ಅಂಬರೀಶ್ ಅವರ ವೈಕುಂಠ ಸಮಾರಾಧನೆಗಾದರೂ ನಟಿ ರಮ್ಯಾ ಬರಬಹುದು: ಸಚಿವೆ ಜಯಮಾಲಾ

Saturday, December 1st, 2018
jayamala

ಉಡುಪಿ: ಅಂಬರೀಶ್ ಅಂತ್ಯಸಂಸ್ಕಾರದಲ್ಲಿ ಭಾಗವಹಿಸದ ನಟಿ ರಮ್ಯಾ ಅವರು ಅಂಬರೀಶ್ ಅವರ ವೈಕುಂಠ ಸಮಾರಾಧನೆಗಾದರೂ ಬರಬಹುದು ಎಂದು ಸಚಿವೆ ಜಯಮಾಲಾ ಹೇಳಿದ್ದಾರೆ. ಈ ಬಗ್ಗೆ ಉಡುಪಿಯಲ್ಲಿ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ರಮ್ಯಾಗೆ ಹುಷಾರಿಲ್ಲ ಅಂತ ಅವರೇ ಹೇಳ್ಕೊಂಡಿದಾರಲ್ವಾ? ಹೆಣ್ಣು ಮಕ್ಕಳಿಗೆ ಸಮಸ್ಯೆಗಳು ಇರ್ತವೆ. ಬೇರೇನೂ ರಾಜಕೀಯ ಕಾರಣ ಇರ್ಲಿಕ್ಕಿಲ್ಲ. ಅಂಬರೀಶ್ ಅವರ ವೈಕುಂಠ ಸಮಾರಾಧನೆಯಂದಾದರೂ ಅವರು ಬರಬಹುದು ಎಂದು ಹೇಳಿದರು. ವಿಷ್ಣುವರ್ಧನ್ ಸ್ಮಾರಕ ವಿವಾದದ ಕುರಿತು ಮಾತನಾಡಿದ ಅವರು, ವಿಷ್ಣುವರ್ಧನ್ ನಮ್ಮನ್ನಗಲಿ ಒಂಭತ್ತು ವರ್ಷ […]

ಅಂಬರೀಶ್, ಜಾಫರ್ ಶರೀಫ್ ನೀಡಿರುವ ಕೊಡುಗೆಗಳು ಅನನ್ಯ: ಬಿ. ರಮಾನಾಥ ರೈ

Tuesday, November 27th, 2018
congress

ಮಂಗಳೂರು : ಇತೀಚಿಗೆ ನಿಧನರಾದ ಖ್ಯಾತ ಚಿತ್ರನಟ ಹಾಗೂ ಮಾಜಿ ಸಚಿವರ ಅಂಬರೀಶ್ ಹಾಗೂ ಕೇಂದ್ರದ ಮಾಜಿ ರೈಲ್ವೆ ಸಚಿವ ಜಾಫರ್ ಶರೀಫ್‌ರು ರಾಜ್ಯಕ್ಕೆ ಹಾಗೂ ದೇಶಕ್ಕೆ ನೀಡಿರುವ ಕೊಡುಗೆಗಳು ಅನನ್ಯವಾದುದು ಎಂದು ಮಾಜಿ ಉಸ್ತುವಾರಿ ಸಚಿವರಾದ ಶ್ರೀ ಬಿ. ರಮಾನಾಥ ರೈ ಹೇಳಿದರು. ದಿನಾಂಕ ೨೬-೧೧-೨೦೧೮ ರಂದು ಮಲ್ಲಿಕಟ್ಟೆಯಲ್ಲಿರುವ ಕಾಂಗ್ರೆಸ್ ಭವನದಲ್ಲಿ ಎರ್ಪಡಿಸಿದ ಸಂತಾಪ ಸೂಚಕ ಸಭೆಯಲ್ಲಿ ಅವರು ಮಾತನಾಡುತ್ತಿದ್ದರು. ದೇಶದಲ್ಲಿ ರೈಲ್ವೆ ಕ್ಷೇತ್ರದಲ್ಲಿ ಕ್ರಾಂತಿಕಾರಿ ಬದಲಾವಣೆ ತಂದು ವಿಕಾಸಕ್ಕೆ ಕಾರಣ ಪುರುಷರಾದ ಜಾಫರ್ ಶರೀಫ್‌ರು […]

ರಾಜ್ಯಾದ್ಯಂತ ಶೋಕಾಚರಣೆ: ಜಾಲಿ ಮೂಡಲ್ಲಿ ದೇವನಹಳ್ಳಿ ತಾ.ಪಂ ಸದಸ್ಯರು!

