ಗಲ್ಫ್ ರಾಷ್ಟ್ರಗಳ ಕನ್ನಡಿಗರೊಂದಿಗೆ ’ಓಂ’ ಚಿತ್ರದ 25 ನೆಯ ವರ್ಷದ ಸಂಭ್ರಮ ಆಚರಿಸಿದ ರಿಯಲ್ ಸ್ಟಾರ್ ಉಪೇಂದ್ರ

Tuesday, May 26th, 2020
Share

Upendraದುಬೈ: ವಿಶ್ವದಾದ್ಯಂತ ಕೋರೊನಾ ಮಹಾಮಾರಿ, ಕೋವಿಡ್ – 19 ನಿಂದಾಗಿ, ಗಲ್ಫ್ ರಾಷ್ಟ್ರಗಳಲ್ಲಿ ಆದಂತಹ ಲಾಕ್ಡೌನ್, ಸೀಲ್ಡೌನ್, ಕರ್ಪ್ಯೂವಿನ ದೆಸೆಯಿಂದ ಮನೆಯಲ್ಲೆ ಕುಳಿತು ಬೇಸರದಿಂದಿದ್ದ ಗಲ್ಫ್ ರಾಷ್ಟ್ರಗಳ ಕನ್ನಡಿಗರಿಗೆ, ಓವರ್‌ಸೀಸ್ ಕನ್ನಡ ಮೂವೀಸ್ ನ ವತಿಯಿಂದ ಆಯೋಜಿಸಲ್ಪಟ್ಟ ರಿಯಲ್ ಸ್ಟಾರ್ ಉಪೇಂದ್ರ ಅವರೊಂದಿಗೆ ಜೂಮ್ ವೀಡಿಯೊ ಸಂವಹನ ಹಾಗೂ ’ಓಂ’ ಚಿತ್ರದ 25 ನೆಯ ವರ್ಷದ ಸಂಭ್ರಮದ ಆಚರಣೆಯ ಬಗ್ಗೆ  ತಾ| 17-05-2020 ರಂದು ಯು.ಎ.ಇ ಮತ್ತು ಒಮಾನ್ ರಾಷ್ಟ್ರಗಳ ಕನ್ನಡಿಗರಿಗೆ ಮತ್ತು ತಾ| 18-05-2020 ರಂದು ಕುವೈತ್, ಕತಾರ್, ಬಹರೈನ್ ರಾಷ್ಟ್ರಗಳ ಕನ್ನಡಿಗರಿಗಾಗಿ ಆಯೋಜಿಸಲಾಗಿದ್ದು ಗಲ್ಫ್ ರಾಷ್ಟ್ರಗಳ ಕನ್ನಡಿಗರು ರಿಯಲ್ ಸ್ಟಾರ್ ಉಪೇಂದ್ರರವರ ಜೊತೆ ವೀಡಿಯೊ ಮೂಲಕ ಸಂವಹನ ನೆಡೆಸಿ ಬಹಳ ಸಂತಸಪಟ್ಟರು.

ಕಾರ್ಯಕ್ರಮವನ್ನು ಸುಬ್ರಹ್ಮಣ್ಯ ಹೆಬ್ಬಾಗಿಲು ಕತಾರ್ ಇವರು ಆಯೋಜಿಸಿದ್ದು, ದುಬೈಯಿಂದ ದೀಪಕ್ ಸೋಮಶೇಖರ್ ಮತ್ತು ಸಜನ್ ದಾಸ್ ರವರು ತಾಂತ್ರಿಕ ನೆರವು ನೀಡಿ, ಕಾರ್ಯಕ್ರಮ ನಿರ್ವಹಿಸಿದ್ದು, ಕುವೈಟ್ ನಿಂದ ಸುರೇಶ್ ರಾವ್ ನೇರಂಬಳ್ಳಿಯವರು ಸ್ವಾಗತಿಸಿ, ಬಹರೈನ್ ನಿಂದ ರಾಜಕುಮಾರ್ ರವರು ಬೆಂಗಳೂರಿನಿಂದ ದರ್ಶನ್ ಸೋಮಶೇಖರ್ ರವರು ಸಹಕರಿಸಿದ್ದು ಕಾರ್ಯಕ್ರಮದ ಯಶಸ್ವಿಗೆ ಭಾಜನರಾದರು. ಗಲ್ಫ್ ರಾಷ್ಟ್ರಗಳ ಕನ್ನಡಿಗರೆಲ್ಲರ ಪರವಾಗಿ ರಿಯಲ್ ಸ್ಟಾರ್ ಉಪೇಂದ್ರರವರಿಗೆ ಧನ್ಯವಾದ ಸಮರ್ಪಿಸಲಾಯಿತು.

ಕತಾರಿನಿಂದ ಮಂಗಳೂರಿಗೆ ಪ್ರತ್ಯೇಕ ವಿಮಾನ ಬೇಕು: ಸುಬ್ರಮಣ್ಯ ಹೆಬ್ಬಾಗಿಲು

Monday, May 25th, 2020
Share

Subrahmanya Hebbagiluಕತಾರ್:‌ 22 ಮೇ 2020 ಕನ್ನಡಿಗರ ಇತಿಹಾಸದಲ್ಲಿ ನೆನಪಿನಲ್ಲಿಡಬೇಕಾದ ದಿನ, ಪ್ರತ್ಯೇಕವಾಗಿ 185  ಜನ ಪ್ರಯಾಣಿಕರನ್ನು ಹೊತ್ತು ದೋಹಾದಿಂದ ಬೆಂಗಳೂರಿಗೆ ನೇರ ವಿಮಾನ ಯಾನಕ್ಕೆ ಕಾರಣಕರ್ತರಾದವರು ಹಾಗೂ ಪ್ರಯಾಣಿಕರೆಲ್ಲರೂ ನೆನಪಿನಲ್ಲಿಡಬೇಕಾದ ಸುದಿನ ಎಂದು ಕತಾರ್‌ ನ ಭಾರತೀಯ‌ ಸಮುದಾಯ ಹಿತೈಷಿ‌ ವೇದಿಕೆಯ ಕರ್ನಾಟಕ ಪ್ರತಿನಿಧಿ ಸುಬ್ರಮಣ್ಯ ಹೆಬ್ಬಾಗಿಲು ಹೇಳಿದ್ದಾರೆ.

ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಸುಬ್ರಮಣ್ಯ, ಕರೋನಾ 19 ಮಹಾ ಮಾರಿಯಿಂದ ತತ್ತರಿಸಿ ಹೋಗಿ, ನಿರಾಶ್ರಿತ ಮತ್ತು ತುರ್ತು ಪರಿಸ್ಥಿತಿಯಲ್ಲಿರುವ ಕತಾರಿನ ಕನ್ನಡಿಗರಿಗೆ ಅಭಯ ಹಸ್ತ ನೀಡಿದ ಭಾರತ ಹಾಗೂ ಕರ್ನಾಟಕ ಸರಕಾರವು ಸಕಲ ಪ್ರಯತ್ನವನ್ನು ಮಾಡಿ, ‘ವಂದೇ ಭಾರತ ನಿಯೋಗ”ದಡಿಯಲ್ಲಿ ಬೆಂಗಳೂರಿಗೆ ಮೊದಲ ವಿಮಾನಯಾನವನ್ನು ಹಾರಲು ವ್ಯವಸ್ಥೆ ಮಾಡಿರುವುದು ಸಂತಸದ ವಿಚಾರ.

ಈ ವಿಮಾನದಲ್ಲಿ ಕರ್ನಾಟಕ ಮೂಲದ, ಕತಾರಿನಲ್ಲಿ ನೆಲೆಸಿದ್ದ ಕನ್ನಡಿಗರು, ಅದರಲ್ಲೂ ಗರ್ಭಿಣಿಯರು, ವಯೋವೃದ್ಧರು, ಅನಾರೊಗ್ಯದಿಂದ ಬಳಲುತ್ತಿರುವವರು ಹಾಗೂ ಕೆಲಸ ಕಳೆದುಕೊಂಡು ವಾಸ್ತವ್ಯ ಹೂಡಲಾಗದೆ ಬಳಲುತ್ತಿರುವವರನ್ನು ಮಾತೃಭೂಮಿಗೆ ಹಿಂತಿರುಗಲು ವಿಮಾನದ ವ್ಯವಸ್ಥೆಗೆ ಕಾರಣಕರ್ತರಾದ ಎಲ್ಲಾ ಮಂತ್ರಿಗಳು, ಸಚಿವರು ಹಾಗು ಸ್ವಯಂ ಸೇವಾಕರ್ತರಿಗೂ ವಂದನೆಗಳು.

ಕತಾರ್‌ನಿಂದ ಸುಮಾರು 1,300 ಜನರು ಊರಿಗೆ ಬರಲು ನೋಂದಣಿ ಮಾಡಿಸಿಕೊಂಡಿದ್ದಾರೆ. ಅವರಲ್ಲಿ ಕರ್ನಾಟಕ ಕರಾವಳಿಯವರೇ ಹೆಚ್ಚು. ಬೆಂಗಳೂರು, ಮೈಸೂರು, ಮಂಡ್ಯ ಮೊದಲಾದೆಡೆ ಹೋಗುವವರು ಬೆಂಗಳೂರಿನ ಮೂಲಕ ಹೋಗುವವರಾದರೆ, ಅತ್ತ ಕಾಸರಗೋಡು, ಇತ್ತ ಚಿಕ್ಕಮಗಳೂರು, ಕೊಡಗು, ಶಿವಮೊಗ್ಗ, ಭಟ್ಕಳ, ಬೈಂದೂರಿನವರೆಗೆ ಹೋಗುವವರು ಮಂಗಳೂರನ್ನು ಆಶ್ರಯಿಸಬೇಕಾಗಿದೆ.

ಈಗ ಬೆಂಗಳೂರಿಗೆ ವಿಮಾನ ಯಾನಕ್ಕೆ ತಾತ್ವಿಕ ಸಮ್ಮತಿಯಾಗಿದ್ದರೂ ಮಂಗಳೂರಿಗೆ ಆಗಿಲ್ಲ ಎನ್ನುವ ಕೊರಗು ಕತಾರ್‌ನಲ್ಲಿರುವ ಕರಾವಳಿ ಭಾಗದವರಿಗೆ. ಕತಾರ್‌ ನಲ್ಲಿರುವ ಕನ್ನಡಿಗರನ್ನು ಆದಷ್ಟು ಬೇಗ ಭಾರತಕ್ಕೆ ಕರೆತರಲು ಕೇಂದ್ರ‌ ಸಚಿವ‌ ಡಿ.ವಿ.ಸದಾನಂದ ಗೌಡ,‌ ಕರ್ನಾಟಕ ಸಿಎಂ ಯಡಿಯೂರಪ್ಪ ಅವರಿಗೆ ಮನವಿ ಮಾಡಲಾಗಿದೆ. ಮಂಗಳೂರಿಗೆ‌ ಕತಾರ್ ನಿಂದ ನೇರ ವಿಮಾನ‌ ವ್ಯವಸ್ಥೆ ಹೆಚ್ಚು‌ ಸಂಕಷ್ಟದಲ್ಲಿರುವ ದಕ್ಷಿಣ ಕನ್ನಡ, ಉಡುಪಿ ಜನತೆಗೆ ಅಗತ್ಯವಿದೆ. ಹೀಗೆ ಮುಂದುವರೆದು ಮಂಗಳೂರಿಗೆ ಹೆಚ್ಚಿನ ಸಂಖ್ಯೆಯಲ್ಲಿ ಹಿಂತಿರುಗಬೇಕೆಂದಿರುವ ಕನ್ನಡಿಗರಿಗೆ ವಿಮಾನ ಸೇವೆಯನ್ನು ವ್ಯವಸ್ಥೆ ಮಾಡಲು ಮನವಿ ಮಾಡಿದ್ದಾರೆ.

