ಎಂ.ಬಿ.ಸದಾಶಿವ ರ ಅಧ್ಯಕ್ಷತೆಯಲ್ಲಿನ ಪಕ್ಷ ಇನ್ನು ಮುಂದಿನ ದಿನಗಳಲ್ಲಿ ಕರಾವಳಿಯಲ್ಲಿ ನೆಲೆ ಕಳೆದುಕೊಳ್ಳುತ್ತದೆ : ಡಿ.ಎಂ.ಅಸ್ಲಂ

Friday, March 29th, 2013
DM Aslam

ಮಂಗಳೂರು : ಪಕ್ಷದಿಂದ ಉಚ್ಛಾಟಿಸಲಾಗಿದೆ ಎಂದು ಮಾಧ್ಯಮಗಳಲ್ಲಿ ಪ್ರಕಟವಾಗಿದೆ ಆದರೆ ಈ ಬಗ್ಗೆ ಯಾವುದೇ ಮಾಹಿತಿ ತನಗೆ ಲಭಿಸಿಲ್ಲ ಮತ್ತು ಯಾವುದೇ ಆದೇಶದ ಪ್ರತಿ ನನ್ನ ಕೈ ಸೇರಿಲ್ಲ ಮಾದ್ಯಮಗಳಲ್ಲಿ ಪ್ರಕಟವಾದ ವರದಿಯಿಂದಲೇ ಈ ಬಗ್ಗೆ ತಿಳಿದಿದ್ದೇನೆ ಎಂದು ಜೆಡಿ‌ಎಸ್ ದ.ಕ.ಜಿಲ್ಲಾ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಡಿ.ಎಂ.ಅಸ್ಲಂ ಹೇಳಿದ್ದಾರೆ. ಈ ಕುರಿತು ಗುರುವಾರ ಪತ್ರಿಕಾ ಘೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು ನನ್ನನ್ನು ಪಕ್ಷದಿಂದ ಅಮಾನತು ಗೊಳಿಸಿರುವ ಬಗ್ಗೆ ಹೇಳಿಕೆ ನೀಡಿರುವ ಪಕ್ಷದ ಜಿಲ್ಲಾಧ್ಯಕ್ಷ ಎಂ.ಬಿ.ಸದಾಶಿವ ಪಕ್ಷಕ್ಕಾಗಿ ಯಾವುದೇ ರೀತಿಯ […]

ಸ್ವಾರ್ಥಕ್ಕಾಗಿ ಸಂಘಟನೆಯ ಬಳಕೆ : ಬಿಲ್ಲವರ ಯೂನಿಯನ್ ಕಾರ್ಯದರ್ಶಿ ರವಿಶಂಕರ್ ಮಿಜಾರ್ ಆರೋಪ

Thursday, March 28th, 2013
All India Billawa Union

ಮಂಗಳೂರು : ಅಖಿಲ ಭಾರತ ಬಿಲ್ಲವರ ಯೂನಿಯನ್ ನ ಅಧ್ಯಕ್ಷರಾಗಿರುವ ನವೀನ್ ಚಂದ್ರ ಸುವರ್ಣ ತಮ್ಮ ಅಧಿಕಾರವನ್ನು ದುರುಪಯೋಗ ಪಡಿಸಿಕೊಳ್ಳುತ್ತಿದ್ದು ತಮ್ಮ ಸ್ವಹಿತಾಸಕ್ತಿ ಗಾಗಿ  ಯೂನಿಯನ್ ನ ಕ್ರಮಗಳಿಗೆ ವಿರುದ್ದವಾಗಿ, ಕಾನೂನು ಬಾಹಿರ ಸಭೆಗಳನ್ನು ನಡೆಸುತ್ತಿದ್ದಾರೆ ಇದನ್ನು ಸರಿಪಡಿಸಿಕೊಳ್ಳದಿದ್ದಲಿ ಮುಂದಿನ ದಿನಗಳಲ್ಲಿ  ಅಧಕ್ಷರು ಇದಕ್ಕೆ ತಕ್ಕ ಬೆಲೆಯನ್ನು ತೆರಬೇಕಾಗುತ್ತದೆ ಎಂದು ಬಿಲ್ಲವರ ಸಂಘಟನೆಗಳ ಏಕೀಕರಣ ಸಮಿತಿ ಪ್ರಧಾನ ಕಾರ್ಯದರ್ಶಿ ರವಿಶಂಕರ್ ಮಿಜಾರ್ ಎಚ್ಚರಿಸಿದರು. ಅವರು ಗುರುವಾರ ನಗರದಲ್ಲಿ ನಡೆದ ಪತ್ರಿಕಾ ಘೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಯೂನಿಯನ್ ನ ಅಧ್ಯಕ್ಷರಾಗಿರುವ […]

