[1]ಕಾಸರಗೋಡು : ರಾಷ್ಟ್ರೀಯ ಹೆದ್ದಾರಿಯ ಮೊಗ್ರಾಲ್ ಪುತ್ತೂರು ಪೇಟೆಯಲ್ಲಿ ಗುರುವಾರ ಸಂಜೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಬೈಕ್ ಸವಾರರಿಬ್ಬರು ಮೃತಪಟ್ಟಿದ್ದು, ನಾಲ್ವರು ಗಾಯಗೊಂಡಿದ್ದಾರೆ. ಮೃತರನ್ನು ಮೊಗ್ರಾಲ್ ಪುತ್ತೂರು ಕೆ.ಕೆ. ರಸ್ತೆಯ ಕುನ್ನಿಲ್ನ ಸಾದಿಕ್(19) ಮತ್ತು ಕುನ್ನಿಲ್ ಸಬೀನಾ ಮಂಝಿಲ್ನ ಸಮೀರ್ ಆಸಿಫ್ (20) ಎಂದು ಗುರುತಿಸಲಾಗಿದೆ.
ಆಟೊ ಪ್ರಯಾಣಿಕರಾದ ಮುಹಮ್ಮದ್ ಎಂಬವರ ಪುತ್ರಿ ಡಾನಿಯಾ ಗಂಭೀರ ಗಾಯ ಗೊಂಡಿದ್ದು, ಮಂಗಳೂರಿನ ಆಸ್ಪತ್ರೆಗೆ ದಾಖಲಿಸ ಲಾಗಿದೆ. ಉಳಿದ ಪ್ರಯಾ ಣಿಕರಾದ ಅಬ್ದುಲ್ ಖಾದರ್ ಎಂಬವರ ಪತ್ನಿ ಮರಿಯಾ, ಪುತ್ರ ಅಬ್ಬಾಸ್ ಎಂಬವರ ಪತ್ನಿ ಆಯಿಶಾ ಹಾಗೂ ಆಟೊ ಚಾಲಕ ಕುಂಬಳೆ ಕೊಡ್ಯಮ್ಮೆಯ ಅಬ್ದುಲ್ ಖಾದರ್ ಗಾಯಗೊಂಡವರಾಗಿದ್ದಾರೆ.
ಆಸಿಫ್ ತನ್ನ ಸ್ನೇಹಿತ ಸಾದಿಕ್ ನೊಂದಿಗೆ ಮನೆಗೆ ಮರಳುತ್ತಿದ್ದಾಗ ಕುಂಬಳೆ ಕಡೆಗೆ ತೆರುಳುತ್ತಿದ್ದ ಆಟೊ ಢಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿದೆ. ತೀವ್ರ ಗಾಯಗೊಂಡ ಸಾದಿಕ್ನನ್ನು ಕಾಸರಗೋಡು ಮತ್ತು ಆಸಿಫ್ನನ್ನು ಮಂಗಳೂರು ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಮೃತಪಟ್ಟ ಸಮೀರ್ ಆಸಿಫ್ ಮೊಗ್ರಾಲ್ ಪುತ್ತೂರು ಕುನ್ನಿಲ್ನ ಯಂಗ್ ಚಾಲೆಂಜರ್ಸ್ ಫುಟ್ಬಾಲ್ ಕ್ಲಬ್ನ ನಾಯಕ ಹಾಗೂ ಗೋಲ್ ಕೀಪರ್ ಆಗಿದ್ದರು. ಗುರುವಾರ ಸಂಜೆ ಮೊಗರ್ನಲ್ಲಿ ಫುಟ್ಬಾಲ್ ಆಟವಾಡಿ ಬೈಕ್ನಲ್ಲಿ ಹಿಂದಿರುಗುತ್ತಿದ್ದಾಗ ಈ ಅಪಘಾತ ಸಂಭವಿಸಿದೆ.