ನಿವೃತ್ತ ಸೈನಿಕನ ಪತ್ನಿ ತನ್ನ ಮಗಳನ್ನು ಬಾವಿಗೆ ಎಸೆದು ತಾನು ಆತ್ಮಹತ್ಯೆ !

Thursday, July 11th, 2013
Bantwal Death

ಬಂಟ್ವಾಳ:  ನಿವೃತ್ತ ಸೈನಿಕ ನವೀನ್ ಚಂದ್ರ ಎಂಬವರ ಪತ್ನಿ ಪ್ರತಿಮಾ(32) ತನ್ನ ಮಗಳು ದಿಯಾ(9) ಜೊತೆ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ದಾರುಣ ಘಟನೆ ಬಂಟ್ವಾಳ ಸಮೀಪದ ಮೆಲ್ಕಾರ್ ಎಂಬಲ್ಲಿ ನಡೆದಿದೆ. ಗುರುವಾರ ಮುಂಜಾನೆ ಈರ್ವರ ಶವ  ಮನೆ ಸಮೀಪದ ಬಾವಿಯಲ್ಲಿ ಪತ್ತೆಯಾಗಿದೆ, ಕೌಟುಂಬಿಕ ವಿರಸದಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗುತ್ತದೆಯಾದರೂ, ಸ್ಪಷ್ಟ ಕಾರಣ ಇನ್ನಷ್ಟೇ ತಿಳಿಯಬೇಕಿದೆ. ಮೆಲ್ಕಾರ್ ನಲ್ಲಿ ವಾಸ್ತವ್ಯ ವಿರುವ ಪ್ರತಿಮಾ ಮಂಗಳೂರಿನ ಎಜೆ ಆಸ್ಪತ್ರೆಯಲ್ಲಿ ದಾದಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಮಗಳು ದಿಯಾ ಪಾಣೆಮಂಗಳೂರು […]

ಬೆಳ್ತಂಗಡಿ ತಾ.ಪಂ. ಮಾಜಿ ಅಧ್ಯಕ್ಷ ರಸ್ತೆ ಅಪಘಾತಕ್ಕೆ ಬಲಿ

Tuesday, July 9th, 2013
T G Joy

ಬೆಳ್ತಂಗಡಿ: ಬೆಳ್ತಂಗಡಿ ತಾ.ಪಂ. ಮಾಜಿ ಅಧ್ಯಕ್ಷ ಟಿ.ಜಿ. ಜೋಯ್(49) ಹಾಸನದ ಬೆಳ್ಳೂರು ಕ್ರಾಸ್ ಬಳಿ ಜುಲೈ 4ರಂದು ಸಂಭವಿಸಿದ ರಸ್ತೆ ಅಪಘಾತದಲ್ಲಿ ಗಂಭೀರ ಗಾಯಗೊಂಡು ಚಿಕಿತ್ಸೆ ಫಲಕಾರಿಯಾಗದೆ ನಿಧನರಾದರು. ಬೆಂಗಳೂರಿನ ಜಯನಗರದ ಖಾಸಗಿ ಆಸ್ಪತ್ರೆಗೆ ಇವರನ್ನು ದಾಖಲಿಸಲಾಗಿತ್ತು. ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆಯಿಂದ ಚೇತರಿಕೆ ಕಂಡು ಬಾರದೆ ಭಾನುವಾರ ರಾತ್ರಿ ಕೊನೆಯುಸಿರೆಳೆದರು. ಪತ್ನಿ, ತಾಯಿ, ಪುತ್ರನನ್ನು ಅಗಲಿದ್ದಾರೆ. ಸಿರಿಯನ್ ಕೆಥೋಲಿಕ್ ಸೊಸೈಟಿ ಅಧ್ಯಕ್ಷರಾಗಿದ್ದ ಜೋಯ್, ಮಲಯಾಳಿ ಕ್ರಿಶ್ಚಿಯನ್ ಅಸೋಶಿಯೇಶನ್ ಉಪಾಧ್ಯಕ್ಷರಾಗಿದ್ದರು. ತಾ.ಪಂ.ಮಾಜಿ ಅಧ್ಯಕ್ಷರಾಗಿ, ಎಪಿಎಂಸಿ […]

