ಬೆಳ್ತಂಗಡಿಯಲ್ಲಿ ತೋಟಕ್ಕೆ‌ ಬಂದ ಕಾಡಾನೆ: ಭೀತಿಯಲ್ಲಿ ಗ್ರಾಮಸ್ಥರು

1:06 PM, Friday, November 2nd, 2018
Share
1 Star2 Stars3 Stars4 Stars5 Stars
(No Ratings Yet)
Loading...

elephantಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಇಂದಬೆಟ್ಟುವಿನಲ್ಲಿ ಕಾಡಾನೆಯೊಂದು ತೋಟಕ್ಕೆ ಬಂದು ಭೀತಿ ಹುಟ್ಟಿಸಿದ ಘಟನೆ ನಡೆದಿದೆ.

ಭಾರಿ ಗಾತ್ರದ ಒಂಟಿ ಸಲಗವು ಇಂದಬೆಟ್ಟು ಚರ್ಚ್ನ ಹಿಂಬದಿ ಹನಿಬೆಟ್ಟು ಭರತ್ ಕುಮಾರ್ ಎಂಬುವವರ ತೋಟಕ್ಕೆ ನುಗ್ಗಿತ್ತು. ಇದರಿಂದ ಭಯಗೊಂಡ ಅಕ್ಕಪಕ್ಕದ ಮನೆಯ ನಾಯಿಗಳ ಬೊಗಳುವಿಕೆಯನ್ನು ಕೇಳಿದ ಸ್ಥಳೀಯರು ತೋಟಕ್ಕೆ ಬಂದು ನೋಡಿದಾಗ ಕಾಡಾನೆ ತೋಟದುದ್ದಕ್ಕೂ ನಡೆದುಕೊಂಡು ಹೋಗಿತ್ತು. ಆದರೆ ಆನೆಯು ತೋಟಕ್ಕೆ ಯಾವುದೇ ರೀತಿ ಹಾನಿ ಉಂಟು ಮಾಡದೆ ಕಾಡಿಗೆ ತೆರಳಿದೆ ಎಂದು ತಿಳಿದು ಬಂದಿದೆ.

ಕಾಡಾನೆ ಬಂದಿರುವ ಬಗ್ಗೆ ಅರಣ್ಯ ಇಲಾಖೆಗೆ ಗ್ರಾಮಸ್ಥರು ಮಾಹಿತಿ ನೀಡಿದ್ದಾರೆ. ಅದನ್ನು ಕಾಡಿಗೆ ಓಡಿಸಲು ಕಾನರ್ಪ ಎಂಬಲ್ಲಿನ ಹೊಳೆ ಬದಿ ಅರಣ್ಯ ಇಲಾಖೆಯವರು ಕಾದು ಕೂತಿದ್ದರು. ರಾತ್ರಿ ವೇಳೆಯವರೆಗೂ ಅದು ಗೋಚರಿಸದೇ ಇರುವುದರಿಂದ ಬಹುತೇಕ ಅದು ನದಿ ದಾಟಿ ಬಂಡಾಜೆ ಕಾಡಿಗೆ ತೆರಳಿರಬಹುದುದೆಂದು ಅಂದಾಜಿಸಿದ್ದಾರೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English