ತಲ್ವಾರ್ ಹಿಡಿದು ಕೊಲೆ ಯತ್ನ ಪ್ರಕರಣ..ಮೂವರ ಬಂಧನ!

Thursday, July 12th, 2018
arrested

ಮಂಗಳೂರು: ಜೂನ್ 11ರಂದು ಬಂಟ್ವಾಳ ಠಾಣಾ ವ್ಯಾಪ್ತಿಯ ಬಡ್ಡಕಟ್ಟೆಯಲ್ಲಿ ತಲವಾರು ಹಿಡಿದು ಯುವಕರ ಕೊಲೆಗೆ ಯತ್ನಿಸಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ತಲೆಮರೆಸಿಕೊಂಡಿದ್ದ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ. ಬಂಟ್ವಾಳ ತಾಲೂಕು ಬಿ ಕಸಬ ಗ್ರಾಮದ ಕಬ್ಬಿನ ಹಿತ್ಲು ಮನೆ ನಿವಾಸಿಗಳಾದ ಪ್ರದೀಪ್ (28), ತಿಲಕ್ (28) ಮತ್ತು ಬಿಷಪ್ ಕಂಪೌಂಡ್ ನಿವಾಸಿ ಮನೋಹರ್ (28) ಬಂಧಿತ ಆರೋಪಿಗಳು. ಜೂನ್ 11ರಂದು ಘಟನೆ ನಡೆದಿದ್ದು, ಪ್ರಕರಣದ ಮುಖ್ಯ ಆರೋಪಿಯಾಗಿದ್ದ ಸುರೇಂದ್ರ ಭಂಡಾರಿ , ಸತೀಶ್ ಕುಲಾಲ್ ಹಾಗೂ ಪೃಥ್ವಿರಾಜ್ ಜೆ ಶೆಟ್ಟಿ […]

ನೀರುಪಾಲಾದ ಬಾಲಕಿಯ ಮೃತದೇಹ ಪಡುಬಿದ್ರೆಯಲ್ಲಿ ಪತ್ತೆ..!

Wednesday, May 30th, 2018
padubidre

ಉಡುಪಿ: ಮಂಗಳವಾರ ಸಂಜೆ ನೀರುಪಾಲಾದ ಬಾಲಕಿಯ ಮೃತದೇಹ ಇಂದು ಉಡುಪಿ ಜಿಲ್ಲೆ ಕಾಪು ತಾಲೂಕಿನ ಪಡುಬಿದ್ರೆಯಲ್ಲಿ ಪತ್ತೆಯಾಗಿದೆ. ನಿಧಿ ಆಚಾರ್ಯ(9) ನೀರುಪಾಲಾಗಿದ್ದ ಬಾಲಕಿ. 4ನೇ ವಿದ್ಯಾರ್ಥಿನಿ ನಿಧಿ ಆಚಾರ್ಯ ನೀರುಪಾಲಾಗಿದ್ದಳು. ಕಳೆದ ರಾತ್ರಿ ಅಗ್ನಿಶಾಮಕ, ಪೊಲೀಸರು, ಸ್ಥಳೀಯರು ಕಾರ್ಯಾಚರಣೆ ಮಾಡಿದ್ದರು. ಆದರೆ ಬಾಲಕಿ ನಿಧಿ ಪತ್ತೆಯಾಗಿರಲಿಲ್ಲ. ಇದೀಗ ಇಂದು ಘಟನಾ ಸ್ಥಳದಿಂದ 100 ಮೀ ದೂರದಲ್ಲಿ ನಿಧಿ ಮೃತದೇಹ ಪತ್ತೆಯಾಗಿದೆ. ಎನ್‍ಡಿಆರ್ ಎಫ್ ಅಧಿಕಾರಿಗಳು ಬಂದು ಶೋಧ ಕಾರ್ಯ ಆರಂಭದಲ್ಲೇ ಮೃತದೇಹ ಸಿಕ್ಕಿದೆ. ಎನ್‍ಡಿಆರ್ ಎಫ್ ಜೊತೆ […]

ಹಿರಿಯ ನಟ, ನಿರ್ದೇಶಕ, ಕಾಶಿನಾಥ್‌ ನಿಧನ 

Thursday, January 18th, 2018
kashinath

ಬೆಂಗಳೂರು: ಕನ್ನಡ ಚಿತ್ರರಂಗದ ಹಿರಿಯ ನಟ, ನಿರ್ದೇಶಕ, ನಿರ್ಮಾಪಕ ಕಾಶಿನಾಥ್‌ ಇನ್ನಿಲ್ಲ. ಬೆಂಗಳೂರು ನಗರದ ಖಾಸಗಿ ಆಸ್ಪತ್ರೆಯಲ್ಲಿ ಕಾಶಿನಾಥ್‌ ಇಂದು ವಿಧಿವಶರಾಗಿದ್ದಾರೆ. ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಕಾಶಿನಾಥ್‌ 2 ದಿನಗಳ ಹಿಂದೆ ಆಸ್ಪತ್ರೆಗೆ ದಾಖಲಾಗಿದ್ದರು. ನಗರದ ಶ್ರೀಶಂಕರ್‌ ಆಸ್ಪತ್ರೆಯಲ್ಲಿ ಅವರು ಚಿಕಿತ್ಸೆ ಪಡೆಯುತ್ತಿದ್ದರು. ಆದರೆ, ಇಂದು ಚಿಕಿತ್ಸೆ ಫಲಕಾರಿಯಾಗದೆ ಕಾಶಿನಾಥ್‌ ಕೊನೆಯುಸಿರುಳೆದಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಹೊಸ ಅಲೆ ಸೃಷ್ಟಿಸಿದ್ದವರು ಕಾಶಿನಾಥ್‌. ಉಪೇಂದ್ರ, ಮನೋಹರ್, ಸುನೀಲ್‍ಕುಮಾರ್ ದೇಸಾಯಿ ಮುಂತಾದ ಹೆಸರಾಂತ ನಿರ್ದೇಶಕರನ್ನು ಕಾಶಿನಾಥ್‌ ಕನ್ನಡ ಚಿತ್ರರಂಗಕ್ಕೆ ಪರಿಚಯಿಸಿದ್ದರು. ಚಿತ್ರರಂಗದಲ್ಲಿ ಹೊಸ […]