ಯುವ ನಾಯಕ ಮಿಥುನ್ ರೈಗೆ ಲೋಕಸಭಾ ಟಿಕೇಟು ಬಹುತೇಕ ಖಚಿತ

8:06 PM, Tuesday, October 16th, 2018
Share
1 Star2 Stars3 Stars4 Stars5 Stars
(5 rating, 1 votes)
Loading...

Mithun-Raiಮಂಗಳೂರು  : ಲೋಕಸಭಾ ಕ್ಷೇತ್ರವವನ್ನು ಸತತ ಎರಡು ಬಾರಿ ಕಳೆದುಕೊಂಡಿರುವ ಕಾಂಗ್ರೆಸ್,  ನಳಿನ್ ಕುಮಾರ್ ಕಟೀಲ್  ವಿರುದ್ಧ ಇರುವ ಆಡಳಿತ ವಿರೊಧಿ ಅಲೆಯನ್ನು ಸಮರ್ಥವಾಗಿ ಮಿಥುನ್ ರೈ ಎದುರಿಸಬಲ್ಲರು ಎಂಬುದನ್ನು ಕಾಂಗ್ರೆಸ್  ನಾಯಕರು ಲೆಕ್ಕಾಚಾರ ಹಾಕಿ ಈ ಬಾರಿ ಯುವ ನಾಯಕನಿಗೆ ಲೋಕಸಭಾ ಟಿಕೇಟು ನೀಡಲು ನಿರ್ಧರಿಸಿದ್ದಾರೆ.

ಅದಕ್ಕಾಗಿಯೇ ಕಾಂಗ್ರೆಸ್ ರಾಷ್ಟ್ರಾಧ್ಯಕ್ಷ ರಾಹುಲ್ ಗಾಂಧಿ ಮಂಗಳೂರು ಲೋಕಸಭಾ ಸ್ಥಾನವನ್ನು ಹೇಗಾದರೂ ಮಾಡಿ  ಪಡೆಯಬೇಕೆಂಬ ನಿರ್ಣಯ ಮಾಡಿರುವುದು ಬಹಳ ಕುತೂಹಲ ಮೂಡಿಸಿದೆ .

ಈ ಬಗ್ಗೆ ಪ್ರತಿಕ್ರಿಯಿಸಿದ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಖುದ್ದು ದೂರವಾಣಿ ಕರೆ ಮಾಡಿ  ಕ್ಷೇತ್ರವನ್ನು ಬಲಿಷ್ಠ ಗೊಳಿಸುವಂತೆ ಜೊತೆಗೆ ಯುವ ಕಾಂಗ್ರೆಸ್ ನೊಂದಿಗೆ ಹೆಚ್ಚಿನ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವಂತೆ ಸೂಚನೆ ನೀಡಿದ್ದಾರಂತೆ.

ರಾಹುಲ್ ಗಾಂಧಿ ಯವರು ಖುದ್ಧು ಮಂಗಳೂರು ಕ್ಷೇತ್ರದಿಂದ ಈ ಬಾರಿ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ ಅವರನ್ನು ಚುನಾವಣಾ ಕಣಕಿಳಿಸಿ ಮಿಥುನ್ ರೈ ಮುಖೇನ ಕಳೆದುಕೊಂಡ ಕ್ಷೇತ್ರವನ್ನು ಮರಳಿ ಪಡೆಯಲು ಉತ್ಸುಕರಾಗಿದ್ದಾರೆ ಎಂಬುದನ್ನು ಜಿಲ್ಲಾ ಕಾಂಗ್ರೆಸ್ ದೃಢ ಪಡಿಸಿದೆ.

Mithun Rai

ಕಾಂಗ್ರೆಸ್ ನಾಯಕರಿಗೂ ಯುವ ಪಡೆಯ ಬೆಂಬಲ ಹೊಂದಿರುವ ಮಿಥುನ್ ರೈ ಎಲ್ಲಾ ವರ್ಗದ ಮತದಾರರನ್ನು ಸೆಳೆಯುವಲ್ಲಿ ಸಫಲರಾಗುತ್ತಾರೆ ಎಂಬುದುದನ್ನು ಖಚಿತ ಪಡಿಸಿದ್ದಾರೆ.

ಈಗಾಗಲೇ ಜಿಲ್ಲೆಯಲ್ಲಿ ಬಾರಿ ಪ್ರಚಾರವನ್ನು ಪಡೆದಿರುವ ಮಿಥುನ್ ರೈ ಕಣಕ್ಕಿಳಿದರೆ ಹೆಚ್ಚು ಶ್ರಮದ ಅಗತ್ಯವು ಇರುವುದಿಲ್ಲ ಜೊತೆಗೆ ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಟೀಕೆಟ್ ವಂಚಿತರಾದ ಕುರಿತು ಯುವ ಕಾಂಗ್ರೆಸ್ ಗೆ ಅವಕಾಶ ನೀಡಿದಂತೆ ಆಗುತ್ತದೆ ಎಂಬುದು ಮತ್ತೊಂದು ಲೆಕ್ಕಾಚಾರ !

ಜಿಲ್ಲೆಯಲ್ಲಿ ಯುವ ಕಾಂಗ್ರೆಸ್ ಬಹಳ ಸಮರ್ಥವಾಗಿ ಬೇಳೆದು ನಿಂತಿರುವುದರ ಹಿಂದೆ ಮಿಥುನ್ ರೈ ಶ್ರಮ ಇರುವುದನ್ನು ಗಮನಿಸಿರುವ ಕೇಂದ್ರ ನಾಯಕರು ಮಿಥುನ್ ರೈ ಈ ಭಾರಿ ಟಿಕೆಟ್ ಪಡೆಯುವುದು ಬಹುತೇಕವಾಗಿ ಖಚಿತವಾಗಿದೆ ಎಂದಿದ್ದಾರೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English