ನಮೋ ಅಭಿವೃದ್ದಿ ಮಂತ್ರದೊಂದಿಗೆ ವಿಮೋಚನಾ ಯಾತ್ರೆಗೆ ಚಾಲನೆ

Thursday, January 21st, 2016
Venkaiah Naidu Kasaragod

ಉಪ್ಪಳ: ಸರ್ವ ಧರ್ಮ ಸಹಿಷ್ಣುತೆಯ ಭಾರತ ಭುವಿಯನ್ನು ಸಮೃದ್ದವಾಗಿ ಬೆಳೆಸಿ ಭ್ರಷ್ಟಾಚಾರ ರಹಿತ,ಕೋಮುವಾದಗಳಿಲ್ಲದ ಶಾಂತ ಆಡಳಿತ ನೀಡಲು ಭಾರತೀಯ ಜನತಾ ಪಕ್ಷದಿಂದ ಮಾತ್ರ ಸಾಧ್ಯ.ಈ ಸತ್ಯವನ್ನು ಮರೆಮಾಚುವ ಯತ್ನಗಳು ಅವ್ಯಾಹತವಾಗಿ ನಡೆಯುತ್ತಿದ್ದರೂ,ಜನ ಸಾಮಾನ್ಯರಿಗೆ ಬಿಜೆಪಿಯ ಒಳನೋಟಗಳು ಅರ್ಥವಾಗುತ್ತಿದೆ.ಕಳೆದ5 ದಶಕಗಳಿಂದ ಕೇರಳವನ್ನು ಅಕ್ಷರಶಃ ದುರ್ಗಮ ಹಾದಿಗೊಯ್ದಿರುವ ಅಭಿವೃದ್ದಿಗೆ ಕಿಂಚಿತ್ ಬೆಲೆ ನೀಡದ ಎಡ-ಬಲ ರಂಗಗಳೆರಡೂ ಅಧಃ ಪತನದ ಹಾದಿ ತುಳಿಯುತ್ತಿದ್ದು,ಬದಲಾವಣೆಗೆ ಬಿಜೆಪಿಯನ್ನು ಬೆಂಬಲಿಸಿ ಎಂದು ಕೇಂದ್ರ ಸಚಿವ ವೆಂಕಯ್ಯ ನಾಯ್ಡು ಕರೆ ನೀಡಿದರು. ಎಲ್ಲರಿಗೂ ಅನ್ನ,ನೀರು,ಮಣ್ಣು,ಉದ್ಯೋಗ ಹಾಗೂ ಸಮಾನ […]

ಕಾಸರಗೋಡು ರೆಸ್ಟ್ ಹೌಸ್ ನೂತನ ಕಟ್ಟಡ ಉದ್ಘಾಟನೆ

Tuesday, January 19th, 2016
Rest House

ಕಾಸರಗೋಡು: ರೆಸ್ಟ್ ಹೌಸ್‌ನ(ವಿಶ್ರಾಂತಿ ಗೃಹ) ಮೂಲಭೂತ ಸೌಕರ್ಯ ಅಭಿವೃದ್ಧಿ ಪಡಿಸಲು ಬ್ಲಾಕೊಂದನ್ನು ನಿರ್ಮಿಸಲಾಗುವುದೆಂದು ಲೋಕೋಪಯೋಗಿ ಸಚಿವ ವಿ.ಕೆ.ಇಬ್ರಾಹಿಂ ಕುಂಞಿ ಹೇಳಿದರು. ಅವರು ಕಾಸರಗೋಡಿನ ಲೋಕೋಪಯೋಗಿ ಇಲಾಖೆಯ ರೆಸ್ಟ್ ಹೌಸ್‌ಗೆ ನೂತನವಾಗಿ ನಿರ್ಮಿಸಿದ ಕಟ್ಟಡವನ್ನು ಸೋಮವಾರ ಉದ್ಘಾಟಿಸಿ ಮಾತನಾಡಿದರು. ಪ್ರಯಾಣಿಕರ ಸಂಖ್ಯೆ ಅಧಿಕವಾಗಿರುವುದರಿಂದ ಲೋಕೋಪಯೋಗಿ ಇಲಾಖೆ ರೆಸ್ಟ್ ಹೌಸ್‌ನ ಸೌಕರ್ಯಗಳನ್ನು ಅಭಿವೃದ್ಧಿ ಪಡಿಸಲಾಗುತ್ತಿದೆ. 72 ಲಕ್ಷ ರೂ. ವೆಚ್ಚದಲ್ಲಿ ಈ ಕಟ್ಟಡವನ್ನು ನವೀಕರಿಸಲಾಗಿದೆ. ಕಾರ್ಯಕ್ರಮದಲ್ಲಿ ಶಾಸಕ ಎನ್.ಎ.ನೆಲ್ಲಿಕುನ್ನು ಅಧ್ಯಕ್ಷತೆ ವಹಿಸಿದರು. ಕಾಸರಗೋಡು ಲೋಕೋಪಯೋಗಿ ಕಟ್ಟಡ ವಿಭಾಗ ಅಸಿಸ್ಟೆಂಟ್ ಎಕ್ಸಿಕ್ಯೂಟೀವ್ […]

