- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಸೂಪರ್ ಮಾರ್ಕೆಟ್ ಬಳಿ ಗಾಂಜಾ ಸೇವನೆ: ಇಬ್ಬರ ಆರೋಪಿಗಳ ಬಂಧನ

ganja [1]ಮಂಗಳೂರು: ಉರ್ವ ಪೊಲೀಸ್ ಠಾಣಾ ವ್ಯಾಪ್ತಿಯ ಚಿಲಿಂಬಿ ಮೋರ್ ಸೂಪರ್ ಮಾರ್ಕೆಟ್ ಬಳಿ ಗಾಂಜಾ ಸೇವನೆಯಲ್ಲಿ ತೊಡಗಿದ್ದ 02 ಜನರನ್ನು ಆರೋಪಿತರನ್ನು ಕೇಂದ್ರ ಉಪವಿಭಾಗದ ರೌಡಿ ನಿಗ್ರಹ ದಳದ ತಂಡ ಕಾರ್ಯಾಚರಣೆ ನಡೆಸಿ ಬಂಧಿಸಿರುತ್ತಾರೆ.

ಖಲೀಲ್ ಕಾಲಿದ್ ಕುಂಜತ್ತೂರು, ಪ್ರಾಯ 23, ತಂದೆ- ಖಾಲಿದ್, ವಾಸ- ಮರಿಮಾರ್ ಗುಡ್ಡ ಮಜಲ್, ಜಿ.ಎಲ್.ಪಿ ಶಾಲೆ ಬಳಿ, ಕಣ್ವತೀರ್ಥ, ಕುಂಜತ್ತೂರು, ಮಂಜೇಶ್ವರ, ಕೇರಳ ರಾಜ್ಯ, ಅಬ್ದುಲ್ ನಾಸೀರ್ ಇಬ್ರಾಹಿಂ, ಪ್ರಾಯ 22, ತಂದೆ- ಇಬ್ರಾಹಿಂ, ವಾಸ- ಮಜಲ್ ಹೌಸ್, ಎಂ.ಎಂ ಮಂಜಿಲ್, ಕುಂಜತ್ತೂರು, ಮಂಜೇಶ್ವರ, ಕೇರಳ ರಾಜ್ಯದ ನಿವಾಸಿಗಳಾಗಿದ್ದು, ಇವರುಗಳನ್ನು ಗಾಂಜಾ ಸೇವನೆ ಮಾಡುತ್ತಿದ್ದಾಗ ಕೃತ್ಯಕ್ಕೆ ಬಳಸಿದ ಕೆಎಲ್14ಯು2350 ಯಮಹಾ ಎಫ್.ಝಡ್ ಮೋಟಾರ್ ಸೈಕಲ್ ನ್ನು ವಶಕ್ಕೆ ಪಡೆದಿದ್ದು, ಈ ಬಗ್ಗೆ ಉರ್ವ ಠಾಣೆಯಲ್ಲಿ ಎನ್.ಡಿ.ಪಿ.ಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿರುತ್ತದೆ.

ಕೇರಳ ನಿವಾಸಿಗಳಾದ ಇವರಿಬ್ಬರು ಉರ್ವ ಪೊಲೀಸ್ ಠಾಣಾ ವ್ಯಾಪ್ತಿಯ ಚಿಲಿಂಬಿ ಬಳಿ ಗಾಂಜಾ ಸೇವನೆ ಮಾಡುತ್ತಿದ್ದಾಗ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಗಾಂಜಾ ಸೇವನೆ ಮಾಡುತ್ತಿದ್ದ ಸಂದರ್ಭ ಇವರ ಬಳಿ ಇದ್ದ ಎಫ್ ಝಡ್ ಬೈಕ್ ಅನ್ನು ವಶಪಡಿಸಿಕೊಳ್ಳಲಾಗಿದೆ.

ಈ ಬಗ್ಗೆ ಉರ್ವ ಪೊಲೀಸ್ ಠಾಣೆಯಲ್ಲಿ ಎನ್.ಡಿ.ಪಿ.ಎಸ್. ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಕಾರ್ಯಾಚರಣೆಯಲ್ಲಿ ಕೇಂದ್ರ ಉಪ ವಿಭಾಗದ ರೌಡಿ ನಿಗ್ರಹ ದಳದ ಅಧಿಕಾರಿ ಹಾಗೂ ಸಿಬ್ಬಂದಿ ಭಾಗವಹಿಸಿದ್ದಾರೆ.