ಗರುಡಾ ಮಾಲ್ ಬಳಿ ಅಸಭ್ಯ ವರ್ತನೆ: ಆಟೋ ಚಾಲಕ ಅರೆಸ್ಟ್..!

Tuesday, October 2nd, 2018
arrested

ಬೆಂಗಳೂರು: ಗರುಡಾ ಮಾಲ್ ಬಳಿ ಅಸಭ್ಯವಾಗಿ ವರ್ತಿಸಿದ್ದ ಆಟೋ ಚಾಲಕನನ್ನ ಅಶೋಕ್ ನಗರ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸೈಯದ್ ಮೊಹಿಬ್ ಬಂಧಿತ ಆರೋಪಿಯಾಗಿದ್ದಾನೆ. ಮೊನ್ನೆ ಸಂಜೆ 5 ಗಂಟೆಗೆ ಗರುಡಾ ಮಾಲ್ ಬಳಿ ಕಾಫಿ ಕುಡಿಯುತ್ತಿದ್ದ ಮಹಿಳೆ ಬಳಿ ಮೊಹಿಬ್ ಅನುಚಿತವಾಗಿ ವರ್ತಿಸಿದ್ದ. ಈ ಘಟನೆ ಬಗ್ಗೆ ಮಹಿಳೆ ಬೆಂಗಳೂರು ನಗರ ಪೊಲೀಸರ ಫೇಸ್ ಬುಕ್ ಖಾತೆಗೆ ವಿಡಿಯೋ ಟ್ಯಾಗ್ ಮಾಡಿದ್ದರು.‌ ಈ ದೂರಿನ ಸಂಬಂಧ ಅಶೋಕನಗರ ಪೊಲೀಸ್ ಠಾಣೆಯಲ್ಲಿ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿದ್ದರು. ಆರೋಪಿಗಾಗಿ ಪೊಲೀಸರು […]

ಬಾಡಿಗೆಗೆ ಕಾರು ಪಡೆದು ಪರಾರಿ..ಆರೋಪಿ ಸೆರೆ!

Thursday, July 12th, 2018
rented-car

ಬೆಂಗಳೂರು: ಕಾರುಗಳನ್ನು ಬಾಡಿಗೆಗೆ ನೀಡುವ ಜೂಮ್ ಸಂಸ್ಥೆಗೆ ನಕಲಿ ದಾಖಲೆಗಳನ್ನು ನೀಡಿ, ಕಾರು ಪಡೆದ ವ್ಯಕ್ತಿಯೋರ್ವ ಕಾರು ಸಮೇತ ಪರಾರಿಯಾಗಿದ್ದ ಘಟನೆ ಬೆಂಗಳೂರಿನಲ್ಲಿ ನಡೆದಿತ್ತು. ಪ್ರಕರಣದ ಬೆನ್ನತ್ತಿದ್ದ ಅಶೋಕನಗರ ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ನಗರದಲ್ಲಿ ಸಾಫ್ಟ್ವೇರ್ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದ ಮಹೇಶ್ ನೂತನ್ ಕುಮಾರ್ ಎಂಬಾತ ಅಶೋಕ ನಗರದ ಜೂಮ್ ಸಂಸ್ಥೆಯಿಂದ ಐ 20 ಕಾರನ್ನು ಬಾಡಿಗೆಗೆ ಪಡೆದಿದ್ದ. ದಾಖಲೆಗಳನ್ನು ನೀಡುವಾಗ ಸಾಯಿಕುಮಾರ್ ಎಂಬ ಹೆಸರಿನ ನಕಲಿ ದಾಖಲೆಗಳನ್ನು ನೀಡಿದ್ದ ಎಂದು ಆರೋಪಿಸಲಾಗಿದೆ. ಮೂಲತಃ […]

ತನ್ನ ಸಾಧನೆಗೆ ಶಾಲೆ, ಅಲ್ಲಿನ ಶಿಕ್ಷಣ, ಪೋಷಕರ ತ್ಯಾಗ ಹಾಗೂ ಟ್ಯೂಷನ್‍ ಸಹಕಾರ ಕಾರಣ: ಸುದರ್ಶನ್‍