ಸುರತ್ಕಲ್ : ಟೋಲ್ ಗೇಟ್ ಕೇಂದ್ರ ವಿರೋಧಿಸಿ ಪ್ರತಿಭಟನೆ, ಉತ್ತಮ ಪ್ರತಿಕ್ರಿಯೆ

Thursday, March 28th, 2013
Tollgate, Surathkal bundh

ಸುರತ್ಕಲ್ : ಸುರತ್ಕಲ್ ನಾಗರಿಕ ಹಿತರಕ್ಷಣೆ ಸಮಿತಿ ಆಶ್ರಯದಲ್ಲಿ ಎನ್‌ಐಟಿಕೆ ಬಳಿ ಸ್ಥಾಪಿಸಲು ಉದ್ದೇಶಿಸಿರುವ ಟೋಲ್ ಗೇಟ್ ಕೇಂದ್ರ ವಿರೋಧಿಸಿ ಬುಧವಾರ ನಡೆದ ಬಂದ್‌ಗೆ ಸುರತ್ಕಲ್ ಪರಿಸರದಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತ ವಾಯಿತು. ಸುರತ್ಕಲ್‌ನಿಂದ ಎನ್‌ಐಟಿಕೆ ವರೆಗೆ ಪ್ರತಿಭಟನಾ ಮೆರವಣಿಗೆ ನಡೆಯಿತು. ಪ್ರತಿಭಟನೆಯಲ್ಲಿ ಎಲ್ಲ ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಸಕ್ರಿಯವಾಗಿ ಭಾಗವಹಿಸಿದ್ದು, ಹೋಟೆಲ್ ಗಳು, ಅಂಗಡಿ ಮುಗ್ಗಟುಗಳು ಸ್ವಯಂ ಪ್ರೇರಿತವಾಗಿ ಮುಚ್ಚುವ ಮೂಲಕ ಬಂದ್ ಗೆ ಉತ್ತಮ ಬೆಂಬಲ ವ್ಯಕ್ತವಾಯಿತು. ಒಂದು ಟೋಲ್‌ಗೇಟ್‌ನಿಂದ ಇನ್ನೊಂದಕ್ಕೆ 60 ಕಿ.ಮೀ. […]

ಕುಲಶೇಖರದ ಬಳಿ ರಸ್ತೆ ಅಪಘಾತ : ಓರ್ವನ ಸಾವು

Wednesday, March 27th, 2013
Accsident near Kulashekar

ಮಂಗಳೂರು : ಇಂದು ಬೆಳಗ್ಗೆ  ರಸ್ತೆ ಬದಿ ನಡೆದುಕೊಂಡು ಹೋಗುತ್ತಿದ್ದ ಇಬ್ಬರಿಗೆ ಓಮ್ನಿ ಕಾರೊಂದು ಡಿಕ್ಕಿ ಹೊಡೆದ ಪರಿಣಾಮ ಓರ್ವ ಮೃತಪಟ್ಟಿದ್ದು ಇನ್ನೋರ್ವ ಮಹಿಳೆಗೆ ಗಂಭೀರ ಗಾಯಗೊಂಡ ಘಟನೆ  ಕುಲಶೇಖರದ ಸೇಕ್ರೆಡ್ ಹಾರ್ಟ್ ಸ್ಕೂಲ್ ಬಳಿ ನಡೆದಿದೆ. ವಾಮಂಜೂರಿನಿಂದ ಕುಲಶೇಖರದ ಕಡೆಗೆ ಹೋಗುತ್ತಿದ್ದ ಓಮ್ನಿ ಕಾರು  ನಿಯಂತ್ರಣ ತಪ್ಪಿ ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಆಲ್ಬರ್ಟ್ ಫ್ರಾನ್ಸಿಸ್ಕೋ ಹಾಗೂ ಮಹಿಳೆಗೆ ಡಿಕ್ಕಿ ಹೊಡೆಯಿತು ಪರಿಣಾಮ ಆಲ್ಬರ್ಟ್ ಫ್ರಾನ್ಸಿಸ್ಕೋ(60) ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಗಂಭೀರವಾಗಿ ಗಾಯಗೊಂಡ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. […]

