ಕುಡುಕ ಗಂಡನ ಬಿಟ್ಟು, ಮಗಳಿಗಾಗಿ ಒಳ್ಳೆಯ ತಂದೆಯನ್ನು ಮದುವೆಯಾದ ಯುವತಿ

Friday, July 19th, 2013
Missing married woman

ವಿಟ್ಲ :  ವಿಟ್ಲಮುಡ್ನೂರು ಗ್ರಾಮದ ಹಲಸಿನಕಟ್ಟೆಯ ವಿಹಾಹಿತ ಯುವತಿ ನಳಿನಿ(23) ಮಂಗಳವಾರ ತನ್ನ ಮೂರು ವರ್ಷದ ಮಗುವಿನೊಂದಿಗೆ ನಾಪತ್ತೆಯಾಗಿದ್ದರು.  ಗುರುವಾರ ನಳಿನಿ ತನ್ನ ಸಂಬಂಧಿ ಯುವಕನನ್ನು ವಿವಾಹವಾಗಿ ಠಾಣೆಗೆ ಹಾಜರಾಗಿದ್ದಾಳೆ. ನಳಿನಿ ಮಂಗಳವಾರ ನೇರವಾಗಿ ಮನೆಬಿಟ್ಟು ತನ್ನ ಸಂಬಂಧಿ ಫರ್ನೀಚರ್ ಅಂಗಡಿ ಉದ್ಯೋಗಿ ಜಗದೀಶನ ಜತೆ  ಧರ್ಮಸ್ಥಳಕ್ಕೆ ತೆರಳಿ ಅಲ್ಲಿ ವಿವಾಹವಾಗಿದ್ದಾರೆ. ಅಲ್ಲಿಂದ ಠಾಣೆಗೆ ಬಂದು ಆದ ಘಟನೆಯನ್ನು ಪೊಲೀಸರಿಗೆ ವಿವರಿಸಿದ್ದಾರೆ. ತನ್ನ ಮಗಳ ಭವಿಷ್ಯಕ್ಕಾಗಿ ನಾನು ಬೇರೆ ವಿವಾಹವಾಗಿದ್ದೇನೆ. ತನ್ನ ಗಂಡ ರಾಜೇಶ್ ವಿಪರೀತ ಮದ್ಯ ಸೇವಿಸುತ್ತಿದ್ದು, ನನ್ನ […]

ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜು ವಿದ್ಯಾರ್ಥಿ ಸಂಘದ ಚುನಾವಣೆ : ಅಧ್ಯಕ್ಷರಾಗಿ ಸಂದೇಶ್.ಕೆ.ಎಲ್. ಆಯ್ಕೆ

Friday, July 19th, 2013
University College Students’ Union

ಮಂಗಳೂರು : ನಗರದ ಪ್ರತಿಷ್ಠಿತ ಸರ್ಕಾರಿ ಕಾಲೇಜಾದ ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜಿನ ವಿದ್ಯಾರ್ಥಿ ಚುನಾವಣೆಯಲ್ಲಿ. ಎಬಿವಿಪಿ ಒಟ್ಟು 31 ಸೀಟ್ ನಲ್ಲಿ 26 ಸೀಟುಗಳನ್ನು ಜಯಿಸಿದ್ದಾರೆ. ಈ ಮೂಲಕ ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿ ಸಂದೇಶ್.ಕೆ.ಎಲ್. ಮೂರನೇ ಬಿಎಸ್ಸಿ, ಕಾರ್ಯದರ್ಶಿ ಯಾಗಿ ಮಹೇಶ್ ರಾಜ್ ಮೂರನೇ ಬಿಎ, ಲಲಿತಕಲಾ ಕಾರ್ಯದರ್ಶಿ ಯಾಗಿ ಅವಿನಾಶ್ ಮೂರನೇ ಬಿಎ, ಜೊತೆ ಕಾರ್ಯದಶರ್ಿಯಾಗಿ ಶ್ವೇತಾ ಮೂರನೇ ಬಿಬಿಎಂ, ಜೊತೆ ಲಲಿತಕಲಾ ಕಾರ್ಯದರ್ಶಿ ಯಾಗಿ ಪವಿತ್ರಾ ಮೂರನೇ ಬಿಕಾಂ ಆಯ್ಕೆಯಾಗಿದ್ದಾರೆ. ಚುನಾವಣೆಯ ನಂತರ ವಿದ್ಯಾರ್ಥಿ […]

