ವಿಶಾಖಪಟ್ಟಣಂ: ಯುವಕನ ಪ್ರಾಣ ತೆಗೆದ ಇಯರ್ ಫೋನ್..!

4:46 PM, Tuesday, December 4th, 2018
Share
1 Star2 Stars3 Stars4 Stars5 Stars
(No Ratings Yet)
Loading...

vishakapatanamಆಂಧ್ರಪ್ರದೇಶ: ಇಯರ್ ಫೋನ್ನಿಂದಾಗಿಯೇ ಸುಂದರ ಯುವಕನೊಬ್ಬನ ಪ್ರಾಣಪಕ್ಷಿ ಹಾರಿ ಹೋದ ಘಟನೆ ಆಂಧ್ರಪ್ರದೇಶದ ವಿಶಾಖಪಟ್ಟಣಂ ನಗರದ ರೈಲ್ವೇ ನಿಲ್ದಾಣದ ಬಳಿ ನಡೆದಿದೆ.

ಹೌದು, ಉಪ್ಪಾಡ ಅನಿಲ್ (22) ಬೆಳಗ್ಗೆ ಆರು ಗಂಟೆಗೆ ಇಯರ್ ಫೋನ್ ಹಾಕಿಕೊಂಡು ರೈಲ್ವೇ ಟ್ರ್ಯಾಕ್ ಸಮೀಪ ಬಂದಿದ್ದಾನೆ. ಟ್ರ್ಯಾಕ್ ಮೇಲೆ ರೈಲು ಬಂದಿದೆ. ಆ ಟ್ರ್ಯಾಕ್ ಬಿಟ್ಟು ಪಕ್ಕದ ಟ್ರ್ಯಾಕ್ ಬಳಿ ಯುವಕ ಶಿಫ್ಟ್ ಆಗಿದ್ದಾನೆ. ಇದೇ ಸಮಯದಲ್ಲಿ ಶಿಫ್ಟ್ ಆದ ಪಕ್ಕದ ಟ್ರ್ಯಾಕ್ ಮೇಲೆಯೂ ರೈಲು ಬಂದಿದೆ. ಇಯರ್ ಫೋನ್ ಹಾಕಿಕೊಂಡಿದ್ದರಿಂದ ಅನಿಲ್ಗೆ ಮತ್ತೊಂದು ಟ್ರ್ಯಾಕ್ ಮೇಲೆ ರೈಲು ಬರುವ ಸದ್ದು ಕೇಳಸಿಲ್ಲ. ಬಳಿಕ ರೈಲು ಅನಿಲ್ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಅನಿಲ್ ತಲೆಗೆ ತೀವ್ರವಾಗಿ ಪೆಟ್ಟಾಗಿದ್ದು, ಸ್ಥಳದಲ್ಲೇ ಮೃತಪಟ್ಟಿದ್ದಾನೆ.

ಈ ಘಟನೆ ಕುರಿತು ರೈಲ್ವೇ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English