Monday, November 26th, 2018
zilla-panchayat

ಬೆಂಗಳೂರು: ಮಾಜಿ ಸಚಿವರಾದ ಅಂಬರೀಶ್ ಮತ್ತು ಜಾಫರ್ ಷರೀಫ್ ನಿಧನರಾದ ಹಿನ್ನಲೆಯಲ್ಲಿ ಇಡೀ ರಾಜ್ಯ ಶೋಕಾಚರಣೆಯಲ್ಲಿದೆ. ಆದರೆ ದೇವನಹಳ್ಳಿ ತಾಲೂಕಿನ ಪಂಚಾಯತ್ ಸದಸ್ಯರು ಮಾತ್ರ ಜಾಲಿ ಟ್ರಿಪ್ ಮಾಡುತ್ತಿದ್ದಾರೆ ಎಂದು ಹೇಳಲಾಗ್ತಿದೆ. ರಾಜ್ಯ ಇಬ್ಬರು ಗಣ್ಯ ವ್ಯಕ್ತಿಗಳನ್ನು ಕಳೆದುಕೊಂಡಿದ್ದು, ಸರ್ಕಾರ ಮೂರು ದಿನಗಳ ಕಾಲ ಶೋಕಾಚರಣೆ ಘೋಷಿಸಿದೆ. ಆದರೆ ದೇವನಹಳ್ಳಿ ತಾಲೂಕಿನ ಪಂಚಾಯತ್ ಸದಸ್ಯರು ಮಾತ್ರ ಜಾಲಿ ಟ್ರಿಪ್ನಲ್ಲಿದ್ದು, ಅವರ ಪೋಟೋಗಳು ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್ ಆಗಿವೆ. ಚುನಾಯಿತ ಸದಸ್ಯರುಗಳ ಈ ನಡೆಗೆ ಸಾರ್ವಜನಿಕರಿಂದ ಅಸಮಾಧಾನ […]

ರೆಬೆಲ್ ಸ್ಟಾರ್ ಅಂಬರೀಶ್@ 66…ಅಭಿಮಾನಿಗಳಿಂದ ಅಂಬಿ ಅದ್ಧೂರಿ ಹುಟ್ಟುಹಬ್ಬ ಆಚರಣೆ

Tuesday, May 29th, 2018
ambareesh

ಬೆಂಗಳೂರು: ರೆಬೆಲ್ ಸ್ಟಾರ್ ಅಂಬರೀಶ್ ಇಂದು 66ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ನಿನ್ನೆ ತಾನೇ ಪುತ್ರ ಅಭಿಷೇಕ್‌ ಮೊದಲ ಚಿತ್ರ ‘ಅಮರ್‌‌‌‌‌’ ಮುಹೂರ್ತ ನೆರವೇರಿದ್ದರಿಂದ ಡಬಲ್ ಖುಷಿಯಲ್ಲಿದ್ದಾರೆ ಅಂಬಿ. ನಿನ್ನೆ ರಾತ್ರಿಯಿಂದಲೇ ಅಭಿಮಾನಿಗಳು ಮೆಚ್ಚಿನ ನಟನಿಗೆ ಶುಭಾಶಯ ಕೋರಲು ಅಂಬರೀಶ್ ಅವರ ಜೆಪಿ ನಗರ ನಿವಾಸದ ಮುಂದೆ ಕೇಕ್‌‌‌‌, ಹೂವಿನ ಹಾರ, ಸೇಬಿನ ಹಾರದೊಂದಿಗೆ ಜಮಾಯಿಸಿದ್ದರು. ಯಾರಿಗೂ ನಿರಾಸೆ ಮಾಡದೆ ಮಂಡ್ಯದ ಗಂಡು ಅಭಿಮಾನಿಗಳೊಂದಿಗೆ ತಮ್ಮ ಹುಟ್ಟುಹಬ್ಬ ಆಚರಿಸಿಕೊಂಡರು. ಮಹಿಳಾ ಅಭಿಮಾನಿಗಳು ಕೂಡಾ ನಿನ್ನೆ ಅಂಬಿಗೆ ಶುಭ ಕೋರಲು […]

ರೆಬೆಲ್ ಸ್ಟಾರ್ ಅಂಬರೀಶ್ ಪುತ್ರ ಅಭಿಷೇಕ್ ಚಿತ್ರರಂಗಕ್ಕೆ ಎಂಟ್ರಿ..!

