[1]ಮಂಗಳೂರು: ಮೂಡಬಿದ್ರೆಯ ಸಂಘ ಪರಿವಾರದ ಕಾರ್ಯಕರ್ತ ಪ್ರಶಾಂತ್ ಪೂಜಾರಿ ಕೊಲೆ ಪ್ರಕರಣದ ಆರೋಪಿ ಇಮ್ತಿಯಾಝ್ (32) ಎಂಬಾತನ ಮೇಲೆ ದುಷ್ಕರ್ಮಿಗಳು ತಲವಾರು ದಾಳಿ ನಡೆಸಿದ್ದಾರೆ.
ಮೂಡಬಿದ್ರೆಯ ಗಂಟಾಲ್ ಕಟ್ಟೆಯಲ್ಲಿರುವ ಮಸೀದಿ ಕಟ್ಟಡವೊಂದರಲ್ಲಿ ಇಮ್ತಿಯಾಝ್ ಸಣ್ಣ ಹೋಟೆಲ್ ನಡೆಸುತ್ತಿದ್ದು, ತಲವಾರು ದಾಳಿಯಿಂದ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾನೆ. ದುಷ್ಕರ್ಮಿಗಳ ತಂಡ ಹೋಟೆಲ್ಗೆ ಬಂದು ಇಮ್ತಿಯಾಝ್ ಬಳಿ ಚಹಾ ಕೇಳಿತ್ತು. ಚಹಾ ಮಾಡಲು ಇಮ್ತಿಯಾಝ್ ಒಳ ಹೋಗುತ್ತಿದ್ದಂತೆ ದುಷ್ಕರ್ಮಿಗಳು ತಲವಾರು ದಾಳಿ ನಡೆಸಿದ್ದಾರೆ.
[2]ತಲೆ , ಕೈ ಹಾಗೂ ಬೆನ್ನಿಗೆ ಗಾಯಗೊಂಡ ಇಮ್ತಿಯಾಜ್ ಸಮೀಪದ ಮನೆಗೆ ಓಡಿ ಹೋಗಿ ಪಾರಾಗಿದ್ದಾನೆ. ಎಂಟು ಮಂದಿಯ ತಂಡ ದಾಳಿ ನಡೆಸಿ ಪರಾರಿಯಾಗಿದೆ. ಹೋಟೆಲ್ನಲ್ಲಿದ್ದ ಮತ್ತೋರ್ವ ವ್ಯಕ್ತಿಯ ಮೇಲೂ ದುಷ್ಕರ್ಮಿಗಳು ದಾಳಿ ನಡೆಸಿದ್ದು ಆತನಿಗೂ ಗಾಯಗಳಾಗಿದೆ. ಘಟನೆ ಕುರಿತು ಮೂಡಬಿದ್ರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.