ಕಾಂಗ್ರೆಸ್ ಕಾರ್ಯಕರ್ತನ ನಿಗೂಢ ಸಾವು

Sunday, March 6th, 2016
Congress worker

ಕಾಸರಗೋಡು: ಕಾಂಗ್ರೆಸ್ ಕಾರ್ಯಕರ್ತನ ಮೃತದೇಹ ಮನೆಯೊಳಗೆ ಮೃತಪಟ್ಟಿ ಸ್ಥಿತಿಯಲ್ಲಿ ಪತ್ತೆಯಾಗಿದೆ. ಸಾವಿನಲ್ಲಿ ನಿಗೂಢತೆ ಉಂಟಾದ ಹಿನ್ನೆಲೆಯಲ್ಲಿ ಮೃತದೇಹವನ್ನು ಹೆಚ್ಚಿನ ಮರಣೋತ್ತರ ಪರೀಕ್ಷೆಗಾಗಿ ಪೆರಿಯಾರಂ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ. ಉದುಮ ಮಾಂಗಾಡ್ ಮೇಲ್ಬಾರ ಕಾಲನಿ ನಿವಾಸಿ ಬಾಲಕೃಷ್ಣನ್ ಅವರ ಪುತ್ರ ಚಂದ್ರನ್(40) ಮೃತಪಟ್ಟವರು. ಚಂದ್ರನ್ ಶನಿವಾರ ರಾತ್ರಿ ತೃಕ್ಕನ್ನಾಡ್ ಕ್ಷೇತ್ರ ಆರಾಟು ಮಹೋತ್ಸವಕ್ಕೆ ತೆರಳಿದ್ದರು. ಮನೆಯ ಇತರರು ಬೇರೆಡೆಗೆ ಕಾರ್ಯಕ್ರಮ ನಿಮಿತ್ತ ತೆರಳಿದ್ದರು. ಆದಿತ್ಯವಾರ ಬೆಳಗ್ಗೆ ಅವರು ಮನೆಗೆ ಮರಳಿದಾಗ ಚಂದ್ರನ್ ಮನೆಯೊಳಗೆ ಮೃತಪಟ್ಟ ಸ್ಥಿತಿಯಲ್ಲಿ ಕಂಡು […]

ಮಂದಬುದ್ಧಿಯ ಬಾಲಕಿಯನ್ನು ಬಳಸಿ ವೇಶ್ಯಾವಾಟಿಕೆ : ತಾಯಿ ಸಹಿತ ಮೂವರ ಸೆರೆ

Sunday, March 6th, 2016
girl Rape

ಕಾಸರಗೋಡು: ಮಂದ ಬುದ್ಧಿಯ ಬಾಲಕಿಯನ್ನು ಬಳಸಿ ವೇಶ್ಯಾವಾಟಿಕೆ ನಡೆಸಿ ಹಣ ಸಂಪಾದಿಸಲು ಹೊರಟ ತಾಯಿ ಸಹಿತ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ಕೊಚ್ಚಿಯ ಮರೈನ್ ಡ್ರೈವ್‌ನಲ್ಲಿರುವ ಆಡಂಬರ ಪ್ಲಾಟ್‌ನಲ್ಲಿ ವೇಶ್ಯಾವಾಟಿಕೆ ದಂಧೆ ನಡೆದಿದೆ. ಸೆರೆಗೀಡಾದವರೆಲ್ಲಾ ಕೊಲ್ಲಂ ಕೊಟ್ಟಾರಕ್ಕರ ಪರಿಸರ ನಿವಾಸಿಗಳಾಗಿದ್ದಾರೆ. ಕೊಚ್ಚಿ ಕೇಂದ್ರೀಕರಿಸಿ ಪ್ರಾಯ ಪೂರ್ತಿಯಾಗದ ಹಾಗೂ ಮಂದಬುದ್ಧಿಯ ಬಾಲಕಿಯನ್ನು ಬಳಸಿ ವೇಶ್ಯಾವಾಟಿಕೆ ದಂಧೆ ನಡೆಸುತ್ತಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ಲಭಿಸಿತ್ತು. ಕೂಡಲೇ ಕಲ್ಲಿಕೋಟೆ ನಿವಾಸಿಯಾದ ಮೀನು ವ್ಯಾಪಾರಿಯೆಂದು ತಿಳಿಸಿ ವೇಶ್ಯಾವಾಟಿಕೆ ದಂಧೆಯ ರೂವಾರಿಗಳನ್ನು ಪೊಲೀಸರು ಸಂಪರ್ಕಿಸಿದ್ದಾರೆ. ಈ […]