ಮಂಜೇಶ್ವರ ಗೋವಿಂದ ಪೈ ಸ್ಮಾರಕಕ್ಕೆ ವೀರಪ್ಪ ಮೊಯಿಲಿ ಭೇಟಿ

Tuesday, January 19th, 2016
veerappa Moily

ಮಂಜೇಶ್ವರ: ರಾಷ್ಟ್ರಕವಿ ಮಂಜೇಶ್ವರ ಗೋವಿಂದ ಪೈ ಸ್ಮಾರಕಕ್ಕೆ ಮಾಜಿ ಕೇಂದ್ರ ಸಚಿವ ಎಂ.ವೀರಪ್ಪ ಮೊಯಿಲಿ ಭಾನುವಾರ ಭೇಟಿ ನೀಡಿ ಕಾಮಗಾರಿಯನ್ನು ವೀಕ್ಷಿಸಿದರು. ಬಳಿಕ ಗೋವಿಂದ ಪೈ ನಿವಾಸದಲ್ಲಿ ನಡೆದ ಸಭೆಯಲ್ಲಿ ಸ್ಮಾರಕದ ಉದ್ಘಾಟನಾ ದಿನವನ್ನು ನಿಶದಚಯಿಸಲಾಯಿತು. ಫೆ.28 ರಂದು ಲೋಕಾರ್ಪಣೆಗೊಳ್ಳಲಿರುವ ಸ್ಮಾರಕದ ಅಂತಿಮ ಕಾಮಗಾರಿಯನ್ನು ಶೀಘ್ರದಲ್ಲಿ ಪೂರ್ತಿಗೊಳಿಸಲು ನಿರ್ಮಿತಿ ಕೇಂದ್ರದವರಲ್ಲಿ ಕೇಳಿಕೊಳ್ಳಲಾಯಿತು. ಸಭೆಯಲ್ಲಿ ಗೋವಿಂದ ಪೈ ಸ್ಮಾರಕ ಟ್ರಸ್ಟ್ ಅಧ್ಯಕ್ಷ ವೀರಪ್ಪ ಮೊಯಿಲಿ,ಕಾಸರಗೋಡು ಜಿಲ್ಲಾಧಿಕಾರಿ ಮುಹಮ್ಮದ್ ಸಗೀರ್,ಟ್ರಸ್ಟ್ ಸದಸ್ಯರಾದ ಡಾ.ಡಿ.ಕೆ.ಚೌಟ,ಪ್ರೊ.ಬಿ.ವಿವೇಕ ರೈ,ಡಾ.ರಮಾನಂದ ಬನಾರಿ,ತೇಜೋಮಯ,ಎಂ.ಜೆ.ಕಿಣಿ,ಸುಭಾಶ್ಚಂದ್ರ,ಕೆ.ಆರ್ ಜಯಾನಂದ ಉಪಸ್ಥಿತರಿದ್ದರು.

