ಕಾಂಗ್ರೆಸ್ ನಿಂದ  ಎಸ್ ಡಿಪಿಐ ಪಕ್ಷಕ್ಕೆ  ಹಾರಿದ ಇಸ್ಮಾಯಿಲ್ ಶಾಫಿ

2:00 PM, Friday, March 22nd, 2019
Share
1 Star2 Stars3 Stars4 Stars5 Stars
(5 rating, 1 votes)
Loading...

 

safi babbukatte ಮಂಗಳೂರು : ಕರ್ನಾಟಕ ರಾಜ್ಯ ಟಿಪ್ಪು ಸುಲ್ತಾನ್ ಅಭಿಮಾನಿಗಳ ಮಹಾ ವೇದಿಕೆ (ರಿ) ದಕ್ಷಿಣ ಕನ್ನಡ ಜಿಲ್ಲೆಯ ಅಧ್ಯಕ್ಷ ಇಸ್ಮಾಯಿಲ್ ಶಾಫಿ ಬಬ್ಬುಕಟ್ಟೆ ಎಸ್ ಡಿಪಿಐ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ.

ಈ ಹಿಂದಿನ ಚುನಾವಣೆ ವೇಳೆ ಸಚಿವ ಮಂಗಳೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷವನ್ನು ಸಂಘಟಿಸಿ, ಮುನ್ನೂರು ಗ್ರಾಮದ ಚುನಾವಣಾ ಉಸ್ತುವಾರಿಯಾಗಿ ಕಾರ್ಯನಿರ್ವಹಿಸಿ ಯುಟಿ ಖಾದರ್ ರ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

ಶಾಫಿ ಬಬ್ಬುಕಟ್ಟೆಯವರು ಉಳ್ಳಾಲ ಬ್ಲಾಕ್ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದ್ದಾರೆ. ಇಷ್ಟೆಲ್ಲಾ ಅರ್ಹತೆ , ಸಾಮರ್ಥ್ಯ ಇದ್ದರೂ ಕಾಂಗ್ರೆಸ್ ಪಕ್ಷ ಕನಿಷ್ಠ ಪಕ್ಷ ಇವರಿಗೆ ಉಳ್ಳಾಲ ನಗರಸಭೆ ಟಿಕೆಟ್ ನೀಡಲು ಮನಸ್ಸು ಮಾಡಲಿಲ್ಲ. ಪ್ರಾಮಾಣಿಕ ಕಾರ್ಯಕರ್ತನ ಶ್ರಮಕ್ಕೆ ಬೆಲೆ ನೀಡಲಿಲ್ಲ.

ದಕ್ಷ, ಪ್ರಾಮಾಣಿಕ, ಶ್ರಮಿಕ ಸಾಮರ್ಥ್ಯ ಹೊಂದಿರುವ ಶಾಫಿ ಬಬ್ಬುಕಟ್ಟೆಯವರ ಪ್ರಭಾವ, ಸಾಮರ್ಥ್ಯಕ್ಕೆ ತಲೆಬಾಗಿದ ಎಸ್ ಡಿಪಿಐ ತನ್ನ ಪಕ್ಷಕ್ಕೆ ಬರಮಾಡಿಕೊಂಡಿತು. ಇದೀಗ ಎಸ್ ಡಿಪಿಐ ಪಕ್ಷಕ್ಕೆ ಹೊಸ ನಾಯಕನ ಆಗಮನದಿಂದ ಹೊಸ ಚೈತನ್ಯ ಸಿಕ್ಕದಂತಾಗಿದೆ‌.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English