ಚೋರರಿಬ್ಬರ ಬಂಧನ : ಐದು ಲಕ್ಷ ಮೌಲ್ಯದ ಸೊತ್ತುಗಳ ವಶ

Wednesday, March 27th, 2013
Kadri police

ಮಂಗಳೂರು : ಕದ್ರಿ ಕ್ರೈಂ ವಿಭಾಗದ ಪೊಲೀಸರು ಬಲ್ಮಠ ಬಳಿ ಮಂಗಳವಾರ ನಡೆಸಿದ ಕ್ಷಿಪ್ರ ಕಾರ್ಯಾಚರಣೆಯಿಂದಾಗಿ ಚೋರರಿಬ್ಬರು ಬಂಧಿಸಲ್ಪಟ್ಟಿದ್ದು ಅವರಿಂದ ಐದು ಲಕ್ಷ ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಂಡು ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು ನ್ಯಾಯಾಲಯ ನ್ಯಾಯಾಂಗ ಬಂಧನ ವಿಧಿಸಿದೆ. ಬಂಧಿತರನ್ನು ಬಂದರು ನಿವಾಸಿ ಮುನೀರ್ ಅಹಮದ್ ಅಲಿಯಾಸ್ ಗೂಡ್ಸ್ ಮುನೀರ್ ಅಲಿಯಾಸ್ ಮುನ್ನ(57) ಹಾಗೂ ಮಂಜೇಶ್ವರ ಹೊಸಂಗಡಿ ನಿವಾಸಿ ಇಬ್ರಾಹಿಂ(67) ಎಂದು ಗುರುತಿಸಲಾಗಿದೆ. ಕದ್ರಿ ಕ್ರೈಂ ವಿಭಾಗದ ಪೊಲೀಸರು ಬಲ್ಮಠ ಬಳಿ ಗಸ್ತು ತಿರುಗುತ್ತಿದ್ದ ವೇಳೆ ಅನುಮಾನಾಸ್ಪದವಾಗಿ ಕಂಡುಬಂದ […]

ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಎನ್. ಪ್ರಕಾಶ್ ವರ್ಗಾವಣೆ ಸಾಧ್ಯತೆ

Wednesday, March 27th, 2013
N. Prakash

ಮಂಗಳೂರು : ವಿಧಾನಸಭೆ ಚುನಾವಣೆ ಹಿನ್ನಲೆಯಲ್ಲಿ ಚುನಾವಣಾ ಆಯೋಗದ ಆದೇಶದಂತೆ ರಾಜ್ಯಾದ್ಯಂತ ಸರ್ಕಾರಿ ಅಧಿಕಾರಿಗಳ ವರ್ಗಾವಣೆ ಪ್ರಾರಂಭವಾಗಿದ್ದು, ರಾಜ್ಯಾದ್ಯಂತ 12 ಜಿಲ್ಲಾಧಿಕಾರಿಗಳು ಸೇರಿದಂತೆ 20 ಮಂದಿ ಐ ಎ ಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿದೆ. ಈ ಪಟ್ಟಿಯಲ್ಲಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಎನ್. ಪ್ರಕಾಶ್ ಕೂಡ ಸೇರಿದ್ದಾರೆ. ಎನ್. ಪ್ರಕಾಶ್ ಜಾಗಕ್ಕೆ ನೂತನ ಜಿಲ್ಲಾಧಿಕಾರಿ ಹರ್ಷ ಗುಪ್ತ ನೇಮಕಗೊಳ್ಳುವ ಸಾಧ್ಯತೆ ಇದೆ. ಮೂಲತಃ  ದೆಹಲಿಯವರಾಗಿರುವ ಹರ್ಷ 1997ರ ಬ್ಯಾಚ್ ನ ಐಎಎಸ್ ಅಧಿಕಾರಿಯಾಗಿದ್ದಾರೆ. ದೆಹಲಿಯಲ್ಲಿ ಸೇವೆ ಸಲ್ಲಿಸಿದ್ದ ಇವರು […]