ಕಾಸರಗೋಡು ಜಿಲ್ಲಾ ಬಿಜೆಪಿ ಸಮಿತಿ ಪುನರ್ ರಚನೆ: ಶ್ರೀಕಾಂತ್ ಜಿಲ್ಲಾಧ್ಯಕ್ಷ

Tuesday, January 19th, 2016
Kasaragod BJP

ಕಾಸರಗೋಡು: ಬಿಜೆಪಿ ಜಿಲ್ಲಾ ಸಮಿತಿಯನ್ನು ಪುನರ್ ರಚಿಸಲಾಗಿದ್ದು,ಕಾಸರಗೋಡು ಜಿಲ್ಲಾಧ್ಯಕ್ಷರಾಗಿ ಜಿಲ್ಲಾ ಪಂಚಾಯತ್ ಸದಸ್ಯ,ಯುವ ನಾಯಕ ನ್ಯಾಯವಾದಿ ಶ್ರೀಕಾಂತ್ ರನ್ನು ನೇಮಿಸಲಾಗಿದೆ. ರಾಜ್ಯ ಸಮಿತಿ ಸದಸ್ಯರಾಗಿದ್ದ ನಗರಸಭಾ ಕೌನ್ಸಿಲರ್ ಪಿ.ರಮೇಶ್ ಹಾಗೂ ಆರ್‌ಎಸ್‌ಎಸ್ ಕಣ್ಣೂರು ವಿಭಾಗ ಕಾರ್ಯಕಾರಿ ಸಮಿತಿ ಸದಸ್ಯ ಎ.ವೇಲಾಯುಧನ್ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾಗಿ ನಿಯುಕ್ತರಾಗಿದ್ದಾರೆ. ಈ ವೇಳೆ ಬಿಜೆಪಿ ರಾಜ್ಯ ಸಮಿತಿಯನ್ನೂ ಪುನರ್ ಸಂಘಟಿಸಲಾಗಿದ್ದು, ನಾಲ್ವರು ಪ್ರಧಾನ ಕಾರ್ಯದರ್ಶಿಗಳು, ಒಂಭತ್ತು ಉಪಾಧ್ಯಕ್ಷರುಗಳು ಮತ್ತು 42 ಮಂದಿ ಪದಾಧಿಕಾರಿಗಳನ್ನು ರಾಜ್ಯಾಧ್ಯಕ್ಷ ಕುಮ್ಮನಂ ರಾಜಶೇಖರನ್ ಘೋಷಿಸಿದ್ದಾರೆ. ಕೆ.ಸುರೇಂದ್ರನ್,ಎಎನ್ ರಾಧಾಕೃಷ್ಣನ್,ಎಂ.ಟಿ.ರಮೇಶ್,ಶೋಭಾ […]

ಆಂಧ್ರದಲ್ಲಿ ಭೀಕರ ರಸ್ತೆ ಅಪಘಾತ: ಒಂದೇ ಕುಟುಂಬದ ಐವರ ಸಹಿತ 6 ಮಂದಿಯ ದುರ್ಮರಣ

Tuesday, January 19th, 2016
Andra Accident

ಕಾಸರಗೋಡು: ಆಂಧ್ರಪ್ರದೇಶದಲ್ಲಿ ಸೋಮವಾರ ಮುಂಜಾನೆ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಮುಳ್ಳೇರಿಯಾ ಸಮೀಪದ ದೇಲಂಪಾಡಿ ಬಳಿಯ ನಿವಾಸಿಗಳಾದ ಒಂದೇ ಕುಟುಂಬದ ಐವರ ಸಹಿತ ಆಂಧ್ರ ನಿವಾಸಿ ಮೃತಪಟ್ಟ ದಾರುಣ ಘಟನೆ ನಡೆದಿದೆ. ದೇಲಂಪಾಡಿ ಸಮೀಪದ ಊಜಮಪಾಡಿ ನಿವಾಸಿಗಳಾದ ದೇವಸ್ಯ(65),ಪತ್ನಿ ತ್ರೇಸಿ(62),ಇವರ ಪುತ್ರ ರೋಬಿನ್(38),ಪತ್ನಿ ಬಿಸ್‌ಮೋಳ್(29) ಹಾಗೂ ನಾಲ್ಕು ತಿಂಗಳ ಮಗು ಅಪಘಾತದಲ್ಲಿ ಮೃತರಾದರು.ಕಾರು ಚಾಲಕ ಆಂಧ್ರ ನಿವಾಸಿ ಪವನ್ ಎಂಬವರೂ ಘಟನೆಯಲ್ಲಿ ಮೃತರಾಗಿದ್ದಾರೆ. ಊಜಂಪಾಡಿಯ ದೇವಸ್ಯ,ಪತ್ನಿ ತ್ರೇಸಿ ಹಾಗೂ ಇವರ ಇನ್ನೋರ್ವ ಪುತ್ರ ರಿನಿಶ್ ಕಳೆದ 30 […]