Saturday, May 26th, 2018
abhishek

ಬೆಂಗಳೂರು: ರೆಬೆಲ್ ಸ್ಟಾರ್ ಅಂಬರೀಶ್ ಅವರ ಪುತ್ರ ಅಭಿಷೇಕ್ ಚಿತ್ರರಂಗ ಎಂಟ್ರಿಗೆ ಎಲ್ಲ ರೀತಿಯಲ್ಲಿ ಸಜ್ಜಾಗಿದ್ದಾರೆ. ಈ ನಿಟ್ಟಿನಲ್ಲಿ ಅಭಿಷೇಕ್‌ ನಟನೆಯ ಮೊದಲ ಚಿತ್ರ ‘ಅಮರ್’ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆಯಾಗಿದೆ. ಸಖತ್ ಸ್ಟೈಲಿಷ್ ಆಗಿ ರಗಡ್ ಲುಕ್ ಕೊಡ್ತಿರೋ ಅಭಿಷೇಕ್ ಫಸ್ಟ್ ಪೋಸ್ಟರ್‌ನಲ್ಲೇ ಮೋಡಿ ಮಾಡ್ತಿದ್ದಾರೆ. ಈ ಯಂಗ್ ಸ್ಟಾರ್ ಖಂಡಿತಾ ಸ್ಯಾಂಡಲ್‌ವುಡ್‌ನಲ್ಲಿ ತಮ್ಮದೊಂದು ಛಾಪು ಮೂಡಿಸ್ತಾರೆ ಎಂದು ಮಾತನಾಡುತ್ತಿದೆ ಗಾಂಧಿನಗರ. ಸಂದೇಶ್ ನಾಗರಾಜ್ ನಿರ್ಮಾಣದಲ್ಲಿ ಮೂಡಿಬರ್ತಿರೋ ಅಮರ್‌ಗೆ ನಾಗಶೇಖರ್ ಆ್ಯಕ್ಷನ್ ಕಟ್ ಹೇಳಿದ್ದಾರೆ. ಅರ್ಜುನ್ […]

ಚುನಾವಣೆ ಬಗ್ಗೆ ಅಂಬರೀಶ್‍ ನಡೆ… ಕುತೂಹಲದ ಕಡೆ

Monday, April 9th, 2018
ambareesh

ಬೆಂಗಳೂರು: ಪಕ್ಷದ ವರಿಷ್ಠರು ನೀಡಿದ ಗಡುವನ್ನೂ ಉಲ್ಲಂಘಿಸಿದ ನಟ ಹಾಗೂ ಮಾಜಿ ಸಚಿವ ಅಂಬರೀಶ್ ಈವರೆಗೆ ತಮ್ಮ ನಿಲುವು ತಿಳಿಸಿಲ್ಲ. ಅಲ್ಲದೇ ಕಾಂಗ್ರೆಸ್‍ ತೊರೆಯುವುದಿಲ್ಲ ಎಂದು ಮತ್ತೊಮ್ಮೆ ಸ್ಪಷ್ಟಪಡಿಸಿದ್ದಾರೆ. ವಿಧಾನಸಭಾ ಚುನಾವಣೆಯಲ್ಲಿ ಕಣಕ್ಕಿಳಿಯುವ ಬಗ್ಗೆ ಯಾವುದೇ ತೀರ್ಮಾನ ಪ್ರಕಟಿಸಲು ನಿನ್ನೆ ಸಂಜೆ 4 ಗಂಟೆಯವರೆಗೆ ಪಕ್ಷ ಅವರಿಗೆ ಗಡುವು ನೀಡಿತ್ತು. ಸಂಜೆಯೊಳಗೆ ನಿರ್ಧಾರ ತಿಳಿಸಿ ಎಂದು ಕಾಂಗ್ರೆಸ್‍ ರಾಜ್ಯ ಉಸ್ತುವಾರಿ ಮುರಳೀಧರ ರಾವ್‍ ಸೂಚಿಸಿದ್ದರು. ಆದರೆ ಈ ಗಡುವಿಗೆ ಉತ್ತರ ನೀಡದ ಅಂಬರೀಶ್‍, ಪಕ್ಷ ಬಯಸಿದರೆ ಮಂಡ್ಯದಿಂದ […]