ಮಣಿಪಾಲದಲ್ಲಿ ವಿದ್ಯಾರ್ಥಿನಿಯ ಮೇಲಿನ ಅತ್ಯಾಚಾರ ಖಂಡಿಸಿ ಅಭಾವಿಪದಿಂದ ಬೃಹತ್ ಪ್ರತಿಭಟನೆ

Sunday, June 23rd, 2013
abvp students protest

ಮಂಗಳೂರು : ಉಡುಪಿ ಜಿಲ್ಲೆಯ ಮಣಿಪಾಲದಲ್ಲಿ ವೈದ್ಯಕೀಯ ವಿದ್ಯಾರ್ಥಿನಿಯ ಮೇಲೆ ನಡೆದ ಸಾಮೂಹಿಕ ಅತ್ಯಾಚಾರವನ್ನು ಖಂಡಿಸಿ ಮಂಗಳೂರು ಅಭಾವಿಪವು ಬೆಸೆಂಟ್ ಕಾಲೇಜು ವೃತ್ತದಲ್ಲಿ ರಸ್ತೆ ತಡೆ ನಡೆಸಿ ಪ್ರತಿಭಟನಾ ಸಭೆಯನ್ನು ನಡೆಸಿತು. ನೂರಾರು ವಿದ್ಯಾರ್ಥಿ/ ವಿದ್ಯಾರ್ಥಿನಿಯರು  ಪ್ರತಿಭಟನೆಯಲ್ಲಿ ಭಾಗವಹಿಸಿ ಅತ್ಯಾಚಾರ ಪ್ರಕರಣದ ವಿರುದ್ಧ ಘೋಷಣೆ ಕೂಗಿದರು. ಈ ಸಂದರ್ಭದಲ್ಲಿ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಮಂಗಳೂರು ವಿ.ವಿ. ಸಿಂಡಿಕೇಟ್ ಸದಸ್ಯ, ಅಭಾವಿಪದ ಮಾಜಿ ರಾಜ್ಯ ಕಾರ್ಯದರ್ಶಿ ರವಿಚಂದ್ರ ಪಿ.ಎಂ. ಇದೊಂದು ಹೇಯ ಕೃತ್ಯವಾಗಿದ್ದು, ಸರಕಾರ 24 ತಾಸೊಳಗೆ ಆರೋಪಿಗಳನ್ನು […]

ಪಿವಿಎಸ್ ಸಮೂಹ ಸಂಸ್ಥೆಗಳ ಅಧ್ಯಕ್ಷ ಮಧುಸೂದನ ಡಿ.ಕುಶೆ ನಿಧನ

Thursday, May 23rd, 2013
Madhusudan Kushe

ಮಂಗಳೂರು : ನೂರು ವರ್ಷ ಇತಿಹಾಸವುಳ್ಳ ಪ್ರತಿಷ್ಠಿತ ಪಿವಿಎಸ್ ಸಮೂಹ ಸಂಸ್ಥೆಗಳ ಅಧ್ಯಕ್ಷರಾದ ಮಧುಸೂದನ ಡಿ.ಕುಶೆ (78) ಅವರು ಬುಧವಾರ ಆರೋಗ್ಯ ಸಮಸ್ಯೆಯಿಂದಾಗಿ ತಮ್ಮ ಸ್ವಗೃಹದಲ್ಲಿ ನಿಧನ ಹೊಂದಿದ್ದಾರೆ. ಕುಶೆ ಅವರ ತಂದೆ ದಿ. ಪುತ್ತು ವೈಕುಂಠ ಶೇಟ್ ಅವರು ಒಂದು ಶತಮಾನದ ಹಿಂದೆ ಸ್ಥಾಪಿಸಿದ ಪಿ.ವಿ.ಎಸ್ ಬೀಡಿ ಸಂಸ್ಥೆಯ ಆಡಳಿತ ಚುಕ್ಕಾಣಿಯನ್ನು ತಮ್ಮ 21 ನೇ ವಯಸ್ಸಿನಲ್ಲಿ ವಹಿಸಿಕೊಂಡ ಮಧುಸೂದನ ಕುಶೆ ಸಂಸ್ಥೆ ಯನ್ನು ಅಂತರಾಷ್ಟ್ರೀಯ ಮಟ್ಟಕ್ಕೆ ಬೆಳೆಸಿ ಜರ್ಮನಿ, ಆಸ್ಟ್ರೇಲಿಯಾ ಮೊದಲಾದ ದೇಶಗಳಿಗೆ ಬೀಡಿಯನ್ನು […]