ನಾಥ ಪಂಥ ಮಾನವ ಜನ್ಮದ ಧರ್ಮ ದೀಪಿಕಾ : ನಿತ್ಯಾನಂದ ಸ್ವಾಮೀಜಿ

Sunday, March 6th, 2016
jogi-mutt

ಮಂಗಳೂರು : ನಾಥ ಪಂಥ ಮಾನವ ಜನ್ಮದ ಧರ್ಮ ದೀಪಿಕಾ. ಪಂಥದ ಝಂಡಿಯಾತ್ರೆಯ ಹಿಂದೆ ರಾಷ್ಟ್ರೀಯತೆ, ಸಮಗ್ರತೆಯ ಚಿಂತನೆ ಇದೆ ಎಂದು ಚಿಕ್ಕಮಗಳೂರು ಶ್ರೀ ವೇದವಿಜ್ಞಾನ ಕೇಂದ್ರದ ಶ್ರೀ ಕೆ.ಎಸ್. ನಿತ್ಯಾನಂದ ಸ್ವಾಮೀಜಿ ನುಡಿದರು. ಕದಳೀ ಶ್ರೀ ಯೋಗೇಶ್ವರ (ಜೋಗಿ) ಮಠ ಪರ್ಯಾಯ ರಾಜ ಪಟ್ಟಾಭಿಷೇಕ ಮಹೋತ್ಸವದಂಗವಾಗಿ ಜೋಗಿ ಮಠ ಪರಿಸರದ ಶ್ರೀ ಸಿದ್ಧಗುರು ಸುಂದರನಾಥ ವೇದಿಕೆಯಲ್ಲಿ ನಡೆದ ನಾಲ್ಕನೇ ದಿನದ ಧಾರ್ಮಿಕ ಸಭೆಯಲ್ಲಿ ಅವರು ಆಶೀರ್ವಚನ ನೀಡಿದರು. ಪ್ರಚಾರವಿಲ್ಲದ ಪಂಥ ನಾಥಪಂಥ. ಸರಳ ಬದುಕು ಹೇಳಿಕೊಡುವ […]

ವಿವಾಹ ವಿಚ್ಛೇದನ ಕೋರಿ ನಟಿ ಪ್ರೇಮಾ ಬೆಂಗಳೂರಿನ ಕೌಟುಂಬಿಕ ನ್ಯಾಯಾಲಯದಲ್ಲಿ ಅರ್ಜಿ

Saturday, March 5th, 2016
prema

ಬೆಂಗಳೂರು : ನಟಿ ಪ್ರೇಮಾ ವಿವಾಹ ವಿಚ್ಛೇದನ ಕೋರಿ ಬೆಂಗಳೂರಿನ ಕೌಟುಂಬಿಕ ನ್ಯಾಯಾಲಯದಲ್ಲಿ ಬುಧವಾರ(ಮಾರ್ಚ್ 02) ಅರ್ಜಿ ಸಲ್ಲಿಸಿದ್ದಾರೆ. ಕೊಡಗು ಮೂಲದ ಪ್ರೇಮಾ ಅವರು 2006ರಲ್ಲಿ ತಮ್ಮ ಸಮುದಾಯದವರೇ ಆದ ಉದ್ಯಮಿ ಜೀವನ್ ಅಪ್ಪಚ್ಚು ಅವರನ್ನು ವರಿಸಿದ್ದರು. 1995ರಲ್ಲಿ ಶಿವರಾಜ್ ಕುಮಾರ್ ಅಭಿನಯದ ಸವ್ಯಸಾಚಿ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟರು. ನಂತರ ಉಪೇಂದ್ರ ನಿರ್ದೇಶನದ ‘ಓಂ’ ಚಿತ್ರದ ಮಾಧುರಿ ಪಾತ್ರದ ಮೂಲಕ ಮನೆ ಮಾತಾದರು. ನಮ್ಮೂರ ಮಂದಾರ ಹೂವೇ,ಯಜಮಾನ ಸೇರಿದಂತೆ ಅನೇಕ ಜನಪ್ರಿಯ ಚಿತ್ರಗಳಲ್ಲಿ ನಟಿಸಿದ್ದಾರೆ. […]

ಶಿವರಾತ್ರಿಯ ನಡುರಾತ್ರಿ ಕೋಟಿ ಸೂರ್ಯ ಪ್ರಕಾಶನಾದ ಪರಶಿವನು ಶಿವಲಿಂಗದಿಂದ ಸ್ವಯಂಭೂವಾಗಿ ಉದ್ಭವಿಸಿದ