ಪಂಪ್‌ವೆಲ್ : ಮೆಡಿಕಲ್ ಶಾಪ್‌ವೊಂದರಿಂದ ರೂ. 10 ಸಾವಿರ ಕಳ್ಳತನ

Thursday, July 18th, 2013
Medical shop theft

ಮಂಗಳೂರು : ಪಂಪ್‌ವೆಲ್ ನಲ್ಲಿ ಸರಣಿ  ಕಳ್ಳತನಕ್ಕೆ ಪ್ರಯತ್ನಿಸಿದ ಕಳ್ಳರು ಮೆಡಿಕಲ್ ಶಾಪ್‌ವೊಂದರಿಂದ ರೂ. 10 ಸಾವಿರ ನಗದನ್ನು ಕದ್ದು ಪರಾರಿಯಾಗಿದ್ದಾರೆ. ಸಿಟಿ ಪಾಯಿಂಟ್ ಮೆಡಿಕಲ್ಸ್, ಜ್ಯೂಸ್ ಪಾಲೇಸ್, ವೈನ್ ಶಾಪ್ ಈ ಮೂರು ಅಂಗಡಿಗಳನ್ನು ಕಳ್ಳರು ಗುರಿಯಾಗಿಟ್ಟು ಕೊಂಡಿದ್ದರು. ಸಿಟಿ ಪಾಯಿಂಟ್ ಮೆಡಿಕಲ್ ನ ಬೀಗ ಒಡೆದು ಒಳಗೆ ನುಗ್ಗಿದ ಕಳ್ಳರಿಗೆ ರೂ.10,000 ಮಾತ್ರ ಸಿಕ್ಕಿದೆ. ಉಳಿದೆರಡು ಶಾಪ್ ಗಳಲ್ಲಿ ಕಳ್ಳರಿಗೆ ಯಾವುದೇ ಬೆಲೆ ಬಾಳುವ ವಸ್ತುಗಳು ದೊರೆತ್ತಿಲ್ಲ ಎಂದು ತಿಳಿದು ಬಂದಿದೆ. ಪ್ರಕರಣ ಗುರುವಾರ ಬೆಳಿಗ್ಗೆ ಬೆಳಕಿಗೆ ಬಂದಿದ್ದು, […]

ಹಿಂದೂ ಜನಜಾಗ್ರತಿ ಸಮಿತಿಯಿಂದ ಗುರುಪೂರ್ಣಿಮ ಮಹೋತ್ಸವ

Thursday, July 18th, 2013
Sanatana

ಮಂಗಳೂರು : ಹಿಂದೂ ಜನಜಾಗ್ರತಿ ಸಮಿತಿ, ಸನಾತನ ಸಂಸ್ಥೆ ಮತ್ತು ಆಧ್ಯಾತ್ಮಿಕ ಸಂಸ್ಥೆಗಳ ವತಿಯಿಂದ ದೇಶಾದಾದ್ಯಂತ ಗುರುಪೂರ್ಣಿಮ ಮಹೋತ್ಸವನ್ನು ಜುಲೈ 22 ರಂದು ಆಚರಿಸಲಾಗುವುದು. ಆ ಪ್ರಯುಕ್ತ ಅದೇ ದಿನ ಸಂಜೆ 4 ಗಂಟೆಗೆ ಮಂಗಳೂರಿನ ಎಸ್.ಡಿ.ಎಮ್. ಲಾ ಕಾಲೇಜಿನಲ್ಲಿ ಆಯೋಜಿಸಲಾಗಿದೆ. ಶ್ರೀ ಗುರುಗಳಿಲ್ಲದೇ ಶಿಷ್ಯನಿಗೆ ಈಶ್ವರಪ್ರಾಪ್ತಿಯಾಗಲು ಸಾಧ್ಯವೇ ಇಲ್ಲ ಅದುದರಿಂದ ಗುರು-ಶಿಷ್ಯ ಪರಂಪರೆಯ ಶ್ರೇಷ್ಠತೆಯು ನಮ್ಮ ಗಮನಕ್ಕೆ ಬರುತ್ತದೆ. ಗುರುಪೂರ್ಣಿಮ ಮಹೋತ್ಸವದಲ್ಲಿ ಶ್ರೀ ವ್ಯಾಸಪೂಜೆ ಮತ್ತು ಪರಮ ಪೂಜ್ಯ. ಭಕ್ತರಾಜ ಮಹಾರಾಜರ ಪ್ರತಿಮಾಪೂಜೆ ನಡೆಯಲಿದೆ. ಅಂದು […]

