ಬಹುನಿರೀಕ್ಷಿತ ‘ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ’ ಕನ್ನಡ ಚಿತ್ರ ಮೇ 25 ರಂದು ರಾಜ್ಯಾದ್ಯಂತ ಬಿಡುಗಡೆ

Tuesday, May 22nd, 2018
ananth-nag-2

ಮಂಗಳೂರು: ಕಲರ್ಸ್‌ಆಫ್ ಆನೇಕಲ್‌ ಹೆಸರಿನಲ್ಲಿ ಸುದರ್ಶನ್‌, ರಾಮಮೂರ್ತಿ ಹಾಗೂ ದುಬೈಯ ಖ್ಯಾತ ಉದ್ಯಮಿ, ಹೆಸರಾಂತ ಗಾಯಕರು ಆಗಿರುವ ಹರೀಶ್ ಶೇರಿಗಾರ್ ಮತ್ತು ಅವರ ಧರ್ಮಪತ್ನಿ ಶರ್ಮಿಳಾ ಶೇರಿಗಾರ್ ಅವರ ಆಕ್ಮೇ ಮೂವೀಸ್ ಇಂಟರ್‌ನ್ಯಾಶನಲ್ ಬ್ಯಾನರ್‌ ಅಡಿಯಲ್ಲಿ ನಿರ್ಮಾಣಗೊಂಡಿರುವ ಖ್ಯಾತ ನಿರ್ದೇಶಕ ನರೇಂದ್ರಬಾಬು ಅವರ ನಿರ್ದೇಶನದಲ್ಲಿ ಮೂಡಿ ಬಂದಿರುವ ಬಹು ನಿರೀಕ್ಷಿತ ‘ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ’ ಕನ್ನಡ ಚಲನ ಚಿತ್ರ ಮೇ 25 ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ ಎಂದು ಚಿತ್ರದ ನಿರ್ಮಾಪಕ ಹರೀಶ್ ಶೇರಿಗಾರ್ ತಿಳಿಸಿದ್ದಾರೆ. ಮಂಗಳವಾರ ಮಂಗಳೂರಿನ […]

ಸ್ಯಾಂಡಲ್‌ವುಡ್‌ನ‌ “ಲೂಟಿ” ಕನ್ನಡ ಚಿತ್ರದಲ್ಲಿ ತುಳು ಹಾಡುಗಳು

Tuesday, August 2nd, 2016
Looti Film

ಮಂಗಳೂರು: ಪ್ರಸ್ತುತ ತುಳುನಾಡಿನಲ್ಲಿ ತುಳು ಚಿತ್ರಕ್ಕೆ ಬೇಡಿಕೆ ಹೆಚ್ಚುತ್ತಿರುವ ಜತೆಗೆ ತುಳು ಚಿತ್ರಗಳ ಸಂಖ್ಯೆಯೂ ಅಧಿಕಗೊಳ್ಳುತ್ತಿದೆ. ಇದರ ಬೆನ್ನಲೇ ಇದೀಗ ಸ್ಯಾಂಡಲ್‌ವುಡ್‌ನ‌ “ಲೂಟಿ’ ಎಂಬ ಕನ್ನಡ ಚಿತ್ರದಲ್ಲಿ ಎರಡು ತುಳು ಹಾಡು ಬಳಸಿಕೊಂಡಿರುವುದು ವಿಶೇಷವೆನಿಸಿದೆ. ಈ ಕುರಿತು ನಗರದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಚಿತ್ರದ ನಿರ್ಮಾಪಕ ನಿರಂಜನ್‌ ಎನ್‌.ಎಂ., ಚಿತ್ರದಲ್ಲಿ ಒಟ್ಟು 6 ಹಾಡುಗಳಿದ್ದು, “ಖುಷಿ’, “ಕೊಡಿ ತೆಲಿಕೆ ಬಳ್ಳಿ ಯಾನ್‌’ ಎಂಬ 2 ಹಾಡುಗಳು ತುಳುವಿನಲ್ಲಿದೆ. ತುಳುನಾಡನ್ನು ಹೊರತುಪಡಿಸಿ ಉಳಿದೆಡೆ “ಲೂಟಿ’ ಪ್ರದರ್ಶನದ ವೇಳೆ […]