ವರದಿ : ಶಂಭು ಹುಬ್ಬಳ್ಳಿ
ಮೆಗಾ ಮೀಡಿಯಾ ನ್ಯೂಸ್ ಬ್ಯುರೋ

 

Subrahmanya Hebbagilu

ಕೊರೋನಾ ವಾರಿಯರ್ ಬಿಕಿನಿ ಧರಿಸಿ ಪುರುಷ ರೋಗಿಗಳಿಗೆ ಚಿಕಿತ್ಸೆ ನೀಡಿದ್ದು ಯಾಕೆ ಗೊತ್ತಾ

Saturday, May 23rd, 2020
Share

corona Nurseಮಾಸ್ಕೋ: ಮಹಾಮಾರಿ ಕೊರೋನಾ ವೈರಸ್ ಜಗತ್ತನ್ನೇ ನಡುಗಿಸುತ್ತಿದೆ. ಕೊರೋನಾ ತಡೆಯಲು ವೈದ್ಯಕೀಯ ಸಿಬ್ಬಂದಿ ಮತ್ತು ನರ್ಸ್ ಗಳು 24 ಗಂಟೆ ಕರ್ತವ್ಯದಲ್ಲಿ ನಿರತರಾಗಿದ್ದಾರೆ.

ರಷ್ಯಾದ ರಾಜಧಾನಿ ಮಾಸ್ಕೋದಲ್ಲಿ ಕೆಲಸ ಮಾಡುತ್ತಿರುವ 20 ವರ್ಷದ ನರ್ಸ್ ಒಬ್ಬರು ಕೊರೋನಾಗೆ ತುತ್ತಾಗಿರುವ ಪುರುಷರ ವಾರ್ಡ್ ನಲ್ಲಿ ಕೆಲಸ ಮಾಡುತ್ತಿದ್ದು ಪಿಪಿಈ ಪಾರದರ್ಶಕ ಗೌನ್ ಧರಿಸಿ ಚಿಕಿತ್ಸೆ ನೀಡುತ್ತಿದ್ದರು. ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.

ಇದು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು. ಇದಕ್ಕೆ ನರ್ಸ್ ಸ್ಪಷ್ಟನೆ ನೀಡಿದ್ದಾರೆ.

ಯುನಿಫಾರ್ಮ್ ಧರಿಸಿ ಅದರ ಮೇಲೆ ಪಿಪಿಈ ಕಿಟ್ ಧರಿಸಿದರೆ ಸೆಕೆಯಾಗುತ್ತದೆ ಅದೇ ಕಾರಣಕ್ಕೆ ನಾನು ಬಿಕಿನಿ ಧರಿಸಿದ್ದಾಗೆ ನರ್ಸ್ ಹೇಳಿದ್ದಾರೆ.

ಕೊರೋನಾದಿಂದ ಪಾರಾಗಲು ವಿಶಿಷ್ಟ ಔಷಧ ಕಂಡು ಹಿಡಿದ ಲಂಡನ್ ಮಹಿಳೆ

Monday, May 4th, 2020
Share

juiceಲಂಡನ್  : ಕರೊನಾದಿಂದ ಪಾರಾಗಲು ಯಾರೊಬ್ಬರೂ ಔಷದಿ ಕಂಡು ಹಿಡಿದಿರಲಿಲ್ಲ. ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಂಡಲ್ಲಿ ಕೊರೊನಾ ವೈರಾಣು ದೇಹದೊಳಗೆ ನುಸುಳಲು  ಹಿದೇಟು ಹಾಕುತ್ತದೆ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.

ಲಂಡನ್ನಿನ ಮಹಿಳೆಯೊಬ್ಬರು ಕರೊನಾ ರೋಗಕ್ಕೆ ವಿಶಿಷ್ಟ ಔಷದಿ ಒಂದನ್ನು ಕಂಡು ಹಿಡಿದಿದ್ದಾರೆ

ಟ್ರೇಸಿ ಕಿಸ್ (32) ಎಂಬ ಇಬ್ಬರು ಮಕ್ಕಳ ತಾಯಿ ಹೀಗೊಂದು ಪ್ರಯೋಗ ಮಾಡುತ್ತಿದ್ದಾರೆ. ಒಂದು ವಿಚಿತ್ರ ಸ್ಮೂದಿಯನ್ನು ವಾರಕ್ಕೆ ಮೂರು ಬಾರಿ ಒಂದು ಗ್ಲಾಸ್ ಗಳಷ್ಟು ಕುಡಿಯುತ್ತಿದ್ದಾರೆ..!