ಪಡುಬಿದ್ರೆ : ರಾಷ್ಟ್ರೀಯ ಹೆದ್ದಾರಿ ಬೀಡಿನಕೆರೆ ಬಳಿ ಅಪಘಾತ ಮೂವರ ದುರ್ಮರಣ

Wednesday, May 22nd, 2013
car truck accident padubidri

ಪಡುಬಿದ್ರೆ : ಮಂಗಳವಾರ ಮದ್ಯಾಹ್ನ 2;30 ರ ಸುಮಾರಿಗೆ ಪಡುಬಿದ್ರೆ ಮತ್ತು ಕಾಪು ನಡುವಿನ ರಾಷ್ಟ್ರೀಯ ಹೆದ್ದಾರಿ  ಬೀಡಿನಕೆರೆ ಬಳಿ ಕಾರು ಮತ್ತು ಟ್ಯಾಂಕರ್ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ದಂಪತಿ ಸೇರಿದಂತೆ ಒಟ್ಟು ಮೂವರು ಮೃತಪಟ್ಟಿದ್ದಾರೆ. ಮೃತರನ್ನು ಮಜೂರು ಗ್ರಾಮ ಪಂಚಾಯತ್ ಕಾರ್ಯದರ್ಶಿ, ನಿಟ್ಟೆ ನಿವಾಸಿ ಅರುಣಾ ಸತೀಶ್ ರೈ(55), ಆಕೆಯ ಪತಿ ಸತೀಶ್ ರೈ(57) ಹಾಗು ಸತೀಶ ರೈ ರ ಗೆಳೆಯ, ಕಾರು ಚಾಲಕ ಸುರತ್ಕಲ್ ಕೃಷ್ಣಾಪುರ 7  ನೇ ಬ್ಲಾಕ್ ನಿವಾಸಿ […]

ಕಾಪು : ರಸ್ತೆ ಅಪಘಾತ ದಂಪತಿ ಸಾವು

Wednesday, May 22nd, 2013
bike bus accident Kaup

ಕಾಪು : ಕೆಎಸ್‌ಆರ್‌ಟಿಸಿ ವೋಲ್ವೋ ಬಸ್‌ನ ಚಾಲಕ ಟ್ಯಾಂಕರೊಂದನ್ನು ಹಿಂದಿಕ್ಕುವ ಭರದಲ್ಲಿ ಕೈನೆಟಿಕ್‌ ಹೋಂಡಾಕ್ಕೆ ಢಿಕ್ಕಿ ಹೊಡೆದ ಪರಿಣಾಮ ದಂಪತಿ ಮೃತಪಟ್ಟ ಘಟನೆ ಮಂಗಳವಾರ ರಾಷ್ಟ್ರೀಯ ಹೆದ್ದಾರಿ 66ರ ಕಾಪು ಹಳೇ ಮಾರಿಗುಡಿ ದೇವಸ್ಥಾನದ ಮುಂಭಾಗದ ದ್ವಾರದ ಬಳಿ ನಡೆದಿದೆ. ಮೃತರು ಕಾಪು ಪಡು ಗ್ರಾಮದ ತೆಂಕುಕರೆ ಹೊಸಮನೆಯ ಬಾಲಕೃಷ್ಣ ಶೆಟ್ಟಿ(50), ಮತ್ತು ಅವರ ಪತ್ನಿ ಮಮತಾ ಶೆಟ್ಟಿ (40).  ಮೃತ ಬಾಲಕೃಷ್ಣ   ಕುರ್ಕಾಲು -ಸುಭಾಶ್ ನಗರದಲ್ಲಿ ಜೀನಸು ವ್ಯಾಪಾರ ನಡೆಸುತ್ತಿದ್ದು, ಮಂಗಳವಾರ ದಂಪತಿ ಕುರ್ಕಾಲುವಿನಿಂದ ಕಾಪು […]

