[1]ಮಂಗಳೂರು : ದುಬೈಯಿಂದ ಮಂಗಳೂರಿಗೆ ಬಂದಿದ್ದ ಕಾಸರಗೋಡು ತ್ರಿಕಾರಿಪುರ ನಿವಾಸಿ ಮಹಮ್ಮದ್ ಅಶ್ರಫ್ ಎಂಬಾತ ನಾಪತ್ತೆಯಾದ ಬಗ್ಗೆ ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಕಾಸರಗೋಡು ತ್ರಿಕ್ಕಾರಿಪುರದ ಮುಹಮ್ಮದ್ ಕುಂಞಿ ಎಂಬವರ ಪುತ್ರ ಮುಹಮ್ಮದ್ಅಶ್ರಫ್ (24) ಎಂಬವರು ಮಾರ್ಚ್ 21ರಂದು ದುಬೈಯಿಂದ ಮಂಗಳೂರಿಗೆ 12:30 ಗಂಟೆಗೆ ತಲುಪಿ ಮಂಗಳೂರು ಸ್ಟೇಟ್ ಬ್ಯಾಂಕ್ ಬಳಿಯ ಕಾಯಿನ್ ಬಾಕ್ಸ್ನಿಂದ ತನ್ನ ಮನೆಗೆ ದೂರವಾಣಿ ಕರೆ ಮಾಡಿ ತಾನು ದುಬೈಯಿಂದ ಬಂದಿದ್ದಾಗಿ ಮತ್ತು ಬೆಂಗಳೂರಿನಲ್ಲಿರುವ ಮುನೀಫ್ ಎಂಬವರ ಮನೆಗೆ ಹೋಗುವುದಾಗಿ ತಿಳಿಸಿದ್ದಾರೆ.
ಆದರೆ ಮುಹಮ್ಮದ್ ಅಶ್ರಫ್ ಈವರೆಗೆ ತನ್ನ ಮನೆಗೂ ಹೋಗದೆ ಗೆಳೆಯನ ಮನೆಯಾದ ಬೆಂಗಳೂರಿಗೂ ಹೋಗದೆ ನಾಪತ್ತೆಯಾಗಿದ್ದಾನೆ. ಉದ್ಯೋಗ ಅರಸಲು ಒಂದು ತಿಂಗಳ ಹಿಂದೆ ವಿಸಿಟಿಂಗ್ ವಿಸಾದಲ್ಲಿ ದುಬೈಗೆ ಹೋಗಿದ್ದ ಅಶ್ರಫ್ ಮಾರ್ಚ್ 21ರಂದು ಹಿಂದಿರುಗಿದ್ದರು ಎಂದು ಹೇಳಲಾಗಿದೆ. ಮುಹಮ್ಮದ್ಅಶ್ರಫ್ ಇಂಗ್ಲೀಷ್, ಹಿಂದಿ ಹಾಗು ಮಲಯಾಳಿ ಭಾಷೆ ಬಲ್ಲವರಾಗಿದ್ದಾರೆ.