ಪಕ್ಷ ವಿರೋಧಿ ಹೇಳಿಕೆ; ಬಿಜೆಪಿ ಯಿಂದ ರೇಣುಕಾಚಾರ್ಯ ಉಚ್ಚಾಟನೆ

Wednesday, March 27th, 2013
Renukachaarya

ಬೆಂಗಳೂರು : ಬಿಜೆಪಿ ಮುಖಂಡರ ವಿರುದ್ದ ನೀಡಿದ ಹೇಳಿಕೆ, ಪಕ್ಷವಿರೋಧಿ ಚಟುವಟಿಕೆಗಳಿಗಾಗಿ ಬಿಜೆಪಿ ರಾಜ್ಯಾಧ್ಯಕ್ಷ ಪ್ರಹ್ಲಾದ ಜೋಶಿ ಯವರು ಬಿಜೆಪಿ ಅಬಕಾರಿ ಸಚಿವ ಎಂ.ಪಿ.ರೇಣುಕಾಚಾರ್ಯ ಅವರನ್ನು ಬಿಜೆಪಿಯ ಪ್ರಾಥಮಿಕ ಸದಸ್ಯತ್ವದಿಂದ 6 ವರ್ಷಗಳ ಕಾಲ ಉಚ್ಚಾಟಿಸಿದ್ದಾರೆ. ಸದಾನಂದ ಗೌಡ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ತಮ್ಮಿಂದ ಅವರು ಹಣ ಪಡೆದಿದ್ದಾಗಿ ಮತ್ತು ಈ ಬಗ್ಗೆ ಸೂಕ್ತ ದಾಖಲೆ ಇರುವುದಾಗಿ ಸುದ್ದಿಗಾರರಿಗೆ ಹೇಳಿಕೆ ನೀಡುವ ಮೂಲಕ ರೇಣುಕಾಚಾರ್ಯ ಬಿಜೆಪಿ ನಾಯಕರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಈಗಾಗಲೇ ಬಿಜೆಪಿ ಮುಖಂಡರ ವಿರುದ್ಧ ಕಿಡಿ ಕಾರುತ್ತಾ, ಮಾಜಿ […]

ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಟೋಲ್‌ಗೇಟ್‌ ನಿರ್ಮಾಣಕ್ಕೆ ವಿರೋಧ, ಬಂದ್‌ಗೆ ಕರೆ

Wednesday, March 27th, 2013
Tollgate construction

ಸುರತ್ಕಲ್ : ರಾಷ್ಟ್ರೀಯ ಹೆದ್ದಾರಿ 66 ಎನ್‌ಐಟಿಕೆ ಬಳಿ ಇರ್ಕಾನ್ ಸಂಸ್ಥೆಯು ನಿರ್ಮಿಸಲು ಉದ್ದೇಶಿಸಿರುವ ಟೋಲ್ ಗೇಟ್ ಸಂಗ್ರಹ ಕೇಂದ್ರಕ್ಕೆ ಎನ್‌ಐಟಿಕೆ ಹಾಗು ಸುರತ್ಕಲ್ ನಾಗರೀಕ ಸಮಿತಿ ತೀವ್ರ ವಿರೋಧ ವ್ಯಕ್ತಪಡಿಸಿದ್ದು  ಬುಧವಾರ ಸುರತ್ಕಲ್‌  ಬಂದ್‌ಗೆ ಕರೆ ನೀಡಲಾಗಿದೆ. ಎನ್‌ಐಟಿಕೆ ಬಳಿ ಶಾಲೆಗಳು ಹಾಗು ಇಂಜಿನಿಯರಿಂಗ್ ಕಾಲೇಜು, ಕ್ಯಾಂಪಸ್ ಇರುವುದರಿಂದ ವಾಹನಗಳ ಸಾಲುಗಳು, ಅವುಗಳ ಕರ್ಕಶ ಶಬ್ದಗಳು ವಿದ್ಯಾರ್ಥಿಗಳ ಶಿಕ್ಷಣಕ್ಕೆ ಧಕ್ಕೆ ಉಂಟಾಗುವುದಲ್ಲದೆ, ಸುರಕ್ಷತೆಗೂ ಅಡ್ಡಿ ಉಂಟಾಗಬಹುದು, ಅಲ್ಲದೆ ಟೋಲ್‌ಗೇಟ್‌ ನಿರ್ಮಾಣಕ್ಕೆ ಕನಿಷ್ಟ ಆರು ಲೇನ್‌ಗಷ್ಟು ಜಾಗದ […]

