ಮಂಗಳೂರಿನ ಸಿಟಿ ಬಸ್ ಮೇಲೆ ವಿಂಗ್ ಕಮಾಂಡರ್ ಅಭಿನಂದನ್ ಚಿತ್ರ

10:00 PM, Wednesday, March 13th, 2019
Share
1 Star2 Stars3 Stars4 Stars5 Stars
(No Ratings Yet)
Loading...

indian-armyಮಂಗಳೂರು : ಪಾಕಿಸ್ತಾನದ ಅತ್ಯಾಧುನಿಕ ಎಫ್ 16 ಯುದ್ದ ವಿಮಾನವನ್ನು ಹೊಡೆದುರುಳಿಸಿದ ವಾಯುಸೇನೆಯ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಅವರ ಮೇಲಿನ ಅಭಿಮಾನ ಮಂಗಳೂರಿನ ಸಿಟಿ ಬಸ್ ಗಳಲ್ಲಿಯೂ ವ್ಯಕ್ತವಾಗುತ್ತಿದೆ. ಮಂಗಳೂರಿನ ಸಿಟಿ ಬಸ್ ಒಂದರ ಮೇಲೆ ಅಭಿನಂದನ್ ಅವರ ಭಾವ ಚಿತ್ರ  ವನ್ನು ಬರೆಯಲಾಗಿದೆ.

ಮಂಗಳಾದೇವಿ-ಕಾವೂರು ನಡುವೆ ಸಂಚರಿಸುವ 14 ಡಿ ನಂಬರಿನ ಬಸ್ ಮೇಲೆ ಅಭಿನಂದನ್ ಅವರ ಚಿತ್ರ ಬಿಡಿಸಲಾಗಿದ್ದು, ಸೆಲ್ಯೂಟ್ ಇಂಡಿಯನ್ ಆರ್ಮಿ ಎಂದು ಬರೆಯಲಾಗಿದೆ.

ಈ ಬಸ್ ನ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಈ ಬಗ್ಗೆ ಪ್ರತಿಕ್ರಿಯಿಸಿರುವ ಬಸ್ ನ ಸಿಬ್ಬಂದಿ, ದೇಶ ಕಾಯುವ ಈ ಯೋಧರಿಗೆ ನಮ್ಮದೊಂದು ಸಲಾಮ್. ಅದರಲ್ಲೂ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ದೇಶದ ನಿಜವಾದ ಹೀರೋ. ಅವರ ಬಗ್ಗೆ ಅಪಾರ ಅಭಿಮಾನ ಇದೆ. ಆದ್ದರಿಂದ ಅವರ ಸ್ಟೈಲಿಶ್ ಮೀಸೆ ಇರುವ ಚಿತ್ರವನ್ನು ಬಸ್ ಮೇಲೆ ಬಿಡಿಸಲಾಗಿದೆ ಎಂದು ತಿಳಿಸಿದ್ದಾರೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English