ಈ  ಔಷದಿ ಮತ್ತೇನಲ್ಲಆಕೆಯ ಸ್ನೇಹಿತನ ವೀರ್ಯದ ಸ್ಮೂದಿ..! ಇದು ಸ್ವಲ್ಪ ಅಸಹ್ಯ ಅನ್ನಿಸಿದರೂ ಆಕೆಯೇ ಹೇಳಿಕೊಂಡ ಸತ್ಯ..
ಕಳೆದ ಮೂರು ವರ್ಷಗಳಿಂದ ಒಂದು ದಿನವೂ ನನಗೆ ಜ್ವರವಾಗಲಿ, ಶೀತವಾಗಲಿ ಬಂದಿಲ್ಲ. ಯಾಕೆಂದರೆ ಆಗಿನಿಂದಲೂ ನಾನು ನನ್ನ ಬಾಯ್ಫ್ರೆಂಡ್ನಿಂದ ವೀರ್ಯವನ್ನು ದಾನವಾಗಿ ಪಡೆದು, ಅದರೊಂದಿಗೆ ಬೆರ್ರಿ ಹಣ್ಣುಗಳು, ಬಾಳೆಹಣ್ಣು ಮತ್ತಿತರ ವಿಟಮಿನ್ ಯುಕ್ತ ಹಣ್ಣುಗಳನ್ನು ಸೇರಿಸಿಕೊಂಡು, ಸ್ಮೂದಿ ತಯಾರು ಮಾಡಿಕೊಂಡು ವಾರಕ್ಕೆ ಮೂರು ಬಾರಿ ಕುಡಿಯುತ್ತಿದ್ದೇನೆ ಎಂದು ಟ್ರೇಸಿ ಅವರೇ ಬಹಿರಂಗ ಪಡಿಸಿದ್ದಾರೆ.

 

juiceನಾನು ನನ್ನ ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ಒಂದು ವಿಭಿನ್ನ ಮಾರ್ಗ ಕಂಡುಕೊಂಡಿದ್ದೇನೆ. ಇದಕ್ಕೆ ಯಾವುದೇ ಖರ್ಚು ಕೂಡ ಇಲ್ಲ. ರಾಸಾಯನಿಕ ಕೂಡ ಇಲ್ಲ. ಎಲ್ಲ ಸಲವೂ ಔಷಧಿಗಳ ಮೇಲೆಯೇ ಅವಲಂಬಿತರಾಗುವುದಕ್ಕಿಂತ ಇಂತಹ ಪೌಷ್ಟಿಕಗಳನ್ನು ಪಡೆಯುವುದು ಒಳಿತು ಎನ್ನಿಸಿತು ಎಂದಿದ್ದಾರೆ.

ನಾನಿನ್ನೂ ಮಗುವಿಗೆ ಎದೆಹಾಲು ನೀಡುತ್ತಿರುವ ತಾಯಿ. ನನಗೆ ಜಾಸ್ತಿ ನ್ಯೂಟ್ರಿಷಿಯನ್ ಬೇಕು. ಹಾಗಾಗಿಯೇ ಈ ವೀರ್ಯದ ಸ್ಮೂದಿ ಕುಡಿಯುತ್ತಿದ್ದೇನೆ. ಇದು ಎಲ್ಲರಿಗೂ ಇಷ್ಟವಾಗುವುದಿಲ್ಲ. ಆದರೆ ನಾನು 2017ರಿಂದಲೂ ಕುಡಿಯುತ್ತಿದ್ದೇನೆ. ಅಂದಿನಿಂದಲೂ ಒಂದಿನವೂ ಜ್ವರ, ಶೀತದಂತಹ ಯಾವುದೇ ಸಣ್ಣ ಕಾಯಿಲೆಯೂ ಬಂದಿಲ್ಲ ಎಂದು ತಿಳಿಸಿದ್ದಾರೆ. ಅಷ್ಟೇ ಅಲ್ಲ, ಈ ವೀರ್ಯದಿಂದ ತಮ್ಮ ಫೇಸ್ಪ್ಯಾಕ್ ಮಾಡಿಕೊಳ್ಳುತ್ತಿದ್ದು, ಚರ್ಮದ ಹೊಳಪು ಹೆಚ್ಚಾಗಿದೆ ಎಂದು ಹೇಳಿಕೊಂಡಿದ್ದಾರೆ.

ಸ್ಮೂದಿ ಸೇವಿಸಲು ಚೆನ್ನಾಗಿಯೇ ಇರುತ್ತದೆ. ಆದರೆ ಖಂಡಿತ ತಮಾಷೆ ಅಲ್ಲ. ನಾನು ಕಂಡುಕೊಂಡಿದ್ದು ನೈಸರ್ಗಿಕ ವಿಧಾನ. ನನ್ನ ಆರೋಗ್ಯದಲ್ಲಿ ಆದ ಬದಲಾವಣೆಯನ್ನು ಗುರುತಿಸಿಕೊಂಡಿದ್ದೇನೆ. ಸದ್ಯ ಕರೊನಾ ವೈರಸ್ ವಿರುದ್ಧ ಹೋರಾಟಕ್ಕೂ ಇದು ಖಂಡಿತ ಸಹಕಾರಿಯಾಗುತ್ತಿದೆ ಎಂದು ಹೇಳಿದ್ದಾರೆ.

ಅಮೆರಿಕದಲ್ಲಿ ಭಾರತ ಮೂಲದ ಗರ್ಭಿಣಿಯ ಕೊಲೆ, ಗಂಡ ಆತ್ಮಹತ್ಯೆ

Thursday, April 30th, 2020
Share

Mohan malವಾಷಿಂಗ್ಟನ್ : ಭಾರತ ಮೂಲದ ದಂಪತಿಗಳು ಅಮೆರಿಕದ ನ್ಯೂಜೆರ್ಸಿ ನಗರದಲ್ಲಿ ಸಂಶಯಾಸ್ಪದವಾಗಿ ಕೊಲೆಯಾಗಿದ್ದಾರೆ.

ಮನೆಯಲ್ಲಿ ಗರ್ಭಿಣಿ ಪತ್ನಿ ಕೊಲೆಯಾಗಿದ್ದರೆ ಅದೇ ನಗರದ ಹಡ್ಸನ್ ನದಿಯಲ್ಲಿ ಆಕೆಯ ಗಂಡ ಆತ್ಮಹತ್ಯೆ ಮಾಡಿಕೊಂಡು ಸಾವನ್ನಪ್ಪಿರುವ ಘಟನೆ ಅಮೆರಿಕದಲ್ಲಿ ನಡೆದಿದೆ.