Saturday, March 5th, 2016
shiva

ಮಂಗಳೂರು : ಹಿಮಾಲಯ ಪರ್ವತಗಳಲ್ಲೇ ಪವಿತ್ರವಾದ ಶಿವನ ಸ್ಥಾನ ಇರುವ ಪರ್ವತ ಕೈಲಾಸ. ಶಿವ ಲಯಕರ್ತ, ಭಕ್ತಿ ದೇವರು. ಶಿವನ ಮಗ ಕುಮಾರ ವೀರಭದ್ರ-ಕೆಟ್ಟ ಪಾಪಗಳನ್ನು ನಾಶಮಾಡುವವನು. ಕೆಟ್ಟ ಮನಸ್ಥಿತಿಯುಳ್ಳವನನ್ನು ಛೇದನಮಾಡುವುದು ಶಿವನ ಸೇನಾಧಿಪತಿ ವೀರಭದ್ರೇಶ್ವರ. ಗಣಪತಿ ವಿಘ್ನ ನಿವಾರಕ. ದಕ್ಷಿಣಾಕಾರ ಮತ್ತು ಆರ್ಧಸುತ್ತು ಪ್ರದಕ್ಷಿಣೆ ಶಿವ ದೇವಾಲಯದಲ್ಲಿ ಮಾತ್ರ. ಶಿವನು ಸ್ಮಶಾನಾವಾಸಿಯಾದ ಕಾರಣ ನಮಗೆ ಬಂದ ದೃಷ್ಟಿಯನ್ನು ಶಿವನು ತೆಗೆಯುವನು ಎಂಬ ನಂಬಿಕೆ. ಮಹಾ ಶಿವರಾತ್ರಿಯಂದು ನಡುರಾತ್ರಿ ಕೋಟಿ ಸೂರ್ಯ ಪ್ರಕಾಶನಾದ ಪರಶಿವನು ಶಿವಲಿಂಗದಿಂದ ಸ್ವಯಂಭೂವಾಗಿ […]

ಕುಂಬಳೆ ಪಂಚಾಯತಿನಲ್ಲಿ ಉಚಿತ ಸೈಕಲ್ ವಿತರಣೆ

Saturday, March 5th, 2016
kumble cycle

ಕುಂಬಳೆ : ಕುಂಬಳೆ ಗ್ರಾಮ ಪಂಚಾಯತಿನಲ್ಲಿ 2015-16 ರ ಯೋಜನೆಯ ಫಂಡಿನಿಂದ ಎಸ್‌ಎಸ್‌ಎಲ್‌ಸಿ ಕಲಿಯುತ್ತಿರುವ ಎಸ್‌ಟಿಎಸ್‌ಸಿ ವಿದ್ಯಾರ್ಥಿಗಳಿಗೆ ಬುಧವಾರ ಉಚಿತ ಸೈಕಲ್ ವಿತರಿಸುವ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮವನ್ನು ಮಂಜೇಶ್ವರ ಶಾಸಕ ಪಿ.ಬಿ.ಅಬ್ದುಲ್ ರಝಾಕ್ ಉದ್ಘಾಟಿಸಿದರು. ಕುಂಬಳೆ ಪಂಚಾಯತು ಅಧ್ಯಕ್ಷ ಪುಂಡರೀಕಾಕ್ಷ ಕೆ.ಎಲ್ ಅಧ್ಯಕ್ಷತೆ ವಹಿಸಿದ್ದರು. ಈ ಸಂದಭ ಎಸ್‌ಟಿ ಮಹಿಳೆಯರಿಗೆ ನಡೆಸಿದ ಫ್ಯಾಶನ್ ಡಿಸೈನಿಂಗ್ ತರಬೇತಿಯ ಪ್ರಮಾಣಪತ್ರಗಳನ್ನು ವಿತರಿಸಲಾಯಿತು. ಪಂಚಾಯತು ಉಪಾಧ್ಯಕ್ಷೆ ಗೀತಾ ಶೆಟ್ಟಿ, ಸ್ಥಾಯಿ ಸಮಿತಿ ಚೆಯರ್‌ಮೆನ್ ಅಹ್ಮದ್ ಅಲಿ, ಸದಸ್ಯ ವಿ.ಪಿ.ಅಬ್ದುಲ್ ಖಾದರ್, ರಮೇಶ್ […]

