ಪ್ರೇಯಸಿ ಜೊತೆ ವಿವಾಹಿತ ಆತ್ಮಹತ್ಯೆ
Tuesday, April 16th, 2019ಮಂಗಳೂರು: ವಿವಾಹಿತ ಯುವಕನೊಬ್ಬ ಪ್ರೇಯಸಿಯ ಜೊತೆಗೆ ಒಂದೇ ಹಗ್ಗಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಳ್ತಂಗಡಿ ತಾಲೂಕಿನ ಸುದಮುಗೇರಿ ಪ್ರದೇಶದಲ್ಲಿ ನಡೆದಿದೆ. ಇಲ್ಲಿನ ಬಾಡಿಗೆ ಮನೆಯಲ್ಲಿ ಇವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಉಣ್ಸೇಕಟ್ಟೆ ನಿವಾಸಿ ಕಿರಣ್ (30), ಲಾಯಿಲ ನಿವಾಸಿ ಸಂಗೀತ (15) ಆತ್ಮಹತ್ಯೆ ಮಾಡಿಕೊಂಡವರಾಗಿದ್ದಾರೆ . ಕಿರಣ್ಗೆ ಎರಡು ಮದುವೆಯಾಗಿದ್ದು, ಪ್ರೇಯಸಿಯನ್ನು ಅಪ್ರಾಪ್ತೆ ಎನ್ನಲಾಗಿದೆ. ಕಿರಣ್ ಆಕೆಯ ಜೊತೆಗೆ ಪ್ರೇಮ ಸಂಬಂಧ ಹೊಂದಿದ್ದ ಎನ್ನಲಾಗುತ್ತಿದೆ. ಇನ್ನು ಕಿರಣ್ ಪಿಟ್ಟರ್ ಕೆಲಸ ನಿರ್ವಹಿಸುತ್ತಿದ್ದ. ಬಾಲಕಿ ಹತ್ತನೇ ತರಗತಿಯನ್ನು ಅರ್ಧದಲ್ಲಿ ಬಿಟ್ಟಿದ್ದಳು. […]