ಮೃತರನ್ನು ಭಾರತ ಮೂಲದ ಮೋಹನ್ ಮಾಲ್ (37) ಮತ್ತು ಗರಿಮಾ ಕೊಠಾರಿ (35) ಎಂದು ಗುರುತಿಸಲಾಗಿದೆ.

ಗರಿಮಾ ತನ್ನ ಮನೆಯಲ್ಲಿ ಕೊಲೆಯಾಗಿದ್ದರೆ, ಅದೇ ನಗರದ ಹಡ್ಸನ್ ನದಿಯಲ್ಲಿ ಮೋಹನ್ ಮಾಲ್  ಮೃತ ದೇಹ ಪತ್ತೆಯಾಗಿದೆ.

ಗರಿಮಾ ಕೊಠಾರಿ ಅವರನ್ನು ಹಲವಾರು ಬಾರಿ ಚುಚ್ಚಿ ಕೊಲೆ ಮಾಡಲಾಗಿದೆ. ಆಕೆಯ ಮರಣೋತ್ತರ ಪರೀಕ್ಷೆಯಲ್ಲಿ ಆಕೆ ಕೊಲೆಯದಾಗ 5 ತಿಂಗಳ ಗರ್ಭಿಣಿ ಎಂದು ತಿಳಿದು ಬಂದಿದೆ. ಇದಾದ ನಂತರ ಮೋಹನ್ ಜೆರ್ಸಿ ನಗರದ ಹಡ್ಸನ್ ನದಿಯಲ್ಲಿ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ದಂಪತಿಯ ಸಾವಿಗೆ ಕಾರಣ ತಿಳಿದು ಬಂದಿಲ್ಲ. ಅಮೆರಿಕ ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.

ಪ್ರಾಥಮಿಕ ತನಿಖೆಯಲ್ಲಿ ಮೋಹನ್ ಮಾಲ್ ಆತ್ಮಹತ್ಯೆ ಮಾಡಿಕೊಂಡಿರುವುದು ಗೊತ್ತಾಗಿದೆ. ಆದರೆ ಗಾರಿಮಾ ಅವರನ್ನು ಯಾರು ಕೊಲೆ ಮಾಡಿದ್ದಾರೆ ಎಂಬುದರ ಬಗ್ಗೆ ತಿಳಿದು ಬಂದಿಲ್ಲ. ಆದರೆ ಕೌಟುಂಬಿಕ ಕಾರಣದಿಂದ ಮೋಹಲ್ ಮಾಲ್ ಅವರೇ ತನ್ನ ಪತ್ನಿಯನ್ನು ಕೊಂದು ನಂತರ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ. ಈ ಸಂಬಂಧ ಜೆರ್ಸಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಭಾರತ ಮೂಲದವರಾದ ಈ ದಂಪತಿ, ವಿದ್ಯಾಭ್ಯಾಸದ ಸಂಬಂಧ ಅಮೆರಿಕಗೆ ಬಂದಿದ್ದರು. ಮೋಹನ್ ಮಾಲ್ ಇಂಡಿಯಾ ಇನ್‍ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ) ಯ ಹಳೆಯ ವಿದ್ಯಾರ್ಥಿಯಾಗಿದ್ದು, ಅವರು ಕೊಲಂಬಿಯಾ ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಪದವಿ ಪಡೆಯಲು ಯುಎಸ್‍ಗೆ ಬಂದಿದ್ದರು. ಜೊತೆಗೆ ಕೊಠಾರಿ ಅವರು ಅನೋನ್ಯ ವಾಗಿದ್ದು , ಅಮೆರಿಕಾದಲ್ಲಿ ನುಕ್ಕಡ್ ಎಂಬ ರೆಸ್ಟೋರೆಂಟ್ ನಡೆಸುತ್ತಿದ್ದರು.

ಈ ವಿಚಾರವಾಗಿ ಮಾಹಿತಿ ನೀಡಿರುವ ಅವರ ರೆಸ್ಟೋರೆಂಟ್ ಕೆಲಸ ಮಾಡುವವರು, ಅವರು ತುಂಬ ಒಳ್ಳೆಯ ದಂಪತಿಯಾಗಿದ್ದರು ಎಂಬ ಹೇಳಿದ್ದಾರೆ. ಜೊತೆಗೆ ಅವರ ಕುಟುಂಬಸ್ಥರು ಮಾತನಾಡಿ, ಮೋಹನ್ ಬಹಳ ಬುದ್ಧಿವಂತ ಜೊತೆಗೆ ಪತ್ನಿಯ ಮೇಲೆ ಕಾಳಜಿ ಇದ್ದ ವ್ಯಕ್ತಿ. ಕೊಠಾರಿ ಕೂಡ ಸ್ನೇಹಜೀವಿ ಅವಳಿಗೆ ಅಡುಗೆ ಮಾಡುವ ಕೆಲಸ ಎಂದರೆ ಬಹಳ ಇಷ್ಟ ಎಂದು ಮಾಹಿತಿ ನೀಡಿದ್ದಾರೆ.

