ಸೈನಿಕರೊಂದಿಗೆ ಆಯುಧ ಪೂಜೆ ಆಚರಿಸಿದ ರಾಜನಾಥ್​ ಸಿಂಗ್​​!

1:04 PM, Friday, October 19th, 2018
Share
1 Star2 Stars3 Stars4 Stars5 Stars
(No Ratings Yet)
Loading...

rajnath-singhಗುಜರಾತ್: ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಗುಜರಾತ್ನ ಬಿಕಾನೆರ್ನ ಭಾರತ-ಪಾಕ್ ಗಡಿಯಲ್ಲಿರುವ ಸೈನಿಕರೊಂದಿಗೆ ದಸರಾ ಹಬ್ಬ ಆಚರಿಸುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಗುರುವಾರ ಆಯುಧ ಪೂಜೆಯಲ್ಲಿ ಪಾಲ್ಗೊಂಡ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಗಡಿ ಭದ್ರತಾ ಪಡೆಗಳ ಕುಟುಂಬಗಳ ಜೊತೆ ಹಬ್ಬ ಆಚರಿಸುವುದು ತುಂಬಾ ಖುಷಿ ತಂದಿದೆ. ನಮ್ಮ ಗಡಿ ಭದ್ರತಾ ಪಡೆಗಳ ಸೈನಿಕರಿಗೆ ಅವರ ಕುಟುಂಬಗಳೇ ಬೆನ್ನೆಲುಬು ಎಂದು ಸೈನಿಕರನ್ನು ಹೊಗಳಿದರು.

ಸೈನಿಕರ ಕುಟುಂಬಗಳು ನೀಡುವ ಪ್ರೋತ್ಸಾಹವೇ ಸೈನಿಕರು ಗಡಿಯಲ್ಲಿ ನಿಂತು ದೇಶ ಸೇವೆ ಮಾಡವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಹಾಗಾಗಿ ಅವರ ಜೊತೆ ಹಬ್ಬ ಆಚರಿಸಿರುವುದು ಹೆಚ್ಚು ಖುಷಿ ತಂದಿದೆ ಎಂದು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English