ಕಣಿಪುರ ಜಾತ್ರೆ ಸಂಪನ್ನ ಬಣ್ಣದ ಲೋಕದಲ್ಲಿ ತೇಲಾಡಿಸಿದ ಕುಂಬಳೆ ಬೆಡಿ ಮಹೋತ್ಸವ

Tuesday, January 19th, 2016
Kumble Bedi

ಕುಂಬಳೆ : ಕಣಿಪುರ ಜಾತ್ರೆಯ ಇತಿಹಾಸ ಪ್ರಸಿದ್ಧ ಕುಂಬಳೆ ಬೆಡಿ ಮಹೋತ್ಸವವು ಸಹಾಸ್ರಾರು ಭಕ್ತ ಜನಸಾಗರದ ಮಧ್ಯೆ ಭಾನುವಾರ ರಾತ್ರಿ ನಡೆಯಿತು. ರಾತ್ರಿ ದೇವರ ಬಲಿ ವಾದ್ಯಘೋಷದ ಮೆರವಣಿಗೆಯಲ್ಲಿ ಬೆಡಿಕಟ್ಟೆಗೆ ತೆರಳಿ ದೇವರು ಬೆಡಿಕಟ್ಟೆಯಲ್ಲಿ ವಿರಾಜಮಾನವಾದ ಬಳಿಕ ಸಂಪ್ರದಾಯದಂತೆ ದೇವರ ದೀಪದಿಂದ ಹಣತೆಯಲ್ಲಿ ನೀಡಿದ ದೀಪದಲ್ಲಿ ಬೆಡಿಗೆ ಬೆಂಕಿ ಹಚ್ಚಲಾಯಿತು. ಬಳಿಕ ಸುಮಾರು ಒಂದು ಗಂಟೆಗಳ ಕಾಲ ಬಾನಂಗಳದಲ್ಲಿ ಬಣ್ಣದ ಚಿತ್ತಾರ ಮೂಡಿಸಿದ ಬೆಡಿ ಪ್ರದರ್ಶನ ಪ್ರೇಕ್ಷಕರನ್ನು ಮಂತ್ರ ಮುಗ್ಧಗೊಳಿಸಿತು. ವಿವಿಧ ಕಲರ್ ಔಟ್‌ಗಳು, ಚೈನೀಸ್ ಔಟ್‌ಗಳು […]

