ಕೆಲಸಕ್ಕೆ ರಾಜೀನಾಮೆ ಕೊಟ್ಟು ಮತದಾನ ಜಾಗೃತಿ ಗೆ ಇಳಿದ ಯುವಕ

2:07 PM, Friday, March 22nd, 2019
Share
1 Star2 Stars3 Stars4 Stars5 Stars
(5 rating, 1 votes)
Loading...

Basavarajಮಂಗಳೂರು : ತಿಂಗಳಿಗೆ 40000 ಸಾವಿರ ಸಂಬಳ ಬರುತ್ತಿದ್ದ ಕೆಲಸಕ್ಕೆ ರಾಜೀನಾಮೆ ಕೊಟ್ಟು ಅಖಂಡ ಕರ್ನಾಟಕ ಮತದಾನ ಜಾಗೃತಿ ಅಭಿಯಾನ ದ್ವಿಚಕ್ರ ವಾಹನದಲ್ಲಿ ಹೊರಟ ಯುವಕ ಈಗ ಮಂಗಳೂರಿನಲ್ಲಿ ಜನರಿಗೆ ಮತದಾನದ  ಬಗ್ಗೆ ಜಾಗೃತಿ ಮಾಡುತ್ತಿದ್ದಾರೆ.

43 ವರ್ಷ ವಯಸ್ಸಿನ ಬಸವರಾಜು ಎಸ್ ಕಲ್ಲು ಸಕ್ಕರೆ ಮತದಾನ ಜಾಗೃತಿಗಾಗಿ ಅಖಂಡ ಕರ್ನಾಟಕ ಮತದಾನ ಜಾಗೃತಿ ಅಭಿಯಾನ ದ್ವಿಚಕ್ರ ವಾಹನದಲ್ಲಿ ಕರ್ನಾಟಕದ 30 ಜಿಲ್ಲೆಗಳಿಗೂ ಭೇಟಿಕೊಟ್ಟು ಮತದಾನ ಮಾಡುವಂತೆ ಹಾಗೂ ಮತದಾನದ ಮಹತ್ವದ ಅರಿವು ಮೂಡಿಸುತ್ತಿರುವುದು ಸರ್ಕಾರಿ ಶಾಲಾ ಕಾಲೇಜು ಮತ್ತು ಗ್ರಾಮ ಪಂಚಾಯಿತಿ ಹಾಗೂ ನಗರ, ಗ್ರಾಮಗಳಲ್ಲಿ.

ಇಲ್ಲಿಯವರೆಗೆ 4000 ಸಾವಿರ ಕಿ ಮೀ ಕ್ರಮಿಸಿ 21 ಜಿಲ್ಲೆಗಳ ಪ್ರವಾಸ ಮುಗಿಸಿ 22 ಜಿಲ್ಲೆಯಾಗಿ ಮಂಗಳೂರಿಗೆ ಬಂದಿರುತ್ತೇನೆ. ಈ ಸಂಧರ್ಭ  ಕೆಲವರು ನಿನಗೆ ಹುಚ್ಚೆ, ಸಮಾಜ ಬದಲಾಯಿಸುವ ಭ್ರಮೆಯಲ್ಲಿರುವೆಯಾ ಎಂದು ಕೇಳಿದ್ದಾರೆ . ನನಗೆ ಸಮಾಜ ಬದಲಾವಣೆ ಮಾಡಿ ಬಿಡುವೆ ಎಂಬ ಭ್ರಮೆ ಇಲ್ಲ ಆದರೆ ಬದಲಾವಣೆಗೆ ನನ್ನದೆ ಮೊದಲ ಹೆಜ್ಜೆ ಯಾಗಿರಲಿ ಎಂಬ ಆಸೆ ಎಂದು ಹೇಳಿದ್ದಾರೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English