ಮೋಹಕ ಬೆಡಗಿ ತ್ರಿಷಾ ಕೃಷ್ಣನ್ ಕನ್ನಡಕ್ಕೆ ಎಂಟ್ರಿ

Thursday, December 27th, 2012
Trisha Krishnan

ತಮಿಳು , ತೆಲುಗು, ಹಿಂದಿ ಚಿತ್ರಗಳಲ್ಲಿ ಅಭಿನಯಿಸಿದ ನಟಿ ತ್ರಿಷಾ ಕೃಷ್ಣನ್ ಚೊಚ್ಚಲ ಕನ್ನಡ ಚಿತ್ರ ‘ರಮ್’ ನಲ್ಲಿ ಅಭಿನಯಿಸುತ್ತಿದ್ದಾಳೆ. ಈ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. ‘ರಮ್’ ಇದೊಂದು ತ್ರಿಭಾಷಾ ಚಿತ್ರವಾಗಿದ್ದು ಕನ್ನಡ ಸೇರಿದಂತೆ ತೆಲುಗು, ತಮಿಳಿನಲ್ಲೂ ಚಿತ್ರ ಏಕಕಾಲಕ್ಕೆ ಸೆಟ್ಟೇರಲಿದೆ. ಜನವರಿ 2013ಕ್ಕೆ ಸೆಟ್ಟೇರಲಿರುವ ಈ ಚಿತ್ರದ ಟೈಟಲ್ RUM (ರಂಭೆ ಊರ್ವಶಿ ಮೇನಕೆ). ಇದೊಂದು ಮಹಿಳಾ ಪ್ರಧಾನ ಚಿತ್ರವಾಗಿದ್ದು, ಚಿತ್ರದ ಪಾತ್ರವರ್ಗದ ಬಗ್ಗೆ ಚಿತ್ರತಂಡ ಇನ್ನೂ ಏನನ್ನು ಹೇಳಿಲ್ಲ. ಟಾಲಿವುಡ್ ಟಾಪ್ […]

ಉಪೇಂದ್ರ ಹೊಸ ಚಿತ್ರ ‘ಶ್ರೀಮತಿ’

Wednesday, July 6th, 2011
srimathi/ ಶ್ರೀಮತಿ

ಹಿಂದಿಯ ‘ಐತ್‌ರಾಜ್’ ಚಿತ್ರದ ರೀಮೇಕ್ ‘ಶ್ರೀಮತಿ’ ರಿಯಲ್ ಸ್ಟಾರ್ ಉಪೇಂದ್ರ ಅಭಿನಯದಲ್ಲಿ ತಯಾರಾಗಿದೆ. ಅಂದ ಹಾಗೆ ಈ  ಚಿತ್ರ ವಯಸ್ಕರಿಗೆ ಮಾತ್ರ. ಉಪ್ಪಿ ಜೊತೆ ಅವರ ಶ್ರೀಮತಿ ಪ್ರಿಯಾಂಕಾ ಉಪೇಂದ್ರಕೂಡಾ ಅಭಿನಯಿಸಿದ್ದಾರೆ.  ಸೆಲೀನಾ ಜೇಟ್ಲಿ, ಪ್ರೇಮ್ ಚೋಪ್ರಾ, ಕೋಟ, ಸಯ್ಯಾಜಿ ಶಿಂಧೆ ತಾರಾಗಣದ ಈ  ಚಿತ್ರಕ್ಕೆ ಪ್ರಾದೇಶಿಕ ಸೆನ್ಸಾರ್ ಮಂಡಳಿ ‘ಎ’ ಸರ್ಟಿಫಿಕೇಟ್ ನೀಡಿದೆ. ಹದಿ ಹರೆಯದ ಯುವಕರನ್ನು ಬೆಚ್ಚಗೆ ಮಾಡುವ ಕೆಲವು ದೃಶ್ಯಗಳಿರುವುದೇ “ವಯಸ್ಕರ ಚಿತ್ರ”ದ ಹಣೆಪಟ್ಟಿ ಬೀಳಲು ಕಾರಣ ಎನ್ನಲಾಗಿದೆ. ಜುಲೈ 8ಕ್ಕೆ ಉಪೇಂದ್ರ […]

ಹೆಣ್ಣು ಮಗುವಿಗೆ ಜನ್ಮ ನೀಡಿದ ನಟಿ ರಂಭಾ

Thursday, January 20th, 2011
ರಂಭಾ

ಬೆಂಗಳೂರು :  ‘ಸರ್ವರ್ ಸೋಮಣ್ಣ’ ಕನ್ನಡ ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದ  ದಕ್ಷಿಣ ಭಾರತದ ನಟಿ ರಂಭಾ ಸಂಕ್ರಾಂತಿ ಹಬ್ಬ, ಜನವರಿ 14ರಂದು ಕೆನಡಾದ ಟೊರೊಂಟೊದಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಕೆನಡಾದಲ್ಲಿ ನೆಲೆಸಿರುವ ಭಾರತೀಯ ಉದ್ಯಮಿ ಇಂದಿರನ್ ಪದ್ಮನಾಭನ್ ಅವರನ್ನು ರಂಭಾ ಕಳೆದ ವರ್ಷದ ಏಪ್ರಿಲ್ 8ರಂದು ತಿರುಪತಿಯಲ್ಲಿ ವರಿಸಿದ್ದರು ನಂತರ ನ್ಯೂಜಿಲಂಡ್ ಗೆ ಮಧುಚಂದ್ರಕ್ಕೆಂದು ಹೋಗಿದ್ದರು. ಹೆರಿಗೆ ಆಗುವಾಗ ರಂಭಾ ಕುಟುಂಬದ ಸದಸ್ಯರು ಆಸ್ಪತ್ರೆಯಲ್ಲಿ ಉಪಸ್ಥಿತರಿದ್ದರೆಂದು ಮೂಲಗಳಿಂದ ತಿಳಿದುಬಂದಿದೆ. ನವರಸ ನಾಯಕ ಜಗ್ಗೇಶ್ ಜೊತೆಯಲ್ಲಿ […]