ಪೋಲಿಯೋ ಲಿಸಿಕಾ ಕಾರ್ಯಕ್ರಮ ಯಶಸ್ವಿ

Tuesday, January 19th, 2016
Kerala polio drops

ಕಾಸರಗೋಡು: ಸಂಪೂರ್ಣ ಪೋಲಿಯೋ ಮುಕ್ತ ರಾಷ್ಟ್ರವಾಗಿಸುವ ಗುರಿಯೊಂದಿಗೆ ನಡೆಸಲಾದ ಪ್ರಸಕ್ತ ಸಾಲಿನ ಮೊದಲ ಪೋಲಿಯೋ ರೋಗ ಪ್ರತಿರೋಧ ಕಾರ್ಯಕ್ರಮದಂಗವಾಗಿ ಭಾನುವಾರ ಜಿಲ್ಲೆಯಾದ್ಯಂತ 5 ವರ್ಷಗಳಿಗಿಂತ ಕೆಳಗಿನ ಹರೆಯದ ಮಕ್ಕಳಿಗೆ ಲಸಿಕೆ ನೀಡಲಾಯಿತು. ಭಾನುವಾರ ಬೆಳಿಗ್ಗೆ 8 ಗಂಟೆಗೆ ಆರಂಭಗೊಂಡ ಲಸಿಕೆ ವಿತರಣಾ ಕಾರ್ಯಕ್ರಮ ಸಂಜೆ5 ಗಂಟೆಯ ತನಕ ಯಶಸ್ವಿಯಾಗಿ ನಡೆಯಿತು.ಜಿಲ್ಲೆಯ 1997 ಬೂತ್ ಗಳಲ್ಲಿ ಲಸಿಕೆ ವಿತರಿಸಲಾಯಿತು.ಒಟ್ಟು 1,20,734 ಮಂದಿ ಮಕ್ಕಳಿಗೆ ಲಸಿಕೆ ನೀಡಲಾಗಿದೆಯೆಂದು ಪ್ರಾಥಮಿಕ ಅಂಕಿಅಂಶಗಳು ತಿಳಿಸಿವೆ.119 ಸಂಚಾರಿ ಬೂತ್ ಗಳ ಮೂಲಕವೂ ಲಸಿಕಾ ವಿತರಣೆಗೆ […]

ಕಾಸರಗೋಡು ಹೋಟೆಲ್ ಗಳಲ್ಲಿ ಹಳಸಿದ ಆಹಾರ, ಆರೋಗ್ಯ ಅಧಿಕಾರಿಗಳ ದಾಳಿ

Sunday, January 17th, 2016
hotel raid

ಕಾಸರಗೋಡು: ಕಾಸರಗೋಡು ನಗರ ಸಭಾ ವ್ಯಾಪ್ತಿಯ ಹೋಟೆಲ್ ಗಳಿಗೆ ಮುನ್ಸಿಪಲ್ ಆರೋಗ್ಯ ವಿಭಾಗದ ಅಧಿಕೃತರು ಶುಕ್ರವಾರ ಮಿಂಚಿನ ಧಾಳಿ ನಡೆಸಿ ಹಲವೆಡೆಗಳಿಂದ ಹಳಸಿದ ಆಹಾರ ಹಾಗೂ ನೈರ್ಮಲ್ಯದ ತೀವ್ರ ಕೊರತೆಯನ್ನು ಕಂಡು ನೊಟೀಸ್ ಜಾರಿಗೊಳಿಸಿದರು. ಶುಕ್ರವಾರ ಬೆಳಿಗ್ಗೆ 7.30 ರಿಂದ 9ಗಂಟೆಯ ವರೆಗೆ ನಗರದ ಕರಂದಕ್ಕಾಡು,ಕೆಎಸ್‌ಆರ್‌ಟಿಸಿ ನಿಲ್ದಾಣ ಪ್ರದೇಶ,ಹಳೆ ಬಸ್ ನಿಲ್ದಾಣ ಪರಿಸರ,ವಿದ್ಯಾನಗರ ಮೊದಲಾದ ಪ್ರದೇಶಗಳ ಹೋಟೇಲ್ ಗಳಿಗೆ ಧಾಳಿ ನಡೆಸಿ ಪರಿಶೀಲನೆ ನಡೆಸಿದರು.10 ಹೋಟೆಲ್ ಗಳು ತೀವ್ರ ಕಳವಳಕಾರಿ ಕಳಪೆ ಗುಣಮಟ್ಟದ ನಿರ್ವಹಣೆಯನ್ನು ಗುರುತಿಸಿ ನೊಟೀಸ್ […]