ನೇಪಾಳದ ಮಸೀದಿಯಲ್ಲಿದ್ದ ಮೂವರು ಭಾರತೀಯರಿಗೆ ಕೋವಿಡ್ ಸೋಂಕು

Monday, April 13th, 2020
Share

nepal-mosqueಕಠ್ಮಂಡು : ನೇಪಾಳದಲ್ಲಿರುವ ಮೂವರು ಭಾರತೀಯರಿಗೆ ಕೋವಿಡ್ ಸೋಂಕು ಹರಡಿದೆ. ಧಾರ್ಮಿಕ ಆಚರಣೆಯಲ್ಲಿ ಭಾಗಿಯಾಗಿದ್ದ ಇವರು, ಲಾಕ್‌ ಡೌನ್‌ ಆದ ಹಿನ್ನೆಲೆಯಲ್ಲಿ ಅಲ್ಲಿನ ಮಸೀದಿಯೊಂದರಲ್ಲಿ ವಾಸವಿದ್ದರು ಎನ್ನಲಾಗಿದೆ.

ದೇಶದಾದ್ಯಂತ 8 ದಿನಗಳ ಕಾಲ ಅಂದರೆ ಏ. 15ರ ತನಕ ನೇಪಾಳದಲ್ಲಿ ಲಾಕ್‌ ಡೌನ್‌ ವಿಸ್ತರಣೆ ಮಾಡಿರುವುದರಿಂದ, ಸೋಂಕಿತರು ಕಠ್ಮಂಡುವಿನಿಂದ 135 ಕಿ.ಮೀ ದೂರದಲ್ಲಿರುವ ಬಿರ್‌ ಗುಂಜ್‌ ನಗರದಲ್ಲಿ ವಾಸವಾಗಿದ್ದರು ಎಂದು ಸ್ಥಳೀಯ ವಾಹಿನಿಯೊಂದು ವರದಿ ಮಾಡಿದೆ.

ವಿಶ್ವಾದ್ಯಂತ 1.5 ಮಿಲಿಯನ್ ಗೂ ಅಧಿಕ ಮಂದಿಗೆ ಕೊರೋನಾ ಸೋಂಕು, 87 ಸಾವಿರದ 320 ಮಂದಿ ಮೃತ

Thursday, April 9th, 2020
Share

corona ಪ್ಯಾರಿಸ್: ಕೊರೋನಾ ಸೋಂಕು ವಿಶ್ವಾದ್ಯಂತ 1.5 ಮಿಲಿಯನ್ ಗೂ ಅಧಿಕ ಮಂದಿಗೆ ತಗುಲಿದ್ದು 87 ಸಾವಿರದ 320 ಮಂದಿ ಮೃತಪಟ್ಟಿದ್ದಾರೆ. 192 ದೇಶಗಳಿಗೆ ಸೋಂಕು ಪಸರಿಸಿದೆ ಎಂದು ಎಎಫ್ ಪಿ ಸುದ್ದಿಸಂಸ್ಥೆ ವರದಿ ಮಾಡಿದೆ.

ಚೀನಾದಲ್ಲಿ ಕಾಣಿಸಿಕೊಂಡ ಸೋಂಕಿನ ಬಗ್ಗೆ ಎಎಫ್ ಪಿ ಸಂಸ್ಥೆ ರಾಷ್ಟ್ರೀಯ ಪ್ರಾಧಿಕಾರಗಳು ಮತ್ತು ವಿಶ್ವ ಆರೋಗ್ಯ ಸಂಸ್ಥೆಯ ಮಾಹಿತಿಯನ್ನಾಧರಿಸಿ ಅಂಕಿಅಂಶಗಳನ್ನು ನೀಡಿದೆ. ಸೋಂಕಿತರ ಸಂಖ್ಯೆ ಇನ್ನೂ ಹೆಚ್ಚಾಗಿರಬಹುದು ಎಂದು ಹೇಳಲಾಗುತ್ತಿದೆ. ಏಕೆಂದರೆ ಬಹುತೇಕ ದೇಶಗಳು ಅತಿ ಗಂಭೀರ ಕೇಸುಗಳನ್ನು ಮಾತ್ರ ಪರೀಕ್ಷೆ ನಡೆಸಿವೆ.

ಅಮೆರಿಕಾದಲ್ಲಿ ಸೋಂಕು ವ್ಯಾಪಕವಾಗಿ ಹರಡುತ್ತಿದ್ದು ಇದುವರೆಗೆ 14 ಸಾವಿರದ 817 ಜನರು ಮೃತಪಟ್ಟಿದ್ದು 4 ಲಕ್ಷದ 32 ಸಾವಿರದ 132 ಜನಕ್ಕೆ ತಗುಲಿದೆ. ಸ್ಪೈನ್ ನಲ್ಲಿ 14 ಸಾವಿರದ 555 ಮಂದಿ ಮೃತಪಟ್ಟಿದ್ದು 1 ಲಕ್ಷದ 46 ಸಾವಿರದ 690 ಮಂದಿ ಸೋಂಕಿತರಿದ್ದಾರೆ. ಇಟಲಿ ದೇಶದಲ್ಲಿ 17 ಸಾವಿರದ 669 ಮಂದಿ ಮೃತಪಟ್ಟಿದ್ದು 1 ಲಕ್ಷದ 39 ಸಾವಿರದ 422 ಮಂದಿ ಸೋಂಕಿತರಿದ್ದಾರೆ.

ಕೊರೋನಾ ಸೋಂಕು ಯುರೋಪ್ ಖಂಡದಲ್ಲಿ ಹೆಚ್ಚು ವ್ಯಾಪಿಸಿದೆ. ಇಲ್ಲಿ 7 ಲಕ್ಷದ 72 ಸಾವಿರದ 592 ಜನಕ್ಕೆ ಸೋಂಕು ತಗುಲಿದ್ದು 61 ಸಾವಿರದ 118 ಮಂದಿ ಮೃತಪಟ್ಟಿದ್ದಾರೆ.