ಹಡಗು ಅಪಹರಣ : 24 ಮಂದಿ ಭಾರತೀಯರ ಜೊತೆ ಕಾಸರಗೋಡಿನ ಇಬ್ಬರಿಗೆ ದಿಗ್ಬಂಧನ

Thursday, July 18th, 2013
Kasagod Sailors

ಕಾಸರಗೋಡು:  ಸೋಮವಾರ, ಜುಲೈ 15 ರಂದು ಗೆಂಟಿಲ್ ಪೋರ್ಟ್ ನಿಂದ 15 ನ್ಯುಟ್ರಿಕಲ್ ಮೈಲಿ ದೂರದಲ್ಲಿ ಸೊಮಾಲಿಯಾದ ಕಡಲ್ಗಳ್ಳರಿಂದ ಅಪರಿಸಲ್ಪಟ್ಟಿರುವ ಎಂ.ವಿ.ಕೋಟನ್ ಹಡಗಿನಲ್ಲಿ 24 ಮಂದಿ ಭಾರತೀಯರಿದ್ದರು. ಹಡಗು ಅಪಹರಣಕಾರರ ಹೋತೋಟಿಯಲ್ಲಿದ್ದು ನೌಕರರಿಗೆ ದಿಗ್ಬಂಧನ ಹೇರಲಾಗಿದೆ, ರವಿವಾರದಿಂದ ಹಡಗು ಸಂಪರ್ಕ ಕಡಿದುಕೊಂಡಿದೆ ಅಪಹರಣಕಾರರು ಹಡಗನ್ನು ನೈಜೀರಿಯಾದ ಕಡೆ ಕೊಂಡೊಯ್ಯುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಪಹೃತ ಹಡಗಿನಲ್ಲಿ ಇಬ್ಬರು ಕಾಸರಗೋಡಿನವರಿದ್ದಾರೆ. ಕೆಲವು ತಿಂಗಳ ಹಿಂದೆ ಕೆಲಸಕ್ಕೆ ಸೇರಿದ ಕಳನಾಡು ನಿವಾಸಿ ವಸಂತ ಕುಮಾರ್(35) ಮತ್ತು ಪಾಲಕುನ್ನು ನಿವಾಸಿ ಬಾಬು(32) ಅವರು  […]

ಬಸ್ ನೌಕರರ ಬೇಡಿಕೆ ಈಡೇರಿಸಲು ಜಿಲ್ಲಾಡಳಿತ ಒಪ್ಪಿಕೊಂಡಿದೆ : ಐವನ್

Thursday, July 18th, 2013
Bus owners and workers

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಕಾರ್ಮಿಕ ಪರಿಷತ್ ಬಸ್ ನೌಕರರ ಸಂಘದ ಅಧ್ಯಕ್ಷ ಐವನ್ ಡಿಸೋಜಾ ಅವರು ಬುಧವಾರ ನಗರದ ವುಡ್ ಲ್ಯಾಂಡ್ಸ್ ನಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಸಂಚರಿಸುತ್ತಿರುವ ಸಿಟಿ, ಸರ್ವೀಸ್ ಮತ್ತು ಎಕ್ಸ್ ಪ್ರೆಸ್ ಬಸ್ ಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ನೌಕರರ ಸುಮಾರು 18 ಬೇಡಿಕೆಗಳನ್ನು ಈಡೇರಿಸಲು ಬಸ್ ಮಾಲಕರು ಹಾಗೂ ಜಿಲ್ಲಾಡಳಿತ ಒಪ್ಪಿಕೊಂಡಿದೆ ಎಂದು ತಿಳಿಸಿದರು. ಬಸ್ಸ್ ಕಾರ್ಮಿಕರು ಹಲವು ವರ್ಷಗಳಿಂದ ತಮ್ಮ ಬೇಡಿಕೆ ಈಡೇರಿಸಲು ಸಂಬಂಧ […]