ಸೋಲಿನ ಬಗ್ಗೆ ನಿರಾಸೆ ಬೇಡ, ಪ್ರತಾಪಸಿಂಹ ನಾಯಕ್

Monday, February 29th, 2016
bjp Bantwal

ಬಂಟ್ವಾಳ: ಕಾರ್ಯಕರ್ತರು ವಿಶ್ವಾಸವನ್ನು ಬೆಳೆಸಿಕೊಂಡು, ಒಗ್ಗಟ್ಟಾಗಿ ಕೆಲಸ ಮಾಡಿಕೊಂಡು ಮುಂದಿನ ಚುನಾವಣೆಯನ್ನು ಎದುರಿಸಿ ಎಂದು ಬಿ.ಜೆ.ಪಿ ಜಿಲ್ಲಾಧ್ಯಕ್ಷ ಪ್ರತಾಪಸಿಂಹ ನಾಯಕ್ ಅವರು ಕರೆ ನೀಡಿದರು. ಅವರು ಬಿ.ಸಿರೋಡ್ ಬಿ.ಜೆ.ಪಿ ಕಛೇರಿಯಲ್ಲಿ ನಡೆದ ಸಜಿಪ ಮುನ್ನೂರು ಜಿ.ಪಂ. ಕ್ಷೇತ್ರದ ಕಾರ್ಯಕರ್ತರ ಅವಲೋಕನ ಸಭೆಯಲ್ಲಿ ಮಾತನಾಡಿದರು. ಸೋಲಿನ ಬಗ್ಗೆ ಗೊಂದಲ ಮತ್ತು ನಿರಾಸೆ ಬೇಡ ಮುಂದಿನ ಚುನಾವಣೆಯ ದೃಷ್ಟಿಯಿಂದ ಸೋಲನ್ನು ಸವಾಲಾಗಿ ಸ್ವೀಕರಿಸಿ ಗೆಲುವಿಗಾಗಿ ಶ್ರಮಿಸಿ ಎಂದು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಂಟ್ವಾಳ ಬಿಜೆಪಿ ಅಧ್ಯಕ್ಷ ಜಿ.ಆನಂದ ವಹಿಸಿದ್ದರು. ವೇದಿಕೆಯಲ್ಲಿ ಪಕ್ಷದ […]

ಮನುಷ್ಯ ಸಂಬಂಧ ವೃದ್ಧಿ ವರ್ತಮಾನದ ತುರ್ತು : ಡಾ. ಕೈರೋಡಿ

Monday, February 29th, 2016
Yuva Friends

ಬಂಟ್ವಾಳ: ಕಳೆದ ಎರಡು ದಶಕಗಳಿಂದೀಚೆಗೆ ಯಾಂತ್ರಿಕವಾಗಿ, ಸೌಲಭ್ಯ ಕೇಂದ್ರಿತವಾಗಿ ಸಾಕಷ್ಟು ಆಶಾದಾಯಕ ಬೆಳವಣಿಗೆಯಾಗಿದೆ. ಆದರೆ ಮನುಷ್ಯ ಮನುಷ್ಯನೊಂದಿಗೆ ಅರಿತು ಬೆರೆತು ಬದುಕುವ ವಾತಾವರಣ ಕ್ಷಿಣಿಸುತ್ತಿವೆ. ಸ್ವಾರ್ಥಪರ ಹಾಗೂ ಸಂಕುಚಿತ ಮನೋಭಾವ ಬಿತ್ತುವ ಸಂಗತಿಗಳೇ ವಿಜೃಂಭಿಸುತ್ತಿವೆ. ಎಂದು ಮೂಡುಬಿದಿರೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಪ್ರಾಧ್ಯಾಪಕ ಡಾ.ಯೋಗೀಶ್ ಕೈರೋಡಿ ನುಡಿದರು. ಅವರು ಬಂಟ್ವಾಳ ತಾಲೂಕಿನ ಕುಕ್ಕಿಪಾಡಿಯ ನೇಲ್ಯಕುವೇರಿನಲ್ಲಿ ಯುವ ಫ್ರೆಂಡ್ಸ್ ಬಳಗದ ವತಿಯಿಂದ ನಡೆದ ಸಾಂಸ್ಕೃತಿಕ ಉತ್ಸವವನ್ನು ಉದ್ಟಾಟಿಸಿ ಮಾತನಾಡುತ್ತಿದ್ದರು. ಭತ್ತದ ಕೃಷಿಯಲ್ಲಿ ಹಾಸು ಹೊಕ್ಕಾಗಿದ್ದ ಮನುಷ್ಯ ಭಾಂಧವ್ಯವಾಗಲಿ ಜನಪದ […]