ಊಟಕ್ಕೆ ಕೈಕೊಟ್ಟ ಸಿಎಂ : ಕುತೂಹಲ ಮೂಡಿಸಿದ ಅಂಬರೀಶ್‍ ಮುಂದಿನ ನಡೆ

Tuesday, April 3rd, 2018
ambarish

ಬೆಂಗಳೂರು : ಅಂಬರೀಶ್‍ ನಿವಾಸಕ್ಕೆ ರಾತ್ರಿ ಡಿನ್ನರ್‌ಗೆ ಬರಬೇಕಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೈಕೊಟ್ಟಿರುವ ಹಿನ್ನೆಲೆಯಲ್ಲಿ ನಟ, ಮಾಜಿ ಶಾಸಕ ಅಂಬರೀಶ್‌ಗೆ ಮತ್ತೆ ಚುನಾವಣೆ ಟಿಕೆಟ್‌ ಕೈತಪ್ಪುವ ಭೀತಿ ಎದುರಾಗಿದೆ. ಬೆಂಗಳೂರಿನ ಗಾಲ್ಫ್‌ ಕ್ಲಬ್‌ ಬಳಿ ಇರುವ ಅಂಬಿ ನಿವಾಸದಲ್ಲಿ ಮುಖ್ಯಮಂತ್ರಿ ಅವರಿಗೆಂದು ಅಯೋಜನೆ ಮಾಡಿದ್ದ ಔತಣಕೂಟ ದಿಢೀರ್‌ ರದ್ದಾಗಿದೆ. ಮೈಸೂರು ಚುನಾವಣೆ ಪ್ರಚಾರದ ವೇಳೆ ಸಿಎಂ ಸಿದ್ದರಾಮಯ್ಯ ಅವರ ತಲೆಗೆ ಪೆಟ್ಟು ಬಿದ್ದಿರುವ ಹಿನ್ನೆಲೆಯಲ್ಲಿ ವಿಶ್ರಾಂತಿಗಾಗಿ ಸೀದಾ ಕಾವೇರಿ ನಿವಾಸಕ್ಕೆ ಮುಖ್ಯಮಂತ್ರಿ ತೆರಳಿದ್ದಾರೆ. ಈ ಬಗ್ಗೆ […]

ಚುನಾವಣೆಯಲ್ಲಿ ಸ್ಪರ್ಧಿಸುವ ಕುರಿತು ಅಂಬಿ ಹೇಳಿದ್ದೇನು!?

Saturday, March 31st, 2018
ambareesh

ಬೆಂಗಳೂರು: ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುವ ಕುರಿತು ಸದ್ಯಕ್ಕೆ ಯಾವುದೇ ನಿರ್ಧಾರ ಕೈಗೊಂಡಿಲ್ಲ. ಆದರೆ, ಏಪ್ರಿಲ್ 2 ರಂದು ಈ ಬಗ್ಗೆ ನಿರ್ಧಾರ ಕೈಗೊಳ್ಳುವುದಾಗಿ ಹಿರಿಯ ನಟ, ಮಾಜಿ ಸಚಿವ ಅಂಬರೀಶ್ ತಿಳಿಸಿದ್ದಾರೆ. ನಗರದಲ್ಲಿ ಇಂದು ನಡೆದ ಬೆಂಬಲಿಗರ ಸಭೆ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನಗೆ ರಾಜಕೀಯ ಎಲ್ಲ ಗೌರವಗಳನ್ನು ಸಿಗುವಂತೆ ಮಾಡಿದೆ. ಸಿನಿಮಾ ಮತ್ತು ರಾಜಕೀಯದಲ್ಲಿ ಸೋಲು, ಗೆಲುವು ಕಂಡಿದ್ದೇನೆ. ಹಾಗಾಗಿ ಎಲ್ಲವನ್ನು ಸಮಚಿತ್ತದಿಂದ ಕಾಣುವುದಾಗಿ ಹೇಳಿದರು. ನನ್ನನ್ನು ನಾಯಿ, ಕತ್ತೆ ಎಂದೆಲ್ಲ ಹೇಳಿದರು. ನಾಯಿಯ […]