ಶಾಲೆಗಳಲ್ಲಿ ಮಕ್ಕಳಿಗೆ ಡಬ್ಲ್ಯು.ಐ.ಎಫ್.ಎಸ್ ಮಾತ್ರೆಗಳನ್ನು ನೀಡುವ ಕಾರ್‍ಯಕ್ರಮಕ್ಕೆ ಚಾಲನೆ

Wednesday, July 17th, 2013
Folic and Iron tablet

ಮಂಗಳೂರು : ನಗರದ ಅತ್ತಾವರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ, ಕಬ್ಬಿಣಾಂಶಯುಕ್ತ ಮಾತ್ರೆಗಳ(ಡಬ್ಲ್ಯು.ಐ.ಎಫ್.ಎಸ್.) ವಿತರಣಾ ಕಾರ್‍ಯಕ್ರಮವನ್ನು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಶ್ರೀ ಎನ್.ಪ್ರಕಾಶ್ ಉದ್ಘಾಟಿಸಿದರು. ಕಬ್ಬಿಣಾಂಶಯುತ ಮಾತ್ರೆಗಳನ್ನು ಸೇವಿಸುವುದರಿಂದ ಮಕ್ಕಳಲ್ಲಿ ಕಂಡು ಬರುವ ರಕ್ತ ಹೀನತೆ, ಕಲಿಕಾ ಏಕಾಗ್ರತೆ ಕುಂಠಿತ, ದೈಹಿಕ ತೊಂದರೆಗಳು ದೂರವಾಗುತ್ತದೆ ಎಂದು ಜಿಲ್ಲಾಧಿಕಾರಿ ಶ್ರೀ ಎನ್.ಪ್ರಕಾಶ್ ಅಭಿಪ್ರಾಯ ಪಟ್ಟರು. ಕಬ್ಬಿಣಾಂಶಯುತ ಮಾತ್ರೆಗಳ(ಡಬ್ಲ್ಯು.ಐ.ಎಫ್.ಎಸ್.) […]

ಮೂಡಬಿದಿರೆ ಬಸದಿ ವಿಗ್ರಹ ಕಳವು, ಬಂಧಿತ ಆರೋಪಿಗಳಿಗೆ ಜುಲೈ30ರವರೆಗೆ ನ್ಯಾಯಾಂಗ ಬಂಧನ

Wednesday, July 17th, 2013
jain basadi theft

ಮಂಗಳೂರು: ಮಂಗಳೂರು ಮತ್ತು  ಭುವನೇಶ್ವರ ಪೊಲೀಸರು ಜಂಟಿಯಾಗಿ ಮೂಡಬಿದಿರೆ ಬಸದಿಯಲ್ಲಿ ನಡೆದ ವಿಗ್ರಹ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಒಡಿಸ್ಸಾದ ಭುವನೇಶ್ವರದಲ್ಲಿ ಬಂಧಿಸಲ್ಪಟ್ಟಿದ್ದ ಇಬ್ಬರನ್ನು ಬುಧವಾರ ನಗರಕ್ಕೆ ಕರೆತಂದಿದ್ದು, ಆರೋಪಿಗಳನ್ನು ನ್ಯಾಯಾದೀಶರ ಮುಂದೆ ಹಾಜರು ಪಡಿಸಿದ್ದು ಅವರಿಗೆ ಜುಲೈ 30ರವರೆಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ವಿಗ್ರಹ ಕಳವು ಮಾಡಿರುವ ಸಂತೋಷ್ ದಾಸ್ ನ ಪತ್ನಿ ದೀಪ್ತಿಮಯಿ ಮೋಹಂತಿ ಮತ್ತು ಆಕೆಯ ತಂದೆ ದಿಗಂಬರ್ ಮೋಹಂತಿಯನ್ನು ಭುವನೇಶ್ವರದಲ್ಲಿ ಬಂಧಿಸಿದ್ದರು. ಬಂಧಿತ ಆರೋಪಿಗಳು ಪ್ರಮುಖ ಆರೋಪಿಯ ಮಾಹಿತಿ ನೀಡಲು ನಿರಾಕರಿಸಿದ್ದುದರಿಂದ ಪೊಲೀಸರು […]