Monday, May 7th, 2018
sslc-marks

ಬೆಂಗಳೂರು: ರಾಜ್ಯದಲ್ಲಿ 625ಕ್ಕೆ 625 ಅಂಕ ಪಡೆದಿರುವ ವಿದ್ಯಾರ್ಥಿ ಕೆ.ಎಸ್‍. ಸುದರ್ಶನ್ ಈ ತನ್ನ ಸಾಧನೆಗೆ ಶಾಲೆ, ಅಲ್ಲಿನ ಶಿಕ್ಷಣ, ಪೋಷಕರ ತ್ಯಾಗ ಹಾಗೂ ಟ್ಯೂಷನ್‍ ಸಹಕಾರ ಕಾರಣ ಎಂದು ಹೇಳಿಕೊಂಡಿದ್ದಾನೆ. ಬೆಂಗಳೂರಿನ ಅಶೋಕನಗರದ ಹೋಲಿ ಚೈಲ್ಡ್ ಇಂಗ್ಲಿಷ್‍ ಹೈಸ್ಕೂಲ್‍ ವಿದ್ಯಾರ್ಥಿಯಾಗಿರುವ ಸುದರ್ಶನ್‍ ಕಳೆದ 10 ವರ್ಷದಿಂದ ಬೆಂಗಳೂರಿನಲ್ಲಿ ನೆಲೆಸಿದ್ದು, ವಿಶೇಷ ಅಂದರೆ ಮೊದಲ ತರಗತಿಯಿಂದಲೂ ಪ್ರಥಮ ಸ್ಥಾನ ಪಡೆಯುತ್ತಲೇ ಬಂದಿದ್ದಾನೆ. ಈ ಬಾರಿಯೂ ಕೂಡ ಹೆಚ್ಚು ಅಂಕ ನಿರೀಕ್ಷಿಸುವ ಜತೆಗೆ ಶೇ.100ರಷ್ಟು ಅಂಕ ಗಳಿಸುವ ನಿರೀಕ್ಷೆ […]

ಕಂಕನಾಡಿ: ಸೇತುವೆಯಿಂದ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ರಿಕ್ಷಾ ಚಾಲಕ

Thursday, October 5th, 2017
Bhasheer

ಮಂಗಳೂರು: ರಿಕ್ಷಾ ಚಾಲಕನೊಬ್ಬ ಕಂಕನಾಡಿ ಬಳಿ ನೇತ್ರಾವತಿ ನದಿಯ ಸೇತುವೆ ಮೇಲಿಂದ ಜಿಗಿದು  ಆತ್ಮಹತ್ಯೆ ಮಾಡಿಕೊಂಡ ಘಟನೆ ಗುರುವಾರ ನಡೆದಿದೆ. ಅಶೋಕನಗರದ ಬಶೀರ್ ಅಹಮ್ಮದ್ ಎಂಬ ರಿಕ್ಷಾ ಚಾಲಕ ಆತ್ಮಹತ್ಯೆಗೈದ ವ್ಯಕ್ತಿ ಎಂದು ತಿಳಿದು ಬಂದಿದೆ.ರಿಕ್ಷಾ ನಿಲ್ಲಿಸಿ ಕೂಡಲೇ ನದಿಗೆ ಹಾರಿದ್ದಾರೆ ಎಂದು ಪ್ರತ್ಯಕ್ಷ ದರ್ಶಿಗಳು ತಿಳಿಸಿದ್ದಾರೆ. ಕಂಕನಾಡಿ ನಗರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು , ಪೊಲೀಸರು ಸ್ಥಳಕ್ಕಾಗಮಿಸಿದ್ದಾರೆ. ಶವಕ್ಕಾಗಿ ಹುಡುಕಾಟ ನಡೆಸಲಾಗುತ್ತಿದೆ.