ಬೆಳ್ತಂಗಡಿ ತಾಲೂಕಿನ ಬಿಷಪ್ ಹೌಸ್​ನಿಂದ 7 ಲೋಡ್​ಗಳಲ್ಲಿ ನೆರೆ ಪರಿಹಾರ..!

10:11 AM, Monday, August 20th, 2018
Share
1 Star2 Stars3 Stars4 Stars5 Stars
(No Ratings Yet)
Loading...

churchಮಂಗಳೂರು: ಕೇರಳದಲ್ಲಿ ನೆರೆ ಪ್ರವಾಹ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಬಿಷಪ್ ಹೌಸ್ನಿಂದ 7 ಲೋಡ್ಗಳಲ್ಲಿ ನೆರೆ ಪರಿಹಾರ ಸಾಮಾಗ್ರಿಗಳನ್ನು ಕೇರಳಕ್ಕೆ ರವಾನಿಸಲಾಗಿದೆ.

ಬೆಳ್ತಂಗಡಿಯ ಕರ್ನಾಟಕ ಸೀರೊ ಮಲಬಾರ್ ಕ್ರಿಶ್ಚಿಯನ್ ಅಸೋಸಿಯೇಷನ್ (ಕೆ ಎಸ್ಎಂಸಿಎ) ಸಂಸ್ಥೆಯು ಬೆಳ್ತಂಗಡಿ ಬಿಷಪ್ ಮಾರ್ ಲಾರೆನ್ಸ್ ಮುಕ್ಕುಯಿ ನೇತೃತ್ವದಲ್ಲಿ ನೆರೆ ಪರಿಹಾರ ಸಂಗ್ರಹಿಸಿತ್ತು. ಸಂಗ್ರಹವಾದ 7 ಲೋಡ್ ಸಾಮಾಗ್ರಿಗಳನ್ನು ಲಾರಿಗಳ ಮೂಲಕ ರವಾನಿಸಲಾಗಿದೆ.

ಕೇರಳ ರಾಜ್ಯದ ವಯನಾಡ್ ಹಾಗೂ ಮಾನಂದವಾಡಿಗೆ ಬೆಳ್ತಂಗಡಿಯಿಂದ ಲಾರಿ ಮೂಲಕ ರವಾನೆ ಮಾಡಲಾಗಿದೆ. ಅಕ್ಕಿ, ಬೇಳೆ, ಬಿಸ್ಕತ್, ಬಟ್ಟೆ ಮೊದಲಾದ ವಸ್ತುಗಳನ್ನು ರವಾನೆ ಮಾಡಲಾಗಿದೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English