ಹಾಸ್ಯಗಾರ ಕರ್ಕಿಯವರಿಗೆ ಶೇಣಿ ಪ್ರಶಸ್ತಿ ಪ್ರದಾನ ಸಮಾರಂಭ

Wednesday, July 17th, 2013
Comedian Karki

ಮಂಗಳೂರು : ಯಕ್ಷಗಾನ ಕಲಾಕ್ಷೇತ್ರದ ಕಲಾಶಕ ಪುರುಷ ಶೇಣಿ ಗೊಪಾಲ ಕೃಷ್ಣಭಟ್ ಸಂಸ್ಮರಣಾರ್ಥವಾಗಿ ತಾ| 20-07-13 ಹಾಗೂ 21-07-13ರಂದು ಶ್ರೀ ವಿದ್ಯಾದಿರಾಜಕಲಾಕ್ಷೆತ್ರ, ಶಿರಸಿಯಲ್ಲಿ, ಯಕ್ಷಸಂಭ್ರಮ ಶಿರಸಿ ಇವರ ಸಹಯೋಗದಿಂದ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ರಾಜ್ಯದ ಪ್ರಸಿದ್ದ ಕಲಾವಿದರ ಕೂಡುವಿಕೆಯಿಂದ “ಪಾದುಕ ಪ್ರದಾನ” ಹಾಗೂ “ವಿಭೀಷಣ ಪ್ರಪತ್ತಿ” ಎಂಬ ಪ್ರಸಂಗವು ತಾಳಮದ್ದಳೆ ರೂಪದಲ್ಲಿ ಪ್ರಸ್ತುತವಾಗಲಿದೆ ಮತ್ತು ಶ್ರೀ ಎಂ.ಎಲ್.ಸಾಮಗರ ಅಧ್ಯಕ್ಷತೆಯಲ್ಲಿ, ಹಾಸ್ಯಗಾರ ಪರಮಯ್ಯ ನಾರಾಯಣ ಕರ್ಕಿಯವರಿಗೆ “ಶೇಣಿ ಪ್ರಶಸ್ತಿ” ಕಾರ್ಯಕ್ರಮವು ಜರಗಲಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ನ ಅಧ್ಯಕ್ಷ […]

ಹೂವಿನ ವ್ಯಾಪಾರಿ ದಂಪತಿಗಳ ಬೈಕಿಗೆ ಟೆಂಪೋ ಡಿಕ್ಕಿ, ಪತ್ನಿ ಸಾವು, ಪತಿ ಗಂಭೀರ

Wednesday, July 17th, 2013
Flower Merchants Killed

ಮಂಗಳೂರು : ಹೂವಿನ ಅಂಗಡಿಯನ್ನು ಮುಚ್ಚಿದ ಬಳಿಕ ಬೈಕ್ ನಲ್ಲಿ ಮನೆಗೆ ತೆರಳುತ್ತಿದ್ದ ದಂಪತಿಗಳಿಗೆ ಅತಿವೇಗದಲ್ಲಿ ಬಂದ ಟೆಂಪೋ ಡಿಕ್ಕಿ ಹೊಡೆದು ಬೈಕ್ ನಲ್ಲಿದ್ದ ಮಹಿಳೆ ಮೃತಪಟ್ಟು, ಆಕೆಯ ಪತಿ ಗಂಭೀರವಾಗಿ ಗಾಯಗೊಂಡ ಘಟನೆ ಮಂಗಳವಾರ ರಾತ್ರಿ ಪಡೀಲ್ ಜಂಕ್ಷನ್ ನಲ್ಲಿ ನಡೆದಿದೆ. ಮೃತಮಹಿಳೆಯನ್ನು ಪಡೀಲ್ ಸಮೀಪದ ಕೋಡಕಲ್ ನ ಸಾವಿತ್ರಿ ಜೆ. ಎಂದು ಗುರುತಿಸಲಾಗಿದೆ. ಮಹಿಳೆಯ ಪತಿ ಜವ್ರೆ ಗೌಡ(50) ಅವರು ಗಂಭೀರವಾಗಿ ಗಾಯಗೊಂಡಿದ್ದು, ನಗರದ ಖಾಸಗಿ ಆಸ್ಪತ್ರೆಯ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. […]