ಎಂಡೋ ಸಂತ್ರಸ್ಥ ಪ್ರದೇಶಗಳಿಗೆ ಭೇಟಿ ನೀಡಿದ ಪಿಣರಾಯಿ ವಿಜಯನ್

Sunday, January 17th, 2016
endo victims

ಪೆರ್ಲ: ಸಿಪಿಎಂ ಪ್ಯಾಲಿಟ್ ಬ್ಯೂರೋ ಸದಸ್ಯ,ರಾಜ್ಯ ಕಾರ್ಯದರ್ಶಿ ಪಿಣರಾಯಿ ವಿಜಯನ್ ಎಂಡೋ ಸಂತ್ರಸ್ಥ ಪ್ರದೇಶಗಳಾದ ಎಣ್ಮಕಜೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಪಡ್ರೆ, ಸ್ವರ್ಗ, ವಾಣೀನಗರ, ಬೋವಿಕ್ಕಾನ ಬಡ್ಸ್ ಕೇಂದ್ರಗಳ ಸಹಿತ ವಿವಿಧ ಪ್ರದೇಶಗಳನ್ನು ಗುರುವಾರ ಸಂದರ್ಶನ ನಡೆಸಿದರು. ತಮ್ಮ ಭೇಟಿಯ ಆರಂಭದಲ್ಲಿ ಪೆರ್ಲ ಕನ್ನಟಿಕಾನ ಬಡ್ಸ್ ಶಾಲೆಗೆ ಭೇಟಿ ನೀಡಿದ ಅವರು ಅಲ್ಲಿನ ಭಿನ್ನಚೇತನ ಮಕ್ಕಳಿಗೆ ಹಣ್ಣು ಹಂಪಲು ವಿತರಿಸಿದರು.ಬಳಿಕ ಇತ್ತೀಚೆಗೆ ನಿಧನರಾದ ಸ್ವರ್ಗ ಬೈರಡ್ಕದ ಸಿಪಿಐ ನಾಯಕ ಎಂ.ಕೆ.ಬಾಲಕೃಷ್ಣನ್ ರ ಮನೆಗೆ ಭೇಟಿ ನೀಡಿ ಕುಟುಂಬ […]

ಚಟ್ಟಂಚಾಲ್‌ನಲ್ಲಿ ಅಗ್ನಿ ಅನಾಹುತ: ಪೊಲೀಸ್ ವಶದಲ್ಲಿದ್ದ ವಾಹನಗಳಿಗೆ ಕಿಚ್ಚು

Sunday, January 17th, 2016
fire mishap

ಕಾಸರಗೋಡು : ಚಟ್ಟಂಚಾಲ್ ರಾಷ್ಟ್ರೀಯ ಹೆದ್ದಾರಿಯ ಇಕ್ಕೆಲಗಳ ಡಂಬಿಂಗ್ ಮೈದಾನದಲ್ಲಿ ಶುಕ್ರವಾರ ಉಂಟಾದ ಅಗ್ನಿಅನಾಹುತದಲ್ಲಿ ವಿವಿಧ ಪ್ರಕರಣಗಳಲ್ಲೊಳಗೊಂಡ ಮೂವತ್ತರಷ್ಟು ವಾಹನಗಳು ಅಗ್ನಿಗಾಹುತಿಯಾಗಿವೆ. ವಿದ್ಯಾನಗರ ಪೊಲೀರು ಸ್ವಯಂ ಕೇಸು ದಾಖಲಿಸಿ ತನಿಖೆ ಆರಂಭಿಸಿದ್ದಾರೆ. ಶುಕ್ರವಾರ ಮಧ್ಯಾಹ್ನ1.30 ಕ್ಕೆ ಗ್ರೌಂಡ್‌ನ ಒಂದು ಭಾಗದಲ್ಲಿ ಅಗ್ನಿನಾಹುತ ಉಂಟಾಗಿರುವುದು ನಾಗರಿಕರ ಗಮನಕ್ಕೆ ಬಂದಿತ್ತು. ನಂದಿಸಲು ಪ್ರಯತ್ನವೂ ನಡೆದಿತ್ತು. ಆದರೆ ಗಾಳಿಗೆ ಬೆಂಕಿ ಹರಡಿರುವುದರಿಂದ ಕಾಸರಗೋಡಿನ ಲೀಡಿಂಗ್ ಫಯರ್‌ಮ್ಯಾನ್ ಕೆ. ಸತೀಶನ್ ಅವರ ನೇತೃತ್ವದಲ್ಲಿ ಕಾಸರಗೋಡಿನಿಂದ ಎರಡು ಯೂನಿಟ್ ಹಾಗೂ ಕಾಞಂಗಾಡ್‌ನಿಂದ ಒಂದು ಯೂನಿಟ್ […]