ಕಾರ್ಕಳದ ಬೆಳುವಾಹಿಯಲ್ಲಿ ಆರಂಭಗೊಂಡ ಚಿಟ್ಟೆಪಾರ್ಕ್
Sunday, August 18th, 2013ಮಂಗಳೂರು : ಕಾರ್ಕಳದ ಬೆಳುವಾಹಿಯಲ್ಲಿ ಸಮೀಪ ಚಿಟ್ಟೆಗಳಿಗಾಗಿ ನಿರ್ಮಿಸಲ್ಪಟ್ಟ ಚಿಟ್ಟೆಪಾರ್ಕನ್ನು ಆಗಸ್ಟ್ 18ರಂದು ಶಾಸಕರಾದ ನಳಿನ್ ಕುಮಾರ್ ಕಟೀಲ್ ರವರು ಉದ್ಘಾಟಿಸಿದರು. ನಂತರ ಮಾರ್ತಾಡಿ ಪರಿಸರ ಮಾಲಿನ್ಯದಿಂದ ಚಿಟ್ಟೆಗಳು ನಾಶವಾಗುತ್ತಿವೆ.ಈ ಚಿಟ್ಟೆಪಾರ್ಕ್ ಚಿಟ್ಟೆಗಳಿಗೆ ಆಶ್ರಯತಾನವಾಗಿದೆ.ನಗರಪ್ರದೇಶದ ಜನರಿಗೆ ಮತ್ತು ಪ್ರವಾಸಿಗರಿಗೆ ಚಿಟ್ಟೆಗಳನ್ನು ವಿಕ್ಷೀಸಲು ಅನುಕೂಲವಾಗುತ್ತದೆ ಎಂದರು. ಬಳಿಕ ಸಮ್ಮಿಲನ್ ಶೆಟ್ಟಿ ಮಾತಾಡಿ ಇದುವರೆಗೆ ಸುಮಾರು 113 ಚಿಟ್ಟೆ ಪ್ರಭೇದಗಳು ಪತ್ತೆಯಾಗಿದೆ. ಪಶ್ಚಿಮ ಘಟ್ಟ ತಪ್ಪಲಿನ,ಕಾಂತವರ ಬಳಿ ಇರುವ ಈ ಪಾರ್ಕ್ ಸುಮಾರು 7.35 ಎಕ್ರೆಯಲ್ಲಿ ಸ್ವಂತ ಜಾಗದಲ್ಲಿ ನಿರ್ಮಿಸಲಾಗಿದೆ. […]