ಹುಲಿಗೂ ಕೋವಿಡ್ ಸೋಂಕು : ಬ್ರಾಂಕ್ಸ್‌ ಮೃಗಾಲಯದಲ್ಲಿನ ಹುಲಿಗೆ ಸೋಂಕು ದೃಢ

Wednesday, April 8th, 2020
Share

nadiyaನ್ಯೂಯಾರ್ಕ್‌ : ನ್ಯೂಯಾರ್ಕ್‌ನಲ್ಲಿರುವ ಬ್ರಾಂಕ್ಸ್‌ ಮೃಗಾಲಯದಲ್ಲಿನ ಹುಲಿಗೆ ಸೋಂಕು ಇರುವುದು ದೃಢವಾಗಿದೆ. ನಾಲ್ಕು ವರ್ಷ ವಯಸ್ಸಿನ ನಾಡಿಯಾ ಎಂಬ ಹೆಸರಿನ ಹುಲಿಗೆ ಸೋಂಕು ಕೋವಿಡ್  ತಗಲಿದೆ. ಜತೆಗೆ ಇತರ ಆರು ಹುಲಿ ಮತ್ತು ಸಿಂಹಗಳೂ ಅನಾರೋಗ್ಯದಿಂದ ಬಳಲುತ್ತಿವೆ. ಮೃಗಾಲಯದ ಉದ್ಯೋಗಿಯಿಂದ ಸೋಂಕು ಪ್ರಾಣಿಗಳಿಗೆ ವರ್ಗಾವಣೆ ಆಗಿರಬಹುದೆಂದು ಸದ್ಯ ಶಂಕಿಸಲಾಗುತ್ತಿದೆ.

ಮಾ.27ರಂದು ಹುಲಿ ನಾಡಿಯಾ ಆರಂಭಿಕ ಲಕ್ಷಣಗಳನ್ನು ತೋರಿಸಲಾರಂಭಿಸಿತ್ತು. ಇದರ ಜತೆಗೆ ಜನಿಸಿದ ಅಝುಲ್‌ ಎಂಬ ಮತ್ತೂಂದು ಹುಲಿ, ಮೂರು ಸಿಂಹಗಳು ಒಣ ಕೆಮ್ಮು, ಆಹಾರ ಸೇವಿಸಲು ನಿರಾಸಕ್ತಿ ತೋರಿಸಲಾರಂಭಿಸಿದ್ದವು. ಅಮೆರಿಕದ ಕೃಷಿ ಇಲಾಖೆ ಮತ್ತು ನ್ಯಾಷನಲ್‌ ವೆಟರ್ನರಿ ಸರ್ವಿಸಸ್‌ ಲ್ಯಾಬೋರೇಟರೀಸ್‌ ಈ ಅಂಶ ಖಚಿತಪಡಿಸಿವೆ.

ಕೋವಿಡ್ 19 ವೈರಸ್ ಹಿನ್ನೆಲೆಯಲ್ಲಿ ಬ್ರಾಂಕ್ಸ್‌ ಮೃಗಾಲಯ ಸೇರಿದಂತೆ ನ್ಯೂಯಾರ್ಕ್‌ ವ್ಯಾಪ್ತಿಯಲ್ಲಿರುವ ನಾಲ್ಕು ಝೂಗಳನ್ನು ಮಾ.16ರಿಂದ ಮುಚ್ಚಲಾಗಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಮೃಗಾಲಯ ನಿರ್ದೇಶಕ ಜಿಮ್‌ ಬೆರ್ಹಾನಿ ‘ಇದು ಸವಾಲಿನ ದಿನಗಳು. ಹುಲಿಗೆ ಸೋಂಕು ತಗುಲಿದ ಬಳಿಕ ಅವು ಯಾವ ರೀತಿಯ ಪ್ರತಿಕ್ರಿಯೆ ತೋರಿಸಲಿವೆ ಎನ್ನುವುದನ್ನು ನೋಡಬೇಕಷ್ಟೆ. ಅವು ಶೀಘ್ರವೇ ಗುಣಮುಖವಾಗುವಂತೆ ಮಾಡುವುದು ಆದ್ಯತೆ’ ಎಂದಿದ್ದಾರೆ. ಕಳೆದ ತಿಂಗಳ ಅಂತ್ಯಕ್ಕೆ ಬ್ರೆಜಿಲ್‌ನಲ್ಲಿ ಬೆಕ್ಕಿಗೆ, ಹಾಂಕಾಂಗ್‌ನಲ್ಲಿ 2 ನಾಯಿಗಳಿಗೆ ಸೋಂಕು ತಗುಲಿದ ಪ್ರಕರಣಗಳು ವರದಿಯಾಗಿದ್ದವು.

ನ್ಯೂಯಾರ್ಕ್‌ ಮೃಗಾಲಯದಲ್ಲಿ ಹುಲಿಗೆ ಸೋಂಕು ತಗಲಿರುವುದು ದೃಢವಾಗಿರುವುದರಿಂದ ಕೇಂದ್ರ ಮೃಗಾಲಯ ಪ್ರಾಧಿಕಾರ (ಸಿಜೆಡ್‌ಎ) ದೇಶಾದ್ಯಂತ ಇರುವ ಮೃಗಾಲಯಗಳಲ್ಲಿ ಎಚ್ಚರ ವಹಿಸುವಂತೆ ಸೂಚಿಸಿದೆ. ಈ ಬಗ್ಗೆ ಎಲ್ಲಾ ರಾಜ್ಯ ಸರ್ಕಾರಗಳಿಗೆ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಪತ್ರ ಬರೆಯಲಾಗಿದೆ ಎಂದು ಪ್ರಾಧಿಕಾರದ ಕಾರ್ಯದರ್ಶಿ ಎಸ್‌.ಪಿ. ಯಾದವ್‌ ತಿಳಿಸಿದ್ದಾರೆ. 24 ಗಂಟೆಗಳ ಕಾಲ ಸಿಸಿಟಿವಿ ಮೂಲಕ ಅವುಗಳ ಚಟುವಟಿಕೆಗಳ ಮೇಲೆ ನಿಗಾ ಇರಿಸುವಂತೆ ಪತ್ರದಲ್ಲಿ ಸೂಚಿಸಲಾಗಿದೆ.

