ಬಾವಿಯಲ್ಲಿ ನಾಲ್ವರು ಅಪರಿಚಿತರ ಮೃತದೇಹ ಪತ್ತೆ..!

Thursday, July 12th, 2018
suicide

ಕೋಲಾರ: ಬಾವಿಯಲ್ಲಿ ಅನುಮಾನಾಸ್ಪದವಾಗಿ ನಾಲ್ಕು ಮಂದಿ ಅಪರಿಚಿತರ ಶವ‌ ಪತ್ತೆಯಾಗಿರುವುದು ಕೋಲಾರ ಜಿಲ್ಲೆ ಮುಳಬಾಗಿಲು ತಾಲೂಕಿನ ಬೆಟ್ಟಗೇರಹಳ್ಳಿ ಬಳಿ ಕಂಡುಬಂದಿದೆ. ಗ್ರಾಮದ‌ ನಾರಾಯಣಸ್ವಾಮಿ ಎಂಬುವರ ಬಾವಿಯಲ್ಲಿ ಶವ ಪತ್ತೆಯಾಗಿದ್ದು, ಕಳೆದ ಎರಡು ದಿನಗಳ‌ ಹಿಂದೆ ಬಾವಿಗೆ ಬಿದ್ದಿರುವ ಶಂಕೆ ವ್ಯಕ್ತವಾಗಿದೆ. ಇಬ್ಬರು ಮಹಿಳೆಯರು ಮತ್ತು ಇಬ್ಬರ ಮಕ್ಕಳ ಮೃತದೇಹಗಳು ಪತ್ತೆಯಾಗಿದ್ದು, ಮೃತರ ಹೆಸರುಗಳು ಹಾಗೂ ಗುರುತು ತಿಳಿದು ಬಂದಿಲ್ಲ. ಮುಳಬಾಗಿಲು ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ದೇಶದ ಜನರನ್ನು ನಾಲ್ಕು ವರ್ಷದಿಂದ ಮೋದಿ ಸರ್ಕಾರ ವಂಚಿಸಿದೆ: ಪಾಂಡಿಚೇರಿ ಸಿಎಂ ನಾರಾಯಣಸ್ವಾಮಿ

Wednesday, May 2nd, 2018
pandichaury

ಮಂಗಳೂರು: ಮೋದಿಯ ಸುನಾಮಿ ಕರ್ನಾಟಕವನ್ನು ಹಾಳುಗೆಡವಲಿದೆ ಎಂದು ಪಾಂಡಿಚೇರಿ ಸಿಎಂ ನಾರಾಯಣಸ್ವಾಮಿ ಹೇಳಿದರು. ನಗರದಲ್ಲಿಂದು ಕಾಂಗ್ರೆಸ್‌ ಪರ ಮತಯಾಚನೆಯಲ್ಲಿ ಪಾಲ್ಗೊಂಡು ಮಾತನಾಡಿರುವ ಅವರು, ಸಿಎಂ ಸಿದ್ದರಾಮಯ್ಯ ಚುನಾವಣಾ ಭರವಸೆಗಳನ್ನು ಈಡೇರಿಸಿದ್ದಾರೆ. ಬಂಡವಾಳ ಹೂಡಿಕೆಯಲ್ಲಿ ಈ ರಾಜ್ಯ ಮೊದಲ ಸ್ಥಾನದಲ್ಲಿದೆ. ಐದು ವರ್ಷಗಳಿಂದ ಕರ್ನಾಟಕ ರಾಜ್ಯ ಉತ್ತಮ ಪ್ರಗತಿ ದಾಖಲಿಸಿದೆ ಎಂದು ರಾಜ್ಯ ಕಾಂಗ್ರೆಸ್ ಪರ ಬ್ಯಾಟಿಂಗ್ ಮಾಡಿದ್ರು. ಇನ್ನು ಮೋದಿ ವಿರುದ್ಧ ಟೀಕಾಪ್ರಹಾರ ನಡೆಸಿರುವ ನಾರಾಯಣಸ್ವಾಮಿ, ಮೋದಿ ಸರ್ಕಾರ ರೈತರ ಪರ ಎಂದು ಹೇಳುತ್ತಾರೆ. ಆದರೆ, ಸಾಲ […]

ರೌಡಿಗಳೆಲ್ಲಾ ಸಿಎಂ ಮನೆ ಸೇರಿದ್ದಾರೆ: ಆರ್. ಅಶೋಕ್

Wednesday, March 14th, 2018
R-ashok

ಬೆಂಗಳೂರು: ಮಹಾನಗರದಲ್ಲಿ ರೌಡಿಗಳೆಲ್ಲಾ ಸಿಎಂ ಸಿದ್ದರಾಮಯ್ಯ ಮನೆ ಸೇರಿಕೊಂಡಿದ್ದಾರೆ. ಅವರಿಗೆ ಮುಖ್ಯಮಂತ್ರಿಯೇ ಆಶ್ರಯ ನೀಡುತ್ತಿದ್ದಾರೆ ಎಂದು ಮಾಜಿ ಉಪಮುಖ್ಯಮಂತ್ರಿ ಆರ್. ಅಶೋಕ್ ಆರೋಪಿಸಿದ್ದಾರೆ. ಬೆಂಗಳೂರಿನ ಪುಲಕೇಶಿನಗರ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯಲ್ಲಿ ಇಂದು ಬೆಳಗ್ಗೆ ಹಮ್ಮಿಕೊಂಡಿದ್ದ ಬೆಂಗಳೂರು ರಕ್ಷಿಸಿ ಪಾದಯಾತ್ರೆಯಲ್ಲಿ ಪಾಲ್ಗೊಂಡು ಮಾತನಾಡಿದರು. ನಾನು ಗೃಹ ಸಚಿವನಾಗಿದ್ದಾಗ ರೌಡಿಗಳು ಪರಾರಿಯಾಗಿದ್ದರು. ಜೀವ ಉಳಿಸಿಕೊಳ್ಳಲು ಬೆಂಗಳೂರಿನಿಂದ ಓಡಿ ಹೋಗಿದ್ದರು. ಆದರೆ ಅವರೆಲ್ಲಾ ವಾಪಸಾಗಿ ಸಿಎಂ ಮನೆ ಸೇರಿದ್ದಾರೆ ಎಂದು ಹೇಳಿದರು. ಮೊಹಮದ್ ನಲಪಾಡ್, ನಾರಾಯಣಸ್ವಾಮಿ ಅಂತವರು ಏನು ಮಾಡಿದ್ದಾರೆ ಎನ್ನುವುದು […]