ರಾಜ್ಯ ಹೆದ್ದಾರಿ ಆಲಂಕಾರು ಬಳಿ ಅಪಘಾತ, ಬೈಕ್ ಸಹಸವಾರನ ಸಾವು, ಸವಾರ ಗಂಭೀರ

Tuesday, May 21st, 2013
Alankaru bike accident

ಪುತ್ತೂರು : ಸೋಮವಾರ ಮಧ್ಯಾಹ್ನ ಉಪ್ಪಿನಂಗಡಿ- ಕಡಬ- ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಆಲಂಕಾರು ಸಮೀಪ ಮಾಯಿಲ್ಗ ಎಂಬಲ್ಲಿ ಟಿಪ್ಪರ್ ಮತ್ತು ಬೈಕ್ ನಡುವೆ ಸಂಭವಿಸಿದ ಅಪಘಾತದಲ್ಲಿ ಬೈಕ್ ಸಹಸವಾರ ಮೃತಪಟ್ಟಿದ್ದು, ಬೈಕ್ ಸವಾರ ಗಂಬೀರವಾಗಿ ಗಾಯಗೊಂಡಿದ್ದಾರೆ. ಆಲಂಕಾರು ಗ್ರಾಮದ ಕೇಪುಳು ದಿ.ಕೃಷ್ಣಪ್ಪ ಪೂಜಾರಿ ಅವರ ಪುತ್ರ ದಿವಾಕರ (30) ಸಾವಿಗೀಡಾದ ದುರ್ದೈವಿಯಾಗಿದ್ದಾರೆ. ದಿವಾಕರ ಮತ್ತು ಅವರ ಸಹೋದರ ದಿನೇಶ  ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳುವ ನಿಮಿತ್ತ ಆಲಂಕಾರಿನಿಂದ ಕುಂತೂರು ಕಡೆ ಹೊರಟ್ಟಿದ್ದು ಬೈಕ್ ಮಾಯಿಲ್ಗ ಸಮೀಪದ ತಿರುವುನಲ್ಲಿಗೆ ತಲುಪುತ್ತಿದ್ದಂತೆ ಎದುರಿನಿಂದ […]

ಕುಂದಾಪುರ: ಟಿಪ್ಪರ್-ಒಮ್ನಿ ಡಿಕ್ಕಿ ಓರ್ವ ಸಾವು, ಮೂರು ಮಂದಿ ಗಂಭೀರ

Tuesday, April 23rd, 2013
Accident

ಕುಂದಾಪುರ: ಒಮ್ನಿ ಹಾಗು ಟಿಪ್ಪರ್ ನಡುವೆ ಸೊಮವಾರ ಕುಂದಾಪುರದ ಹಕ್ಲಾಡಿ ಸಮೀಪ ನಡೆದ ಅಪಘಾತದಲ್ಲಿ  ಒಬ್ಬಾತ ಮೃತಪಟ್ಟಿದ್ದು, ಮೂರು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಮೃತರನ್ನು ಕಂದಾವರ ಉಳ್ಳೂರಿನ ರವೀಂದ್ರ ಪೂಜಾರಿ(28) ಎಂದು ಗುರುತಿಸಲಾಗಿದೆ. ವಿದೇಶದಲ್ಲಿ ಉದ್ಯೋಗಿಯಾಗಿದ್ದ ಆಲೂರಿನ ಸಸಿಹಿತ್ಲು ನಿವಾಸಿ ಶಂಕರ ಪೂಜಾರಿ(೪೧) ಎರಡು ದಿನಗಳ ಹಿಂದೆ ರಜೆ ನಿಮಿತ್ತ ಮುಂಬೈನಲ್ಲಿದ್ದ ತನ್ನ ಪತ್ನಿ ಸರೋಜ(೩೭)  ಹಾಗು ಪುತ್ರಿಯರಾದ ಸ್ವಪ್ನ(೧೧), ಸ್ವಯಂ(೫) ರೊಂದಿಗೆ ಊರಿಗೆ ಮರಳಿದ್ದರು. ಸೋಮವಾರ ಹೆಂಡತಿ ಸರೋಜಾ, ಮಕ್ಕಳಾದ ಸಪ್ನಾ(೧೧) ಮತ್ತು ಸ್ವಯಂ(೫) ಹಾಗು […]