ಪಕ್ಷದಲ್ಲಿನ ಮೂಲ ಕಾರ್ಯಕರ್ತರಾಗಲೀ ನಾಯಕರಾಗಲೀ ಪಕ್ಷ ತೊರೆದಿಲ್ಲ : ಸುಶೀಲ್ ನೊರೊನ್ಹ

Tuesday, March 26th, 2013
Sushil Noronha

ಮಂಗಳೂರು : ಕರಾವಳಿಯಲ್ಲಿ ಜೆಡಿಎಸ್ ತನ್ನ ನೆಲೆಯನ್ನು ಕಂಡುಕೊಳ್ಳುವ ಸಮಯದಲ್ಲಿ ಜೆಡಿಎಸ್ ರಾಜ್ಯ ಕಾರ್ಯದರ್ಶಿ ಎಂ.ಜಿ. ಹೆಗಡೆ ಮತ್ತು ನಾಗರಾಜ ಶೆಟ್ಟಿ ಹಾಗು ಇತರೆ ನಾಯಕರು ಪಕ್ಷಕ್ಕೆ ರಾಜಿನಾಮೆ ನೀಡಿರುವುದರಿಂದ ಪಕ್ಷಕ್ಕೆ ಯಾವುದೇ ರೀತಿಯ ನಷ್ಟವಿಲ್ಲ, ಇದು ಕರಾವಳಿಯಲ್ಲಿ ಬೇರೆ ಪಕ್ಷಗಳೊಂದಿಗೆ ಕೈ ಜೋಡಿಸಿ ಪಕ್ಷಕ್ಕೆ ಹಿನ್ನಡೆ ಉಂಟುಮಾಡಲು ನಡೆಸುತ್ತಿರುವ ಸಂಚು ಇದರಿಂದ ಪಕ್ಷಕ್ಕೆ ಯಾವುದೇ ರೀತಿಯ ಹಿನ್ನಡೆ ಉಂಟಾಗಲಾರದು ಎಂದು ಸುಶೀಲ್ ನೊರೊನ್ಹ ತಿಳಿಸಿದರು. ಸೋಮವಾರ ಎಂ.ಜಿ.ಹೆಗಡೆ ಪತ್ರಿಕಾ ಘೋಷ್ಠಿ ನಡೆಸಿ ರಾಜಿನಾಮೆ ಸಲ್ಲಿಸಿರುವ ಬಗ್ಗೆ […]

ದ.ಕ ಜಿಲ್ಲಾಧ್ಯಕ್ಷರ ಸರ್ವಾಧಿಕಾರ ಧೋರಣೆ; ಕಾರ್ಯಕರ್ತರೂ ಸೇರಿದಂತೆ ಪ್ರಮುಖ ನಾಯಕರ ರಾಜೀನಾಮೆ

Tuesday, March 26th, 2013
JDS in district

ಮಂಗಳೂರು : ಜೆಡಿಎಸ್ ರಾಜ್ಯ ಕಾರ್ಯದರ್ಶಿ ಎಂ.ಜಿ.ಹೆಗ್ಡೆ ಸೇರಿದಂತೆ  ಪಕ್ಷದ ಪ್ರಮುಖ 10ಮಂದಿ ನಾಯಕರು,50 ಮಂದಿ ಕಾರ್ಯಕರ್ತರು  ಒಟ್ಟು 60ಮಂದಿ ಸದಸ್ಯರು  ಜೆಡಿಎಸ್ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ಸಾಮೂಹಿಕ ರಾಜಿನಾಮೆ ನೀಡಿರುವುದಾಗಿ ತಿಳಿಸಿದರು.ಸೋಮವಾರ ನಗರದಲ್ಲಿ ನಡೆದ ಪತ್ರಿಕಾ ಘೋಷ್ಠಿಯಲ್ಲಿ ಈ ಬಗ್ಗೆ ಮಾತನಾಡಿದ ಅವರು ಜನತಾದಳ ಪಕ್ಷವನ್ನು ಕರಾವಳಿ ಭಾಗದಲ್ಲಿ ಮುನ್ನಡೆಸಲು ಸ್ವತ; ಪಕ್ಷದ ರಾಜ್ಯಾಧ್ಯಕ್ಷ  ಹೆಚ್. ಡಿ .ಕುಮಾರಸ್ವಾಮಿ ಕೋರಿ ಅಹ್ವಾನ ನೀಡಿದ್ದರಿಂದ ಅವರ ಮನವಿಯನ್ನು ಪುರಸ್ಕರಿಸಿ ಪಕ್ಷವನ್ನು ಸೇರಿ ಪಕ್ಷವನ್ನು ಸಂಘಟಿಸಲು ಪ್ರಾಮಾಣಿಕ ಪ್ರಯತ್ನ  ಮಾಡಿದ್ದೆವು. ಆದರೆ  […]