ಮಂಡ್ಯ ಜಿಲ್ಲೆಯಲ್ಲಿ ಹೊಸ ಸಂಚಲನ… ರಮ್ಯಾ ತಾಯಿ ರಾಜಕೀಯಕ್ಕೆ

Tuesday, March 20th, 2018
ramya

ಮಂಡ್ಯ: ಎಐಸಿಸಿ ಸಾಮಾಜಿಕ ಜಾಲತಾಣದ ಮುಖ್ಯಸ್ಥೆ, ಮಾಜಿ ಸಂಸದೆ ರಮ್ಯಾ ತಾಯಿ ರಂಜಿತಾ ಮಂಡ್ಯ ವಿಧಾನಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕೆ ಇಳಿಯಲಿದ್ದಾರೆಯೇ? ಇಂತಹದ್ದೊಂದು ಹೊಸ ಬಾಂಬ್ ಈಗಷ್ಟೇ ಸ್ಫೋಟಗೊಂಡಿದೆ. ಇದು ಜಿಲ್ಲಾ ರಾಜಕಾರಣದಲ್ಲಿ ಹೊಸ ಸಂಚಲನಕ್ಕೂ ಕಾರಣವಾಗಿದೆ. ಕಾಂಗ್ರೆಸ್ ಪಕ್ಷ ತಮ್ಮನ್ನು ಸರಿಯಾದ ರೀತಿ ನಡೆಸಿಕೊಳ್ಳುತ್ತಿಲ್ಲ. ಎರಡೂವರೆ ದಶಕಗಳಿಂದ ಪಕ್ಷ ಸಂಘಟನೆಯಲ್ಲಿ ತೊಡಗಿದ್ದರೂ ಸೂಕ್ತ ಸ್ಥಾನ-ಮಾನ ನೀಡಿಲ್ಲವೆಂಬ ಕಾರಣದಿಂದ ಅಸಮಾಧಾನಗೊಂಡಿರುವ ರಂಜಿತಾ ಅವರು ಅನಿವಾರ್ಯವಾಗಿ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ನಿರ್ಧಾರ ಮಾಡಿದ್ದಾರೆ ಎಂದು ಆಪ್ತ ಮೂಲಗಳು […]

ಹತ್ತೇ ದಿನಗಳಲ್ಲಿ ಮನೆಗೆ ಮರಳಲಿದ್ದಾರೆ ರೆಬಲ್ ಸ್ಟಾರ್

Tuesday, March 11th, 2014
ಹತ್ತೇ ದಿನಗಳಲ್ಲಿ ಮನೆಗೆ ಮರಳಲಿದ್ದಾರೆ ರೆಬಲ್ ಸ್ಟಾರ್

ಬೆಂಗಳೂರುಃ ಶ್ವಾಸಕೋಶದ ಸೋಂಕಿನ ಚಿಕಿತ್ಸೆಗಾಗಿ ಸಿಂಗಪುರದ ಮೌಂಟ್ ಎಲಿಜಬೆತ್ ಆಸ್ಪತ್ರೆಗೆ ದಾಖಾಲಾಗಿ ಚಿಕಿತ್ಸೆ ಪಡೆಯುತ್ತಿರುವ ನಟ, ವಸತಿ ಸಚಿವ ಅಂಬರೀಶ್ ಅವರ ಆರೋಗ್ಯ ಗಣನೀಯ ಪ್ರಮಾಣದಲ್ಲಿ ಸುಧಾರಿಸಿದೆ. ಇನ್ನು ಹತ್ತೇ ದಿನಗಳಲ್ಲಿ ಅವರು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಮನೆಗೆ ಮರಳುವ ಸಾಧ್ಯತೆಗಳಿವೆ. ಈಗಾಗಲೆ ಅವರಿಗೆ ಹಾಕಲಾಗಿದ್ದ ವೆಂಟಿಲೇಟರನ್ನು ತೆಗೆಯಲಾಗಿದ್ದು ವಿಶೇಷ ವಾರ್ಡ್ ಗೆ ಸ್ಥಳಾಂತರಿಸಲಾಗಿದೆ. ಮೌಂಟ್ ಎಲಿಜತ್ ಆಸ್ಪತ್ರೆ ವೈದ್ಯರು ಚಿಕಿತ್ಸೆ ಮುಂದುವರಿಸಿದ್ದಾರೆ. ಇದುವರೆಗೂ ದ್ರವಾಹಾರ ಸೇವಿಸುತ್ತಿದ್ದ ಅವರು ಈಗ ಲಘು ಉಪಹಾರ ಸೇವಿಸುವಂತಾಗಿದೆ.  ಹತ್ತೇ ದಿನಗಳಲ್ಲಿ […]