ಅಜಾಗರೂಕತೆ ಹಾಗೂ ಅತಿವೇಗದ ಚಾಲನೆ: ದರ್ಶನ್ ತಮ್ಮ ಡ್ರೈವರ್ ಮೂಲಕ ದೂರು

12:34 PM, Wednesday, September 26th, 2018
Share
1 Star2 Stars3 Stars4 Stars5 Stars
(5 rating, 1 votes)
Loading...

darshanಮೈಸೂರು: ಆರ್ಟಿಓ ಹಾಗೂ ಬ್ರೇಕ್ ಇನ್ಸ್ಸ್ಪೆಕ್ಟರ್ ವರದಿ ಮೇಲೆ ದರ್ಶನ್ ಸ್ನೇಹಿತ ಆಂಟೋನಿ ರಾಯ್ ಭವಿಷ್ಯ ನಿರ್ಧಾರವಾಗಲಿದ್ದು, ವರದಿಯಲ್ಲಿ ಏನಿರಬಹುದು ಎಂಬ ಕುತೂಹಲ ಎಲ್ಲರಲ್ಲೂ ಮೂಡಿದೆ.

ಆರ್‌ಟಿಓ ಹಾಗೂ ಬ್ರೇಕ್ ಇನ್ಸ್ಪೆಕ್ಟರ್ ವರದಿ ಇಂದು ಸಂಚಾರಿ ಪೊಲೀಸರ ಕೈ ಸೇರಲಿದೆ. ಈ ವರದಿಯಲ್ಲಿ ಅಪಘಾತದ ನಿಖರ ಕಾರಣ ಸ್ಪಷ್ಟವಾಗಲಿದೆ. ಕಾರಿನಲ್ಲಿ ದೋಷ ಇಲ್ಲ ಎಂದಾದರೆ ಆಂಟೋನಿ ಈ ಕೇಸ್‌ನಲ್ಲಿ ಫಿಟ್ ಆಗಬಹುದು ಎನ್ನಲಾಗಿದೆ.

ಆರ್‌ಟಿಓ ಅಧಿಕಾರಿಗಳು ನೀಡುವ ವಾಸ್ತವ ವರದಿಯನ್ನು ಇದು ಬಹುಮಟ್ಟಿಗೆ ಅವಲಂಬಿಸಿದೆ. ಹೀಗಾಗಿ ಆರ್‌ಟಿಓ ಅಧಿಕಾರಿಗಳ ವರದಿಯತ್ತ ಎಲ್ಲರ ಚಿತ್ತ ನೆಟ್ಟಿದೆ. ಅಜಾಗರೂಕತೆ ಹಾಗೂ ಅತಿವೇಗದ ಚಾಲನೆ ಎಂದು ದರ್ಶನ್ ತಮ್ಮ ಡ್ರೈವರ್ ಲಕ್ಷ್ಮಣ್ ಮೂಲಕ ದೂರು ನೀಡಿದ್ದಾರೆ. ಒಂದು ವೇಳೆ ಕಾರಿನಲ್ಲಿ ತಾಂತ್ರಿಕ ದೋಷ ಇದ್ದರೆ ಮಾತ್ರ ಆಂಟೋನಿ ಬಚಾವ್ ಆಗಬಹುದು.

ಸದ್ಯ ಆರ್‌ಟಿಓ ವರದಿ ಈ ಅಪಘಾತದ ಪ್ರಕರಣದಲ್ಲಿ ಪ್ರಮುಖ ಪಾತ್ರ ವಹಿಸಲಿದೆ. ಕಾರಿನ ಶಕ್ತಿ, ಇಂಜಿನ್ ಆಯಸ್ಸು, ಬ್ರೇಕ್ ಮತ್ತು ಕ್ಲಚ್ ಪರಿಶೀಲನೆ ನಡೆಸಿ ವರದಿ ನೀಡಲಾಗುವುದು. ದರ್ಶನ್ ಡ್ರೈವರ್ ಕಂ ಖಾಸಗಿ ಗನ್ಮ್ಯಾನ್ ಲಕ್ಷ್ಮಣ್ ನೀಡಿದ ದೂರಿನ ಮೇಲೆ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English