ಅಮೆರಿಕಾದಲ್ಲಿ ಕೊರೋನಾ ಸೋಂಕಿನಿಂದ ಮೃತಪಟ್ಟವರು 9ಸಾವಿರದ 634 ಮಂದಿ

Tuesday, April 7th, 2020
Share

Americaನ್ಯೂಯಾರ್ಕ್: ಅಮೆರಿಕಾದಲ್ಲಿ ಇದುವರೆಗೆ ಒಟ್ಟು 3,37,310 ಮಂದಿ ಕೊರೋನಾ ಸೋಂಕಿತರು ದೃಢಪಟ್ಟಿದ್ದು 9ಸಾವಿರದ 634 ಮಂದಿ ಮೃತಪಟ್ಟಿದ್ದಾರೆ.

ಇಲ್ಲಿ ಕಳೆದ 24 ಗಂಟೆಗಳಲ್ಲಿ 1,200 ಮಂದಿ ಮೃತಪಟ್ಟಿದ್ದಾರೆ. ನ್ಯೂಯಾರ್ಕ್ ರಾಜ್ಯದಲ್ಲಿ ಅತಿ ಹೆಚ್ಚು ಮಂದಿ ಮೃತಪಟ್ಟಿದ್ದು 4 ಸಾವಿರಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ. ನ್ಯೂಜೆರ್ಸಿಯಲ್ಲಿ 846, ಮಿಚಿಗನ್ ನಲ್ಲಿ 540, ಕ್ಯಾಲಿಫೋರ್ನಿಯಾದಲ್ಲಿ 324 ಸಾವಿನ ಪ್ರಕರಣಗಳು ವರದಿಯಾಗಿವೆ.ಜಾನ್ ಹಾಪ್ ಕಿನ್ಸ್ ಕೊರೋನಾ ವೈರಸ್ ಅಂಕಿಅಂಶ ಸಂಗ್ರಹ ಕೇಂದ್ರದಿಂದ ಈ ಮಾಹಿತಿ ಸಿಕ್ಕಿದೆ.

ಯುವಕರಿಗಾಗಿ ವೆಂಟಿಲೇಟರ್ ಬಿಟ್ಟುಕೊಟ್ಟು ಪ್ರಾಣ ಬಿಟ್ಟ 90 ವರ್ಷದ ಅಜ್ಜಿ

Sunday, April 5th, 2020
Share

corona90ಬೆಲ್ಜಿಯಂ : ಕೊರೋನಾ ವೈರಸ್  ಬಳಲುತ್ತಿದ್ದ ವೃದ್ಧೆಯೊಬ್ಬರು ಕೊರೋನಾದಿಂದ ಬಳಲುತ್ತಿದ್ದ ಯುವಕರಿಗಾಗಿ ವೆಂಟಿಲೇಟರ್ ಬಿಟ್ಟುಕೊಂಡು ಪ್ರಾಣ ಬಿಟ್ಟು ಅಪೂರ್ವ ತ್ಯಾಗ ಮೆರೆದಿರುವ ಘಟನೆ ಬೆಲ್ಜಿಯಂನಲ್ಲಿ ನಡೆದಿದೆ.

ಐಸೋಲೇಷನ್ ವಾರ್ಡ್ ನಲ್ಲಿ 90 ವರ್ಷದ ವೃದ್ಧೆಯೊಬ್ಬರು, ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ನೀಡುತ್ತಿದ್ದ ವೈದ್ಯರು ಆಕೆಗೆ ವೆಂಟಿಲೇಟರ್ ಅಳವಡಿಸಲು ಮುಂದಾಗಿದ್ದಾರೆ. ಇದನ್ನು ಕಂಡ ವೃದ್ದೆ ನನಗೆ ವೆಂಟಿಲೇಟರ್ ಬಳಸುವುದು ಬೇಡ. ನಾನು ಈಗಾಗಲೇ ಅತ್ಯುತ್ತಮ ಜೀವನ ಅನುಭವಿಸಿದ್ದೇನೆ. ದೇಶದ ಯುವ ಕೊರೋನಾ ಪೀಡಿತರಿಗೆ ವೆಂಟಿಲೇಟರ್ ಬಳಸಿ ಎಂದು ಹೇಳಿದ್ದಾರೆ.

ನನಗೆ ಕೃತಕ ಉಸಿರಾಟ ಕಲ್ಪಿಸುವ ವೆಂಟಿಲೇಟರ್ ಬಳಕೆ ಬೇಡ. ನನ್ನ ಬದಲಿಗೆ ಯುವ ಕೊರೋನಾ ರೋಗಿಗಳಿಗೆ ಬಳಕೆ ಮಾಡಿ ಎಂದು ವೈದ್ಯರಲ್ಲಿ ಮನವಿ ಮಾಡಿಕೊಂಡಿದ್ದಾರೆ. ಇದಾದ ಕೆಲವೇ ಗಂಟೆಗಳ ಬಳಿಕ ಅಜ್ಜಿ ಕೊನೆಯುಸಿರೆಳೆದಿದ್ದಾರೆ. ಅಜ್ಜಿಯ ಈ ಅಪೂರ್ವ ತ್ಯಾಗಕ್ಕೆ ವಿಶ್ವದಾದ್ಯಂತ ಭಾರೀ ಪ್ರಶಂಸೆಗಳು ವ್ಯಕ್ತವಾಗತೊಡಗಿವೆ.