ಕೆರೆಯಲ್ಲಿ ಈಜಲು ತೆರಳಿದ ಇಬ್ಬರು ವಿದ್ಯಾರ್ಥಿಗಳು ನೀರುಪಾಲು

Friday, April 12th, 2013
Karinja temple pond

ಬಂಟ್ವಾಳ : ಕಾರಿಂಜೇಶ್ವರ ದೇವಸ್ಥಾನದ ಕೆರೆಯಲ್ಲಿ ಈಜಲೆಂದು ತೆರಳಿದ್ದ ಇಬ್ಬರು ವಿದ್ಯಾರ್ಥಿಗಳು ನೀರುಪಾಲದ ಘಟನೆ ಗುರುವಾರ ಮಧ್ಯಾಹ್ನನದ ವೇಳೆ ಸಂಭವಿಸಿದೆ.  ಫಾರ್ಲ ನಿವಾಸಿಗಳಾದ ಥಾಮಸ್ ಮತ್ತು ಅರ್ಸಿಲ್ಲಾ ಡಿ ಮೆಲ್ಲೋ ದಂಪತಿ ಪುತ್ರ ಅಥ್ವಿನ್ ಡಿ ಮೆಲ್ಲೋ (20) ಮತ್ತು ಜಾನ್ ಹಾಗೂ ಲೀನಾ ಲಸ್ರಾದೊ ದಂಪತಿ ಪುತ್ರ ರೋಷನ್ ಲಸ್ರಾದೋ(17) ಮೃತಪಟ್ಟ ವಿದ್ಯಾರ್ಥಿಗಳಾಗಿದ್ದಾರೆ. ಮಧ್ಯಾಹ್ನದ ವೇಳೆ ಕಾರಿಂಜೇಶ್ವರ ದೇವಸ್ಥಾನದ ಕೆರೆಗೆ ಈಜಲೆಂದು ಅಥ್ವಿನ್ ಡಿ ಮೆಲ್ಲೋ, ರೋಷನ್ ಲಸ್ರಾದೋ ಹಾಗು ಪ್ರಕಾಶ್ ವೇಗಸ್ ಈ ಮೂವರು […]

ಪಣಂಬೂರು ಬೀಚ್ ನಲ್ಲಿ ನೀರಾಟವಾಡುತ್ತಿದ್ದ ವಿದ್ಯಾರ್ಥಿ ನೀರುಪಾಲು

Monday, April 8th, 2013
Panamburu beach

ಮಂಗಳೂರು : ಪರೀಕ್ಷೆ ಬರೆಯಲೆಂದು ಚಿಕ್ಕಮಗಳೂರಿನಿಂದ ಮಂಗಳೂರಿಗೆ ಆಗಮಿಸಿದ ವಿದ್ಯಾರ್ಥಿಯೊಬ್ಬ ಪಣಂಬೂರು ಬೀಚ್ ನಲ್ಲಿ ನಿರಾಟವಾಡುತ್ತಿದ್ದ ವೇಳೆ ಸಮುದ್ರದ ಸೆಳೆತಕ್ಕೆ ಸಿಲುಕಿ ಮೃತಪಟ್ಟ ಘಟನೆ ರವಿವಾರ ಸಂಭವಿಸಿದೆ. ಮೃತ ದುರ್ದೈವಿ ಚಿಕ್ಕಮಂಗಳೂರಿನ ಅಕಾಶ್ ಕಡೂರ್ (17). ಚಿಕ್ಕಮಗಳೂರಿನಿಂದ ಮಂಗಳೂರಿಗೆ ಎಇಇಇ ಪರೀಕ್ಷೆ ಬರೆಯಲು ಚಿಕ್ಕಮಂಗಳೂರಿನ ನವೋದಯ ವಿದ್ಯಾಲಯದ ಸುಮಾರು 35 ಮಂದಿ ವಿದ್ಯಾರ್ಥಿಗಳು ಆಗಮಿಸಿದ್ದರು. ಪರೀಕ್ಷೆ ಮುಗಿದ ನಂತರ ಪಣಂಬೂರು ಬೀಚ್ ಗೆ ತೆರಳಿದ ವಿದ್ಯಾರ್ಥಿಗಳು ನೀರಿನಲ್ಲಿ ಆಡುತ್ತಿದ್ದು ಅಕಾಶ್ ಅನಿರೀಕ್ಷಿತವಾಗಿ ಬಂದ ಸಮುದ್ರದ ಅಲೆಗೆ ಸಿಕ್ಕಿ ಸೆಳೆಯಲ್ಪಟ್ಟು […]