ಸರ್ಕಾರದ ಇಚ್ಛಾಶಕ್ತಿ ಕೊರತೆ, ಉಪ್ಪು ನೀರು ಸೇವನೆಯಿಂದ ಮುಕ್ತರಾಗದ ಕಾಸರಗೋಡಿನ ಜನತೆ

Monday, February 29th, 2016
Salt water

ಕಾಸರಗೋಡು: ನಗರ ಹಾಗೂ ಆಸುಪಸಿನ ಐದು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜನತೆಗೆ ಶುದ್ಧ ಕುಡಿಯುವ ನೀರು ಪೂರೈಸುವ ಬಾವಿಕೆರೆ ಶಾಶ್ವತ ಅಣೆಕಟ್ಟು ಯೋಜನೆ ಮತ್ತೆ ಅತಂತ್ರ ಸ್ಥಿತಿಯತ್ತ ಸಾಗಿದೆ. ಗುತ್ತಿಗೆದಾರರು ಅಣೆಕಟ್ಟು ಕಾಮಗಾರಿಯನ್ನು ಅರ್ಧದಲ್ಲಿ ಕೈಬಿಟ್ಟು ತೆರಳಿರುವುದರಿಂದ ಈ ಅತಂತ್ರ ಸ್ಥಿತಿ ನಿರ್ಮಾಣವಾಗಿದೆ. ಇದೀಗ ಕಾಮಗಾರಿಯ ರೀ ಟೆಂಡರ್ ನಡೆಸಿ ಯೋಜನೆ ಪೂರ್ತಿಗೊಳಿಸುವಂತೆ ನೀರಾವರಿ ಖಾತೆ ಸಚಿವ ಪಿ.ಜೆ ಜೋಸೆಫ್ ನೀಡಿರುವ ಭರವಸೆ ಒಂದಷ್ಟು ಭರವಸೆಯನ್ನು ಹುಟ್ಟಿಸಿದ್ದರೂ, ಈ ವರ್ಷವೂ ಕಾಮಗಾರಿ ಪೂರ್ತಿಗೊಳ್ಳುವುದು ಅನಿಶ್ಚಿತಾವಸ್ಥೆಯಲ್ಲಿದೆ. ಯೋಜನೆ ಜಾರಿಗೊಳ್ಳಲಿರುವ […]

ತಡೆಗೋಡೆ ಒಡೆದು ನೀರು ನುಗ್ಗಿ ನೂರು ಎಕರೆ ಕೃಷಿ ಭೂಮಿ ನಾಶ

Monday, February 29th, 2016
wall collapse

ಉಪ್ಪಳ : ತಡೆಗೋಡೆ ಒಡೆದು ಕೃಷಿ ಸ್ಥಳಕ್ಕೆ ನೀರು ನುಗ್ಗಿ ಅಪಾರ ಹಾನಿ ಸಂಭವಿಸಿದೆ. ಪೈವಳಿಕೆ ಪಂಚಾಯತಿನ ಕುಡಾಲ್‌ಮೇರ್ಕಳದಲ್ಲಿ ನೂರು ಎಕರೆ ಕೃಷಿ ಸ್ಥಳ ನಾಶವಾಗಿದೆ. ದಶಕದ ಹಿಂದೆ ಕಿರು ನೀರಾವರಿ ಯೋಜನೆಯಂಗವಾಗಿ ನಿರ್ಮಿಸಿದ ತಡೆಗೋಡೆ ಒಡೆದು ನಾಲ್ಕು ವರ್ಷಗಳಾದರೂ ಅದನ್ನು ಪುನರ್ ನಿರ್ಮಿಸುವ ಬಗ್ಗೆ ಸಂಬಂಧಪಟ್ಟವರು ಯಾವುದೇ ಕ್ರಮ ಕೈಗೊಂಡಿಲ್ಲ. ಇದರಿಂದ ಸ್ಥಳೀಯರು ಸಂಕಷ್ಟ ಅನುಭವಿಸುತ್ತಿದ್ದಾರೆ. ಕೃಷಿಕರ, ಖಾಸಗಿ ವ್ಯಕ್ತಿಗಳ ಒಡೆತನದಲ್ಲಿರುವ ಗದ್ದೆಗಳಲ್ಲಿ ನಡೆಯುತ್ತಿದ್ದ ಪರಂಪರಾಗತ ಕೃಷಿಗೆ ತಡೆಯುಂಟಾಗಿದೆ. ತಡೆಗೋಡೆ ಒಡೆದ ಪರಿಣಾಮವಾಗಿ ತೋಡಿನ ಗತಿ […]