ ಬಂದಿದ್ದರು. ಇಲ್ಲಿಂದಲೇ ಸ್ಫೂರ್ಥಿ ಪಡೆದು ಮುನ್ನುಗ್ಗಿದ್ದರು. ಅದು 1984ರ ಸಮಯ ಕಾಂಗ್ರೆಸ್ ಪಕ್ಷ ಹಿಂದೆಂದೂ ಕಾಣದಂತ ವಿಜಯವನ್ನು ಲೋಕಸಭೆ ಚುನಾವಣೆಯಲ್ಲಿ ಕಂಡಿತ್ತು. ಅದಕ್ಕೆ ಕಾರಣವೂ ಇತ್ತು. ಅದಾಗ ತಾನೇ ಇಂದಿರಾ ಗಾಂಧಿ ಹತ್ಯೆಯಾಗಿತ್ತು. ದೇಶದೆಲ್ಲೆಡೆ ಕಾಂಗ್ರೆಸ್ ಹವಾ ಎದ್ದಿತ್ತು,

ಆ ಹವಾಕ್ಕೆ ಬಿಜೆಪಿಯ ಮುಖ್ಯ ಮುಖ ಎನಿಸಿಕೊಂಡಿದ್ದ ವಾಜಪೇಯಿ ಅವರೂ ಸಹ ಸೋತುಬಿಟ್ಟಿದ್ದರು. ಬಿಜೆಪಿಗೆ ಅದು ಭಾರಿ ಹಿನ್ನಡೆ. ವಾಜಪೇಯಿ ಅವರಂತಹಾ ಮೇರು ವ್ಯಕ್ತಿಯನ್ನು ಸೋಲಿಸಿದ ಜನರರಿರುವ ಈ ದೇಶದಲ್ಲಿ ನಾನು ಬದುಕಲಾರೆ ಎಂದು ಭದ್ರಾವತಿಯ ವಾಜಪೇಯಿ ಅಭಿಮಾನಿ ಲಕ್ಷ್ಮಿನಾರಾಯಣ ಎಂಬಾತ ಆತ್ಮಹತ್ಯೆ ಮಾಡಿಕೊಂಡರು.

ಆತ್ಮಹತ್ಯೆ ವಿಷಯ ವಾಜಪೇಯಿ ಅವರಿಗೆ ತಲುಪಿ ಅಲ್ಲಿಂದ ಭದ್ರಾವತಿಗೆ ಬಂದಿದ್ದ ವಾಜಪೇಯಿ ಲಕ್ಷ್ಮಿನಾರಾಯಣ ಮನೆಗೆ ಭೇಟಿ ನೀಡಿ, ಸಾಂತ್ವಾನ ಹೇಳಿ, ಆತನ ತಂಗಿ, ತಮ್ಮನ ಓದಿನ ಜವಾಬ್ದಾರಿ ವಹಿಸಿಕೊಂಡಿದ್ದರು.

ತಮ್ಮ ಹೋರಾಟ ನಿತ್ಯ ನಿರಂತರ ಎಂದು ಅಂದು ಹೇಳಿದ್ದ ವಾಜಪೇಯಿ ಮತ್ತೆ ಪಕ್ಷ ಕಟ್ಟುವ ಕಾಯಕದಲ್ಲಿ ತೊಡಗಿಕೊಂಡು ಅಧಿಕಾರ ಗದ್ದುಗೆ ಏರಿದ್ದರು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English